* * * * * * HASSAN DISTRICT POLICE

Thursday, January 16, 2020

ಹಾಸನ ಜಿಲ್ಲಾ ಪೊಲೀಸ್ ಇಲಾಖೆಯ ಪತ್ರಿಕಾ ಪ್ರಕಟಣೆ ದಿನಾಂಕ: 16-01-2020




     ಪತ್ರಿಕಾ ಪ್ರಕಟಣೆ                 ದಿನಾಂಕ: 16-01-2020

ಯಾವುದೋ ವಾಹನ ಡಿಕ್ಕಿ, ವ್ಯಕ್ತಿ ಸಾವು:
     ದಿನಾಂಕ: 15-01-2020 ರಂದು ಸಂಜೆ 5-00 ಗಂಟೆ ಸಮಯದಲ್ಲಿ ಹೊಲೆನರಸೀಪುರ ತಾಲ್ಲೂಕು, ಹಳೇಕೋಟೆ ಹೋಬಳಿ, ಕಡವಿನಕೋಟೆ ಗ್ರಾಮದ ವಾಸಿ ಶ್ರೀ ರಾಜೇಗೌಡ, ರವರ ಬಾಬ್ತು ಕೆಎ-13, ಎಲ್ 1382 ರ ಬಜಾಜ್ ಬಾಕ್ಸರ್ ಬೈಕ್ನಲ್ಲಿ ಹೊಳೆನರಸೀಪುರಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ವಾಪಸ್ ಮನೆಗೆ ಹೋಗಲು ಹೊಳೆನರಸೀಪುರ ತಾಲ್ಲೂಕು, ಹಳೇಕೋಟೆ ಹೋಬಳಿ, ಹಾಸನ-ಮೈಸೂರು ರಸ್ತೆ, ಕೆ.ಇ.ಬಿ. ಕ್ರಾಸ್, ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಯಾವುದೋ ವಾಹನದ ಚಾಲಕ ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ರಾಜೇಗೌಡ, ರವರಿಗೆ ತೀವ್ರ ಸ್ವರೂಪದ ರಕ್ತಗಾಯವಾಗಿದ್ದು, ಚಿಕಿತ್ಸೆಗಾಗಿ ಹೊಳೆನರಸೀಪುರ ಸಕರ್ಾರಿ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಕೆರೆದುಕೊಂಡು ಹೋಗುತ್ತಿದ್ದಾಗ ಶ್ರೀ ರಾಜೇಗೌಡ ಬಿನ ಸ್ವಾಮಿಗೌಡ, 58 ವರ್ಷ, ಕಡವಿನಕೋಟೆ ಗ್ರಾಮ, ಹಳೇಕೊಟೆ ಹೋಬಳಿ, ಹೊಳೆನರಸೀಪುರ ತಾಲ್ಲೂಕು. ರವರು ಮಾರ್ಗ ಮಧ್ಯೆ ಮೃತಪಟ್ಟಿರುತ್ತಾರೆಂದು ಸಂಬಂಧಿಕರಾದ ಶ್ರೀ ಗಣೇಶ್, ರವರು ಕೊಟ್ಟ ದೂರಿನ ಮೇರೆಗೆ  ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ದನ ಮೇಯಿಸುವ ವಿಚಾರಕ್ಕೆ ವ್ಯಕ್ತಿಯ ಮೆಲೆ ಹಲ್ಲೆ:
     ದಿನಾಂಕ: 09-01-2020 ರಂದು ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಬಾಣಾವರ ಹೋಬಳಿ, ಕೊಂಡಬಾಗಿಲು ಗ್ರಾಮದ ವಾಸಿ ಶ್ರೀ ಶೇಖರಪ್ಪ, ರವರು ದನ ಮೇಯಿಸಲು ಹೋದಾಗ ಅದೇ ಗ್ರಾಮದ ವಾಸಿ ಶ್ರೀ ನವೀನ್ ಮತ್ತು ವಿನೋಧ್, ರವರುಗಳು ದನ ಮೇಯಿಸಲು ಬಿಡದೇ ಅವಾಚ್ಯ ಶಬ್ಧಗಳಿಂದ ನಿಂದಿಸಿ, ದೊಣ್ಣೆಯಿಂದ ಹೊಡೆದು ರಕ್ತಗಾಯಪಡಿಸಿ, ಕೊಲೆ ಬೆದರಿಕೆ ಹಾಕಿರುತ್ತಾರೆಂದು ಶ್ರೀ ಶೇಖರಪ್ಪ, ರವರು ದಿನಾಂಕ: 15-01-2020 ರಂದು ಕೊಟ್ಟ ದೂರಿನ ಮೇರೆಗೆ ಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ವಾಹನದ ನಿಯಂತ್ರಣ ತಪ್ಪಿ, ವ್ಯಕ್ತಿಗೆ ತೀವ್ರ ಸ್ವರೂಪದ ರಕ್ತಗಾಯ:
     ದಿನಾಂಕ: 09-01-2020 ರಂದು ರಾತ್ರಿ 11-30 ಗಂಟೆ ಸಮಯದಲ್ಲಿ ಬಾಗಲಕೋಟೆ ಜಿಲ್ಲೆ, ಮುಡೋಲ್ ತಾಲ್ಲೂಕು, ರಂಜನಂಗಿ ಗ್ರಾಮದ ವಾಸಿ ಶ್ರೀ ಹನುಮಂತ, ರವರು ಈಗ್ಗೆ 1 ತಿಂಗಳಿನಿಂದ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದು, ಕೆಎ-03, ಎಹೆಚ್-4345 ರ ವಾಹನದ ಚಾಲಕ ಶ್ರೀ ದಿಲೀಪ, ರವರೊಂದಿಗೆ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಹೋಗಲು ಚನ್ನರಾಯಪಟ್ಟಣ ತಾಲ್ಲೂಕು, ಎನ್ಹೆಚ್-75 ಬಿ.ಎಂ. ರಸ್ತೆ, ದಂಡಿಗನಹಳ್ಳಿ ಗೇಟ್ ಹತ್ತಿರ ನಿರ್ಲಕ್ಷ್ಯತೆಯಿಂದ ಓಡಿಸಿದ್ದ ಪರಿಣಾಮ ಶ್ರೀ ಹನುಮಂತ ಬಿನ್ ನಾಗಪ್ಪ, 48 ವರ್ಷ, ರಂಜನಂಗಿ ಗ್ರಾಮ, ಮುಂಡೋಲ್ ತಾಲ್ಲೂಕು, ಬಾಗಲಕೋಟೆ ಜಿಲ್ಲೆ. ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿರುತ್ತದೆಂದು ಹಾಗೂ ಚಾಲಕನ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ಶ್ರೀ ನಾಗಪ್ಪ, ರವರು ದಿನಾಂಕ: 15-01-2020 ರಂದು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಪತಿ ಪತ್ನಿಗೆ ವಿಚ್ಛೇದನ ನೀಡುವಂತೆ ಹಲ್ಲೆ ಹಾಗೂ ಕೊಲೆ ಬೆದರಿಕೆ:
     2004 ರಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಶ್ರವಣಬೆಳಗೊಳ ಹೋಬಳಿ, ದಮ್ಮನಿಂಗಲ ಗ್ರಾಮದ ವಾಸಿ ಶ್ರೀಮತಿ ಗೀತಾ, ರವರು ಕೆ.ಆರ್. ಪೇಟೆ ತಾಲ್ಲೂಕು, ದಬ್ಬೇಘಟ್ಟ ಗ್ರಾದಮ ವಾಸಿ ಶ್ರೀ ಶ್ರೀಧರ, ರವರನ್ನು ವಿವಾಹವಾಗಿದ್ದು, ಶ್ರೀ ಶ್ರೀಧರ್, ರವರು ಸೀಮಾ ಎಂಬಾಕೆಯನ್ನು ವಿವಾಹವಾಗಿದ್ದು, ಈ ವಿಷಯ ಹೇಳಿದೆ ಪಿರ್ಯಾದಿಯನ್ನು ಮದುವೆಯಾಗಿದ್ದು, ಮದುವೆಯಾದಗಿನಿಂದ ಸರಿಯಾಗಿ ನೋಡಿಕೊಳ್ಳದೇ ತಂದೆ ತಾಯಿ ಜೊತೆ ಮಾತನಾಡಲು ಬಿಡದೆ ತವರು ಮನೆಗೆ ಹೋಗುವಂತೆ ಧಮ್ಕಿ ಹಾಕಿ, ಅತ್ತೆ ಶ್ರೀಮತಿ ಜವರಮ್ಮ ಮತ್ತು ಅತ್ತಿಗೆ ಶ್ರೀ ಸವಿತಾ ಹಾಗೂ ಮೈದನ ಶ್ರೀ ರವಿ, ರವರುಗಳು ಪಿರ್ಯಾದಿಯನ್ನು ಬಿಡು ಬೇರೆ ಮದುವೆ ಮಾಡುತ್ತೇವೆಂದು ಕುಮ್ಮಕು ನೀಡಿರುತ್ತಾರೆ ದಿನಾಂಕ: 14-10-2019 ರಂದು ಮಧ್ಯಾಹ್ನ 12-15 ಗಂಟೆ ಸಮಯದಲ್ಲಿ ಪಿರ್ಯಾದಿ ಮನೆಯ ಹತ್ತಿರ ಬಂದು ವಿಚ್ಛೇದನ ನೀಡುವಂತೆ ಕೊಲೆ ಬೆದರಿಕೆ ಹಾಕಿರುತ್ತಾರೆಂದು ಶ್ರೀಮತಿ ಗೀತಾ, ರವರು ದಿನಾಂಕ: 15-01-2020 ರಂದು ಕೊಟ್ಟ ದೂರಿನ ಮೇರೆಗೆ ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

No comments: