ಪತ್ರಿಕಾ ಪ್ರಕಟಣೆ ದಿನಾಂಕ: 17-09-2018
ಬೈಕ್ಗಳ ಮುಖಾ-ಮುಖಿ ಡಿಕ್ಕಿ, ಒಂದು ಸಾವು : ದಿನಾಂಕ: 16-09-2018 ರಂದು ಸಂಜೆ 4-30 ಗಂಟೆ
ಸಮಯದಲ್ಲಿ ಹೊಳೆನರಸೀಪುರ ತಾಲ್ಲೂಕು, ಹಳೇಕೋಟೆ ಹೋಬಳಿ, ಕಿನ್ನರಹಳ್ಳಿ ಗ್ರಾಮದ ವಾಸಿ ಶ್ರೀ ಬಸವರಾಜು, ರವರು ಸ್ನೇಹಿತರಾದ ರವರ ಬಾಬ್ತು ಕೆಎ-13 ಎಕ್ಸ್-8814 ರ ಅಪಾಚಿ
ಬೈಕ್ನಲ್ಲಿ ಹಿಂಬದಿ ಕುಳಿತುಕೊಂಡು ಹೊಳೆನರಸೀಪುರ ತಾಲ್ಲೂಕು, ಬೀಚನಹಳ್ಳಿ-ಕುಂಚೇವು ರಸ್ತೆ, ಬೀಚನಹಳ್ಳಿ ಗ್ರಾಮದ ಮಾಸ್ಟರ್ ಶ್ರೀ ರಂಗೇಶ್, ರವರ ಮನೆಯ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ
ಬಂದ ಕೆಎ-13, ಯು-9663 ರ ಬೈಕ್ ಚಾಲಕ ತನ್ನ ವಾಹನವನ್ನು
ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ಬಸವರಾಜು ಬಿನ್
ಜಯಲಿಂಗಪ್ಪ,
20 ವರ್ಷ, ಕಿನ್ನರಹಳ್ಳಿ ಗ್ರಾಮ, ಹಳೇಕೋಟೆ ಹೋಬಳಿ, ಹೊಳೆನರಸೀಪುರ ತಾಲ್ಲೂಕು, ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ
ಮೃತಪಟ್ಟಿರುತ್ತಾರೆಂದು ಮೃತರ ತಮ್ಮ ಶ್ರೀ ಪುರುಷೋತ್ತಮ, ರವರು ಕೊಟ್ಟ ದೂರಿನ ಮೇರೆಗೆ ಹೊಳೆನರಸೀಪುರ ನಗರ
ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಲಾರಿ ಬೈಕ್ಗೆ ಡಿಕ್ಕಿ, ಬೈಕ್ ಸವಾರ ಸಾವು: ದಿನಾಂಕ: 16-09-2018 ರಂದು ಬೆಳಿಗ್ಗೆ 9-00 ಗಂಟೆ
ಸಮಯದಲ್ಲಿ ಹಾಸನ ತಾಲ್ಲೂಕು, ಸಾಲಗಾಮೆ ಹೋಬಳಿ, ಬೊಮ್ಮನಹಳ್ಳಿ ಗ್ರಾಮದ ವಾಸಿ ಶ್ರೀ ರವಿ, ರವರು ಗಾರೆ ಕೆಲಸ ಮಾಡಿಕೊಂಡಿದ್ದು, ಬಾಬ್ತು ಕೆ-13, ಇಎನ್-8404ರ ಬಜಾಜ್ ಬೈಕ್ನಲ್ಲಿ ಎಂದಿನಂತೆ ಗಾರೆ
ಕೆಲಸಕ್ಕೆ ಹೋಗುತ್ತಿದ್ದು, ಹಾಸನ ತಾಲ್ಲೂಕು, ಹಾಸನ-ಬೇಲೂರು ರಸ್ತೆ, ಅರೇಕಲ್ಲು ಹೊಸಹಳ್ಳಿ ಗಡಿ ಹತ್ತಿರ ಹೋಗುತ್ತಿದ್ದಾಗ
ಎದುರುಗಡೆಯಿಂದ ಬಂದ ಕೆಎ-12, ಎ-6988 ರ ಲಾರಿ ಚಾಲಕ ತನ್ನ ವಾಹನವನ್ನು
ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ರವಿ ಬಿನ್
ಚಿನ್ನಸ್ವಾಮಿ, 27 ವರ್ಷ, ಬೊಮ್ಮನಹಳ್ಳಿ ಗ್ರಾಮ, ಸಾಲಗಾಮೆ ಹೋಬಳಿ, ಹಾಸನ ತಾಲ್ಲೂಕು, ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ
ಮೃತಪಟ್ಟಿರುತ್ತಾರೆಂದು ಮೃತರ ಅಣ್ಣ ಶ್ರೀ ತುಳಸಿಪ್ರಸಾದ್, ರವರು ಕೊಟ್ಟ ದೂರಿನ ಮೇರೆಗೆ ಹಾಸನ ಗ್ರಾಮಾಂತರ ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ
No comments:
Post a Comment