ಪತ್ರಿಕಾ ಪ್ರಕಟಣೆ ದಿನಾಂಕ: 12-08-2018
ಗಂಡಸು ಕಾಣೆ : ದಿನಾಂಕ: 08-08-2018 ರಂದು
ರಾತ್ರಿ 10-30 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಹಿರೀಸಾವೆ ಹೋಬಳಿ, ಹೊನ್ನಶೆಟ್ಟಿಹಳ್ಳಿ ಗ್ರಾಮದ ಮಂಜುನಾಥ ರವರು ರಾತ್ರಿ
ಮನೆಯಿಂದ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ
ಮಾಡಿಕೊಡಬೇಕೆಂದು ಮಂಜುನಾಥ ರವರ ಪತ್ನಿ ಶ್ರೀಮತಿ ಪೂಜಾ ರವರು ದಿನಾಂಕ: 11-08-2018 ರಂದು ಕೊಟ್ಟ
ದೂರಿನ ಮೇರೆಗೆ ಹಿರೀಸಾವೆ ಠಾಣೆಯಲ್ಲಿ ಪ್ರಕರಣ
ದಾಖಲಿಸಿರುತ್ತದೆ. ಕಾಣೆಯಾದ ಮನುಷ್ಯನ ಚಹರೆ: ಮಂಜುನಾಥ, 34 ವರ್ಷ, 5'4'' ಅಡಿ ಎತ್ತರ, ಕನ್ನಡ ಭಾಷೆ
ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಕಪ್ಪು ಬಣ್ಣದ ನೈಟ್ ಪ್ಯಾಂಟ್, ಕಪ್ಪು ಬಣ್ಣದ ಚೆಕ್ಸ್ ಶರ್ಟ್
ಧರಿಸಿರುತ್ತಾರೆ. ಕಾಣೆಯಾದ ಮನುಷ್ಯನ ಬಗ್ಗೆ ಸುಳಿವು ಸಿಕ್ಕಲ್ಲಿ ಹಿರೀಸಾವೆ ಠಾಣೆ ಫೋನ್ ನಂ. 08176-226888 ಕ್ಕೆ ಸಂಪರ್ಕಿಸುವುದು.
ಹೆಂಗಸು ಕಾಣೆ : ದಿನಾಂಕ: 10-08-2018 ರಂದು
ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಬಾಣಾವರ ಹೋಬಳಿ, ಕುರುಬರಹಳ್ಳಿ ತಾಂಡ್ಯ
ಗ್ರಾಮದ ರವಿನಾಯ್ಕ ರವರ ಪತ್ನಿ ಶ್ರೀಮತಿ ಕವಿತಾಬಾಯಿ
ಸಂಬಂಧಿಕರ ಮನೆಗೆ ಹೋಗಿ ಬರುವುದಾಗಿ ಮನೆಯಿಂದ ಹೋದವಳು ವಾಪಸ್ ಮನೆಗೆ ಬಾರದೆ
ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು
ಕವಿತಾಬಾಯಿ ರವರ ಅತ್ತೆ ಶ್ರೀಮತಿ ಕುಮಾರಿಬಾಯಿ ರವರು ಕೊಟ್ಟ ದೂರಿನ ಮೇರೆಗೆ ಬಾಣಾವರ ಠಾಣೆಯಲ್ಲಿ
ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಕವಿತಾಬಾಯಿ ಕೋಂ ರವಿನಾಯ್ಕ, 28 ವರ್ಷ, 5'1'' ಅಡಿ ಎತ್ತರ, ಕನ್ನಡ ಭಾಷೆ
ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಬಿಸ್ಕೆಟ್ ಕಲರ್ ಟಾಪ್, ಬಿಳಿ ಲೆಗಿನ್ಸ್ ಧರಿಸಿರುತ್ತಾಳೆ. ಕಾಣೆಯಾದ ಹೆಂಗಸಿನ
ಬಗ್ಗೆ ಸುಳಿವು ಸಿಕ್ಕಲ್ಲಿ ಬಾಣಾವರ ಠಾಣೆ ಫೋನ್ ನಂ. 08174-235633 ಕ್ಕೆ ಸಂಪರ್ಕಿಸುವುದು.
ಮಗನೊಂದಿಗೆ ತಾಯಿ
ಕಾಣೆ : ದಿನಾಂಕ: 09-08-2018 ರಂದು ಸಂಜೆ 05-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ನುಗ್ಗೇಹಳ್ಳಿ ಹೋಬಳಿ, ಹೊನ್ನಮಾರನಹಳ್ಳಿ ಗ್ರಾಮದ ಯೋಗೇಶ ರವರ ಪತ್ನಿ ಶ್ರೀಮತಿ
ಕಾವ್ಯ ಮೂರು ವರ್ಷದ ಮಗ ಚಿರಂತ್ನೊಂದಿಗೆ ಮನೆಯಿಂದ ಹೋದವಳು ವಾಪಸ್ ಮನೆಗೆ ಬಂದಿರುವುದಿಲ್ಲ.
ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಕಾವ್ಯ ರವರ ಪತಿ ಶ್ರೀ
ಯೋಗೇಶ್ ರವರು ದಿನಾಂಕ: 11-08-2018 ರಂದು ಕೊಟ್ಟ ದೂರಿನ ಮೇರೆಗೆ ನುಗ್ಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ.
ಕಾಣೆಯಾದ ಹೆಂಗಸು ಮತ್ತು ಮಗುವಿನ ಚಹರೆ: ಕಾವ್ಯ ಕೋಂ ಯೋಗೇಶ್, 23 ವರ್ಷ, 5'2'' ಅಡಿ ಎತ್ತರ, ಕನ್ನಡ ಭಾಷೆ
ಮಾತನಾಡುತ್ತಾಳೆ. ಕಾಣೆಯಾದ ಮಗುವಿನ ಚಹರೆ: ಚಿರಂತ್ ಬಿನ್ ಯೋಗೇಶ್, 3 ವರ್ಷ, ಕಾಣೆಯಾದವರ ಬಗ್ಗೆ ಸುಳಿವು
ಸಿಕ್ಕಲ್ಲಿ ನುಗ್ಗೇಹಳ್ಳಿ ಠಾಣೆ ಫೋನ್ ನಂ. 08176-233033 ಕ್ಕೆ ಸಂಪರ್ಕಿಸುವುದು.
No comments:
Post a Comment