* * * * * * HASSAN DISTRICT POLICE

Monday, July 15, 2019

ಹಾಸನ ಜಿಲ್ಲೆ ಪೊಲೀಸ್ ಇಲಾಖೆಯ ಪತ್ರಿಕಾ ಪ್ರಕಟಣೆ ದಿನಾಂಕ: 13-07-2019



  ಪತ್ರಿಕಾ ಪ್ರಕಟಣೆ                     ದಿನಾಂಕ: 13-07-2019
ಮೋಸಮಾಡಿ ಜಮೀನು ಮಾರಿಸಿದ ಹಣ ಕೇಳಿದ್ದಕ್ಕೆ ಮಹಿಳೆ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿಹಚ್ಚಿದ ವ್ಯಕ್ತಿ
     ಈಗ್ಗೆ 04 ವರ್ಷಗಳ ಹಿಂದೆ ಅರಸೀಕೆರೆ ತಾಲ್ಲೂಕ್ ಕಣಕಟ್ಟೆ ಹೋಬಳಿ ಪಡುವನಹಳ್ಳಿ ಗೊಲ್ಲರಹಟ್ಟಿ ತಾಂಡ್ಯ ಗ್ರಾಮದ ಮಾಲಿಬಾಯಿ ರವರ ಜಮೀನನ್ನು ಅದೇ ಗ್ರಾಮದ ಸಿದ್ದಾನಾಯ್ಕ ಎಂಬುವವನು ಬ್ಯಾಂಕಿನಲ್ಲಿ ಸಾಲ ಕೊಡಿಸುತ್ತೇನೆಂದು ಮಾಲಿಬಾಯಿ ಗಂಡ ಹೇಮಜಿನಾಯ್ಕನನ್ನು ಅರಸೀಕೆರೆಗೆ ಕರೆದುಕೊಂಡು ಬಂದು ಯಾರನ್ನೋ ತೋರಿಸಿ, ಬ್ಯಾಂಕಿನವರು ಎಂದು ಸುಳ್ಳು ಹೇಳಿ ನಂಬಿಸಿ ಜಮೀನಿನ ದಾಖಲಾತಿಗಳನ್ನು ಪಡೆದುಕೊಂಡು ಸಹಿ ಮಾಡಿಸಿಕೊಂಡು ಜಮೀನನ್ನು ಬೇರೆ ಯಾರಿಗೋ ಪರಭಾರೆ ಮಾಡಿ, ಅವರಿಂದ 2,25000/- ರೂಗಳನ್ನು ಪಡೆದು ಮಾಲಿಬಾಯಿಗೆ 20000/- ರೂಗಳನ್ನು ಮಾತ್ರ ಕೊಟ್ಟು ಉಳಿದ ಹಣವನ್ನು ಕೊಡುತ್ತೇನೆಂದು ಹೇಳಿ ನಂಬಿಸಿ ಮೋಸ ಮಾಡಿದ್ದು, ಇದುವರೆಗೂ ಕೊಡದೇ ಇದ್ದುದ್ದರಿಂದ ದಿನಾಂಕ: 11/07/2019 ರಂದು ರಾತ್ರಿ ಸುಮಾರು 09-30 ಗಂಟೆಯಲ್ಲಿ ಸಿದ್ದನಾಯ್ಕನು ಮಾಲಿಬಾಯಿಯ ಮನೆ ಹತ್ತಿರ ಬಂದಾಗ ಸಿದ್ದನಾಯ್ಕನಿಗೂ ಮಾಲಿಬಾಯಿಗೂ ಗಲಾಟೆಯಾಗಿದ್ದು, ನಂತರ ಸಿದ್ದನಾಯ್ಕನು ಸೀಮೆಎಣ್ಣೆ ಕ್ಯಾನನ್ನು ಹಿಡಿದುಕೊಂಡು ಏಕಾಏಕಿ ಮನೆಯೊಳಕ್ಕೆ ನುಗ್ಗಿ ಮಾಲಿಬಾಯಿಯನ್ನು ಕೊಲೆ ಮಾಡುವ ಉದ್ದೇಶದಿಂದ ಮೈಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಓಡಿಹೋಗಿದ್ದು, ಮಾಲಿಬಾಯಿ ಕೂಗಿಕೊಂಡಾಗ ಅವರ ಗಂಡ ಬಂದು ನೀರು ಹಾಕಿ ಬೆಂಕಿ ಹಾರಿಸಿದ್ದು, ಇದರಿಂದ ತಲೆ ಮೈಕೈಗೆ ಸುಟ್ಟ ಗಾಯಗಳಾಗಿರುತ್ತದೆಂದು ಮಾಲಿಬಾಯಿ ರವರು ಕೊಟ್ಟ ದೂರಿನ ಮೇರೆಗೆ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಹಲ್ಲೆ ಮಾಡಿ ಕೊಲೆ ಬೆದರಿಕೆ
     ದಿನಾಂಕ:11-07-2019 ರಂದು ಸಂಜೆ ಸುಮಾರು 6-30 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ರಾಮ್ಜಿಹಳ್ಳಿ ಗ್ರಾಮದ ಮಹೇಶ್ ಬಿನ್ ನಾಗರಾಜು ರವರು  ಹಾಸನ ತಾಲ್ಲೂಕು, ಚಿಗಟಿಹಳ್ಳಿ ಗ್ರಾಮದ ತನ್ನ ಮಾವನ ಮನೆಗೆ ಬಂದಿದ್ದಾಗ ಚಿಗಟಿಹಳ್ಳಿ ಗ್ರಾಮದ ಮಂಜುನಾಥ ಬಿನ್ ಹುಚ್ಚೇಗೌಡ ಮತ್ತು ಇತರರು ಕ್ಷುಲ್ಲಕ ಕಾರಣಕ್ಕೆ ಎಂದು ಜಗಳ ತೆಗೆದು ದೊಣ್ಣೆಯಿಂದ ತಲೆಗೆ, ಕತ್ತಿಗೆ, ಮೈಕೈಗೆ ಹೊಡೆದು, ಕೊಲೆ ಬೆದರಿಕೆ ಹಾಕಿರುತ್ತಾರೆಂದು ಶ್ರೀ ಮಹೇಶ್, ರವರು ಕೊಟ್ಟ ದೂರಿನ ಮೇರೆಗೆ ದುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಮಹಿಳೆ ಕಾಣೆ
     ದಿನಾಂಕ 10.07.19 ರಂದು ಬೆಳಿಗ್ಗೆ 10-00 ಗಂಟೆಯ ಸಮಯದಲ್ಲಿ ಅರಕಲಗೂಡು ತಾಲ್ಲೂಕು, ಹಂಡ್ರಂಗಿ ಗ್ರಾಮದ ರಾಜಪ್ಪ ರವರ ಪತ್ನಿ ಶಾಂತಲಕ್ಷ್ಮಿ ರವರು ಮನೆಯವರು ಕೆಲಸಕ್ಕೆ ಜಮೀನಿಗೆ ಹೋಗಿದ್ದಾಗ ಎಲ್ಲೋ ಹೊರಗೆ ಹೋಗಿದ್ದು ಇದುವರೆಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶಾಂತಲಕ್ಷ್ಮಿರವರ ಪತಿ ರಾಜಪ್ಪ ರವರು ಕೊಟ್ಟ ದೂರಿನ ಮೇರೆಗೆ ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಮಹಿಳೆಯ ಚಹರೆ: ಶಾಂತಲಕ್ಸ್ಮಿ ಕೋಂ ರಾಜಪ್ಪ, 36 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ ಸಾಧಾರಣಾ ಮೈಕಟ್ಟು, ಕನ್ನಡ, ಭಾಷೆ ಮಾತನಾಡುತ್ತಾರೆ.  ಈ ಮಹಿಳೆಯ ಸುಳಿವು ಸಿಕ್ಕಲ್ಲಿ 08172-258845 ಕ್ಕೆ ಸಂಪಕರ್ಿಸುವುದು.
ಹುಡುಗಿ ಕಾಣೆ
     ದಿನಾಂಕ: 09-07-2019 ರಂದು ಬೆಳಗ್ಗೆ 10-30 ಗಂಟೆ ಸಮಯದಲ್ಲಿ ಹಾಸನ ನಗರದ ದಾಸರಕೊಪ್ಪಲಿನ ವಾಸಿ ಶ್ರೀ ಹುಸೇಸ್ ಸಾಬ್ ರವರ ಮಗಳು ಕು|| ರೇಶ್ಮಾ, ರವರು ಮನೆಯಿಂದ ಹೊರಗೆ ಹೋದವಳು ಇದುವರೆಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ರೇಶ್ಮಾಳ ತಂದೆ ಶ್ರೀ ಹುಸೇನ್ ಸಾಬ್, ರವರು ದಿನಾಂಕ: 12-07-2019 ರಂದು ಕೊಟ್ಟ ದೂರಿನ ಮೇರೆಗೆ ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕು|| ರೇಶ್ಮಾ, ಬಿನ್ ಹುಸೇಸ್ ಸಾಬ್, 18 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ ಸಾಧಾರಣಾ ಮೈಕಟ್ಟು, ಕನ್ನಡ, ಉದರ್ು ಭಾಷೆ ಮಾತನಾಡುತ್ತಾರೆ.  ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08172-258845 ಕ್ಕೆ ಸಂಪರ್ಕಿಸುವುದು.
ದಂಪತಿ ಕಾಣೆ
     ದಿನಾಂಕ: 08-07-19 ರಂದು ರಾತ್ರಿ 9-00 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಅರೇಹಳ್ಳಿಯ ಹೊಸನಗರದ ವಾಸಿ ಶಬ್ರಾಜ್ ಅಹಮ್ಮದ್ ಮತ್ತು ಆತನ ಹೆಂಡತಿ ಶಬೀನಾ ರವರು ಕಡೇಗರ್ಜೆ ಗ್ರಾಮದ ಕಾಫೀ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದು ಮಗುವನ್ನು ನೋಡಿಕೊಂಡು ಬರುವುದಾಗಿ ಪಕ್ಕದ ಮನೆಯವರಿಗೆ ಹೇಳಿ ಹೊರಗೆ ಬಂದಿದ್ದು ಇದುವರೆಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶಬ್ರಾಜ್ ಅಹಮ್ಮದ್ ರವರ ತಾಯಿ ಅಮಿನಾಭಿ ಕೋಂ ಲೇ ನವಾಬ್ ರವರು ಕೊಟ್ಟ ದೂರಿನ ಮೇರೆಗೆ ಅರೇಹಳ್ಳಿ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದವರ ಚಹರೆ: 1) ಕು|| ಶಬ್ರಾಜ್ ಅಹಮ್ಮದ್, 23 ವರ್ಷ, 5.2 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ ಸಾಧಾರಣಾ ಮೈಕಟ್ಟು, ಕನ್ನಡ, ಉರ್ದು ಭಾಷೆ ಮಾತನಾಡುತ್ತಾರೆ. 2)  ಶಬೀನಾ, 23 ವರ್ಷ, 5.2 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ ಸಾಧಾರಣಾ ಮೈಕಟ್ಟು, ಕನ್ನಡ, ಉರ್ದು ಭಾಷೆ ಮಾತನಾಡುತ್ತಾರೆ. ದಂಪತಿಗಳ ಸುಳಿವು ಸಿಕ್ಕಲ್ಲಿ 08172-258845 ಕ್ಕೆ ಸಂಪರ್ಕಿಸುವುದು.


No comments: