ಪತ್ರಿಕಾ ಪ್ರಕಟಣೆ ದಿನಾಂಕ: 08-08-2018
ಹುಡುಗ ಕಾಣೆ :
ದಿನಾಂಕ: 06-08-2018 ರಂದು ಬೆಳಿಗ್ಗೆ 07-00 ಗಂಟೆ ಸಮಯದಲ್ಲಿ ಅರಕಲಗೂಡು
ತಾಲ್ಲೂಕು, ಕಸಬಾ ಹೋಬಳಿ, ದೊಡ್ಡನಾಯಕನಕೊಪ್ಪಲು
ಗ್ರಾಮದ ದಾಸೇಗೌಡ ರವರ ಮಗ ನಾಗರಾಜ ಅರಕಲಗೂಡಿಗೆ ಹೋಗಿ ಬರುವುದಾಗಿ ಮನೆಯಿಂದ
ಹೋದವನು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡಕಿದರೂ
ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ನಾಗರಾಜ ರವರ ತಂದೆ ಶ್ರೀ ದಾಸೇಗೌಡ ರವರು
ಕೊಟ್ಟ ದೂರಿನ ಮೇರೆಗೆ ಅರಕಲಗೂಡು ಠಾಣೆಯಲ್ಲಿ
ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹುಡುಗನ ಚಹರೆ: ನಾಗರಾಜ ಬಿನ್ ದಾಸೇಗೌಡ, 22
ವರ್ಷ, 5'5'' ಅಡಿ ಎತ್ತರ, ಕನ್ನಡ
ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ನೀಲಿ ಜೀನ್ಸ್ ಪ್ಯಾಂಟ್, ಬಿಳಿ
ತುಂಬುತೋಳಿನ ಶಟರ್್ ಹಾಗೂ ಸ್ವೆಟರ್ ಧರಿಸಿರುತ್ತಾರೆ. ಕಾಣೆಯಾದ ಹುಡುಗನ ಬಗ್ಗೆ ಸುಳಿವು
ಸಿಕ್ಕಲ್ಲಿ ಅರಕಲಗೂಡು ಠಾಣೆ ಫೋನ್ ನಂ. 08175-
220249 ಕ್ಕೆ ಸಂಪರ್ಕಿಸುವುದು.
ಗಂಡಸು ಕಾಣೆ : ಬೇಲೂರು ತಾಲ್ಲೂಕು, ಹೊಸಮನಹಳ್ಳಿ
ಗ್ರಾಮದ ಶೋಭೇಶ್ ಹೆಚ್.ಆರ್. @ ಮಣಿ
ಮನೆಯಿಂದ ಈಗ್ಗೆ 8 ವರ್ಷಗಳ ಹಿಂದೆ ದಿನಾಂಕ: 25-01-2010 ರಂದು ಬೇಲೂರಿಗೆ ಬೇಕರಿ ಕೆಲಸಕ್ಕೆ ಹೋಗುವುದಾಗಿ ಮನೆಯಿಂದ ಹೋದವನು ವಾಪಸ್
ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ
ಮಾಡಿಕೊಡಬೇಕೆಂದು ಶೋಭೇಶ್ ರವರ ಅಣ್ಣ ಶ್ರೀ ಸತೀಶ್
ಹೆಚ್.ಆರ್. ರವರು ದಿನಾಂಕ: 07-08-2018 ರಂದು ಕೊಟ್ಟ ದೂರಿನ ಮೇರೆಗೆ ಬೇಲೂರು ಠಾಣೆಯಲ್ಲಿ
ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹುಡುಗನ ಚಹರೆ: ಶೋಭೇಶ್ ಹೆಚ್.ಆರ್. @ ಮಣಿ
ಬಿನ್ ಲೇಟ್ ರಾಮೇಗೌಡ, 30 ವರ್ಷ, ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾದ
ಗಂಡಸಿನ ಬಗ್ಗೆ ಸುಳಿವು ಸಿಕ್ಕಲ್ಲಿ ಬೇಲೂರು
ಠಾಣೆ ಫೋನ್ ನಂ. 08177-222444 ಕ್ಕೆ ಸಂಪರ್ಕಿಸುವುದು.
No comments:
Post a Comment