* * * * * * HASSAN DISTRICT POLICE

Wednesday, January 9, 2019

HASSAN DISTRICT PRESS NOTE : 09-01-2018


ಪತ್ರಿಕಾ ಪ್ರಕಟಣೆ       ದಿ: 09-01-2019

ಜೂಜಾಡುತ್ತಿದ್ದ ಐವರ ಬಂಧನ, ಬಂಧಿತರಿಂದ 1950/- ನಗದು ವಶ :

ದಿನಾಂಕ:08-01-2019 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕು ಕಡುವಿನಹೊಸಹಳ್ಳಿ ಗ್ರಾಮದಲ್ಲಿರುವ ಹಳ್ಳದ ಸೇತುವೆ ಬಳಿ ತೋಟದ ಒಳಭಾಗ ಒಂದು ಮರದ ಕೆಳಗೆ ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್-ಬಾಹರ್ ಜೂಜಾಡುತ್ತಿದ್ದಾರೆಂದು ಪಿಎಸ್ಐ ಶ್ರೀ ಸಾಗರ್, ಕೊಣನೂರು ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಕುಮಾರ ಬಿನ್ ತಿಮ್ಮಶೆಟ್ಟಿ 2) ಸುರೇಶ ಬಿನ್ ರಾಜಯ್ಯ 3) ಸೋಮಯ್ಯ ಬಿನ್ ಲೇಟ್ ಜವರಯ್ಯ 4) ಜಗದೀಶ ಬಿನ್ ನಾಗರಾಜು 5) ಲೋಕೇಶ ಬಿನ್ ಪುಟ್ಟರಾಜಶೆಟ್ಟಿ ಎಲ್ಲರೂ ಕಡುವಿನಹೊಸಹಳ್ಳಿ ಗ್ರಾಮ, ಕೊಣನೂರು ಹೋಬಳಿ, ಅರಕಲಗೂಡು ತಾಲ್ಲೂಕು ಎಂದು ತಿಳಿಸಿದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 1950 ನಗದನ್ನು ಅಮಾನತ್ತುಪಡಿಸಿಕೊಂಡು ಕೊಣನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

ಬೈಕ್ಗೆ ಕಾರ್ ಡಿಕ್ಕಿ ಬೈಕ್ ಸವಾರನಿಗೆ ರಕ್ತಗಾಯ :

ದಿನಾಂಕ:08-01-2019 ರಂದು ಬೆಳಿಗ್ಗೆ 9-30 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಕಟ್ಟಾಯ ಹೋಬಳಿ, ಅರಳೀಕಟ್ಟೆ ಗ್ರಾಮದ ವಾಸಿ ನಿರಂಜನ್ಗೌಡ ರವರು ತಮ್ಮ ಬಾಬ್ತು ಕೆಎ-13-ಇಸಿ-7974 ನಂಬರಿನ ಹೀರೋ ಸ್ಪ್ಲೆಂಡರ್ ಬೈಕಿನಲ್ಲಿ ಅರಳೀಕಟ್ಟೆ ಗ್ರಾಮದ ಬಳಿ ಇರುವ ಪೆಟ್ರೋಲ್ ಬಂಕ್ ಮುಂಭಾಗದ ರಸ್ತೆಯಲ್ಲಿ ಹೋಗುತ್ತಿದ್ದಾಗ ಹಿಂಭಾಗದಿಂದ ಬಂದ ಕೆಎ-01-ಎಂ.ಬಿ-1223 ರ ಕಾರಿನ ಚಾಲಕ ತನ್ನ ಕಾರನ್ನು  ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ನಿರಂಜನ್ಗೌಡ ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಹಾಸನ ನಗರದ ಎಸ್ಎಸ್ಎಂ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವುದಾಗಿ ಪಿರ್ಯಾದಿ ನಿರಂಜನ್ಗೌಡ ರವರು ಕೊಟ್ಟ ದೂರಿನ ಮೇರೆಗೆ   ಗೊರೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

No comments: