ಪತ್ರಿಕಾ ಪ್ರಕಟಣೆ ದಿನಾಂಕ:15-08-2018
ಮನುಷ್ಯ ಕಾಣೆ : ದಿನಾಂಕ:13-08-2018 ರಂದು
ಮಧ್ಯಾಹ್ನ 3.30 ಗಂಟೆಗೆ ಹಾಸನದ ಆಡುವಳ್ಳಿಯ ವಾಸಿ ಅಶ್ವಿನಿ ರವರ ಪತಿ
ಸಂದೀಪ ರವರು ಮನೆಯಿಂದ ಹೊರಗೆ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ
ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆ
ಮಾಡಿಕೊಡಬೇಕೆಂದು ಸಂದೀಫ ರವರ ಹೆಂಡತಿ ಅಶ್ವಿನಿ ರವರು ದಿನಾಂಕ:14-08-2018 ರಂದು ಕೊಟ್ಟ
ದೂರಿನ ಮೇರೆಗೆ ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ
ಮನುಷ್ಯನ ಚಹರೆ: ಸಂದೀಪ ಬಿನ್ ಕೃಷ್ಣಪ್ಪ, 34ವರ್ಷ,
5.8 ಅಡಿ ಎತ್ತರ, ಸಾದಾರಣಮೈಕಟ್ಟು,
ಕನ್ನಡ, ಹಿಂದಿ, ಇಂಗ್ಲೀಷ್
ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ನೀಲಿ ಬಣ್ಣದ ಶರ್ಟ್,
ನೀಲಿ ಪ್ಯಾಂಟ್ ಧರಿಸಿರುತ್ತಾರೆ. ಈ
ವ್ಯಕ್ತಿಯ ಸುಳಿವು ಸಿಕ್ಕಲ್ಲಿ ಹಾಸನ ಬಡಾವಣೆ ಪೊಲೀಸ್ ಠಾಣೆ ಪೋನ್ ನಂ. 08172-268967 ಕ್ಕೆ ಸಂಪರ್ಕಿಸುವುದು.
No comments:
Post a Comment