* * * * * * HASSAN DISTRICT POLICE

Wednesday, August 8, 2018

PRESS NOTE : 07-08-2018


ಪತ್ರಿಕಾ ಪ್ರಕಟಣೆ                      ದಿನಾಂಕ: 07-08-2018

ಮಾರುತಿ ಓಮಿನಿ ವಾಹನ ಬೈಕಿಗೆ ಡಿಕ್ಕಿ ಬೈಕ್ ಸವಾರನ ಸಾವು :        ದಿನಾಂಕ: 06-08-2018 ರಂದು ಮಧ್ಯಾಹ್ನ 12-30 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಬಾಗೂರು ಹೋಬಳಿ, ದ್ಯಾವೇನಹಳ್ಳಿ ಗ್ರಾಮದ ವಿಜೇಂದ್ರ ರವರ ಬಾಬ್ತು ಕೆಎ-17-ಕ್ಯೂ-5362 ರ ಬೈಕಿನಲ್ಲಿ ಚನ್ನರಾಯಪಟ್ಟಣದ ಗೌಡಗೆರೆ ಹತ್ತಿರ ಎನ್ಹೆಚ್-75 ರಸ್ತೆಯಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಕೆಎ-04-ಎಂಎ-6469 ರ ಮಾರುತಿ ಓಮಿನಿ ವಾಹನದ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿ ವಿಜೇಂದ್ರ, 35 ವರ್ಷ ರವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆಂದು ಮೃತರ ಪತ್ನಿ ಶ್ರೀಮತಿ ಅಕ್ಷಿತ ಹೆಚ್.ಕೆ. ರವರು ಕೊಟ್ಟ ದೂರಿನ ಮೇರೆಗೆ  ಚನ್ನರಾಯಪಟ್ಟಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.



No comments: