ಪತ್ರಿಕಾ ಪ್ರಕಟಣೆ
ದಿನಾಂಕ: 19-04-2021
ಜೂಜಾಡುತ್ತಿದ್ದ
ಮೂವರ ಬಂಧನ,
3,700/-ನಗದು ವಶ:
ದಿನಾಂಕ: 18-04-2021 ರಂದು ಸಂಜೆ 4-15 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಹಳೇಬೀಡು ಹೋಬಳಿ, ಹಳೇಬೀಡು ಮಾಕರ್ೆಟ್ ಆರವಣದಲ್ಲಿ ಜೂಜಾಡುತ್ತಿದ್ದಾರೆಂದು ಶ್ರೀ ಗಿರಿಧರ್, ಪಿಎಸ್ಐ ಹಳೇಬೀಡು ಪೊಲೀಸ್ ಠಾಣೆ. ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಶ್ರೀನಿವಾಸ ಬಿನ್ ಗೋವಿಂದೇಗೌಡ, 59 ವರ್ಷ, 2) ಮಧು ಬಿನ್ ಅಜ್ಜಪ್ಪ, 3) ಸುರೇಶ್ ಬಿನ್ ಅಣ್ಣಯ್ಯ, 42 ವರ್ಷ, ಮೂವರು ಹಳೇಬೀಡು ಟೌನ್ ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 3,700/- ನಗದನ್ನು ಅಮಾನತ್ತುಪಡಿಸಿಕೊಂಡು ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಮನೆ ಬೀಗ ಮುರಿದು 60 ಸಾವಿರ ಬೆಲೆಯ
ಚಿನ್ನಾಭರಣ ಕಳವು:
ದಿನಾಂಕ: 17-04-2021 ರಂದು ರಾತ್ರಿ 10-00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಶಾಂತಿಗ್ರಾಮ ಹೋಬಳಿ, ಶಾಂತಿಗ್ರಾಮ ಕಾಲೋನಿ ವಾಸಿ ಶ್ರೀ ಕೇಶವಯ್ಯ, ರವರು ಮನೆಗೆ ಬೀಗ ಹಾಕಿಕೊಂಡು ಮಗ ಮನೆಗೆ ಹೋಗಿದ್ದು, ದಿನಾಂಕ: 18-04-2021 ರಂದು ಬೆಳಿಗ್ಗೆ 6-00 ಗಂಟೆಗೆ ಎದ್ದು ನೋಡಲಾಗಿ ಯಾರೋ ಕಳ್ಳರು ಮನೆಯ ಬಾಗಿಲ ಬೀಗವನ್ನು ಮುರಿದು ಒಳಪ್ರವೇಶಿಸಿ, ಬೀರುವಿನಲ್ಲಿಟ್ಟಿದ್ದ 60 ಸಾವಿರ ಬೆಲೆಯ 1) 6 ಗ್ರಾಂ ತೂಕದ ಒಂದು ಜೊತೆ ಚಿನ್ನದ ಜುಮ್ಕ 2) 6 ಗ್ರಾಂ ತೂಕದ ಒಂದು ಜೊತೆ ಚಿನ್ನದ ಮಾಟಿ 3 ಗ್ರಾಂ ತೂಕದ ಚಿನ್ನದ ಉಂಗುರಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಹಾಗೂ ಪತ್ತೆಮಾಡಿಕೊಡಬೇಕೆಂದು ಶ್ರೀ ಕೇಶವಯ್ಯ, ರವರು ದಿನಾಂಕ: 18-04-2021 ರಂದು ಕೊಟ್ಟ ದೂರಿನ ಮೇರೆಗೆ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.
90 ಸಾವಿರ ಬೆಲೆಯ 3 ಮೋಟಾರ್ ಕಳವು:
ದಿನಾಂಕ: 13-04-2021 ರಂದು ಸಂಜೆ 6-00 ಗಂಟೆ ಸಮಯದಲ್ಲಿ ಆಲೂರು ತಾಲ್ಲೂಕು, ಪಾಳ್ಯ ಹೋಬಳಿ, ಮುರುಡೂರು ಗ್ರಾಮದ ವಾಸಿ ಶ್ರೀ ತಮ್ಮಣ್ಣಗೌಡ,
ರವರ ಬಾಬ್ತು ಗದ್ದೆಗೆ ನೀರು ಹಾಯಿಸಲು 5 ಹೆಚ್ಪಿಯ ಡಿಸೇಲ್ ಮೋಟಾರ್ನ್ನಿಟ್ಟುಕೊಂಡಿದ್ದು, ದಿನಾಂಕ: 14-04-2021 ರಂದು ಬೆಳಿಗ್ಗೆ ಹೋಗಿ
ನೋಡಲಾಗಿ ಸುಮಾರು 90,000/- ಬೆಲೆಯ 3 ಮೋಟಾರ್ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಹಾಗೂ
ಪತ್ತೆಮಾಡಿಕೊಡಬೇಕೆಂದು ಶ್ರೀ ತಮ್ಮಣ್ಣಗೌಡ, ರವರು ದಿನಾಂಕ: 18-04-2021 ರಂದು ಕೊಟ್ಟ ದೂರಿನ ಮೇರೆಗೆ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ
ತನಿಖೆಯಲ್ಲಿರುತ್ತೆ.
No comments:
Post a Comment