* * * * * * HASSAN DISTRICT POLICE

Monday, August 6, 2018

PRESS NOTE : 06-08-2018


                                                    ಪತ್ರಿಕಾ ಪ್ರಕಟಣೆ                  ದಿನಾಂಕ: 06-08-2018

ಜೂಜಾಡುತ್ತಿದ್ದ 8 ಜನರ ಬಂಧನ, ಬಂಧಿತರಿಂದ 10,200/- ನಗದು ವಶ :         ದಿನಾಂಕ: 05-08-2018 ರಂದು ಸಂಜೆ 05-40 ಗಂಟೆ ಸಮಯದಲ್ಲಿ ಹಾಸನ ಬಿಟ್ಟಗೌಡನಹಳ್ಳಿ ಸರ್ಕಾರಿ ಶಾಲೆಯ ಹತ್ತಿರ ಅಂದರ್-ಬಾಹರ್ ಜೂಜಾಡುತ್ತಿದ್ದಾರೆಂದು ಪಿಎಸ್ಐ ಶ್ರೀ ನಿತ್ಯಾನಂದ ಸಿಇಎನ್ ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಏಜಾಸ್ ಬಿನ್ ಲೇಟ್ ಮಹಮ್ಮದ್ ದಸ್ತಗಿರಿಸಾಬ್, 52 ವರ್ಷ, ಚಿಪ್ಪಿನಕಟ್ಟೆ, ಹಾಸನ 2) ಏಕ್ಬಾಲ್ ಪಾಷ ಬಿನ್ ಲೇಟ್ ದಸ್ತಗಿರಿ ಸಾಬ್, 52 ವರ್ಷ, ಪೆನ್ಷನ್ ಮೊಹಲ್ಲಾ ಹಾಸನ 3) ಫಯಾಜ್ ಅಹಮದ್ ಬಿನ್ ಲೇಟ್ ನಸೀರ್ ಅಹಮದ್, 53 ವರ್ಷ, ಕೊಕ್ಕನಘಟ್ಟ, ಹಾಸನ ತಾಲ್ಲೂಕು 4) ತಜ್ಜು @ ಕರೀತಜ್ಜು ಬಿನ್ ಅಮೀರ್ ಖಾನ್, 45 ವರ್ಷ, ಮದರಸ ಹತ್ತಿರ, ಚಿಪ್ಪನಕಟ್ಟೆ ಹಾಸನ 5) ಆಸೀಫ್ ಬಿನ್ ಇಸ್ಮಾಯಿಲ್, 43 ವರ್ಷ, 7 ನೇ ಕ್ರಾಸ್, ಪೆನ್ಷನ್ ಮೊಹಲ್ಲಾ ಹಾಸನ 6) ಮಹಮದ್ ಹಸೇನ್ ಬಿನ್ ಬುಡೇನ್ಸಾಬ್, 51 ವರ್ಷ, ಮದರಸ ಹತ್ತಿರ, ಹಾಸನ 7) ವಜೀರ್ ಅಹಮದ್ ಬಿನ್ ಲೇಟ್ ಖಾಸೀಂಖಾನ್, ಹಳೆಮಟನ್ ಮಾರ್ಕೆಟ್, ಅಮೀರ್ ಮೊಹಲ್ಲಾ, ಹಾಸನ 8) ಜಾವಿದ್ ಬಿನ್ ಬಾಬಾಸಾಬ್, 44 ವರ್ಷ, ದರ್ಗಾ ಹಿಂಭಾಗ, ಪೆನ್ಷನ್ ಮೊಹಲ್ಲಾ, ಹಾಸನ ಎಂದು ತಿಳಿಸಿದವರನ್ನು ದಸ್ತಗಿರಿ ಮಾಡಿಕೊಂಡು ಅವರ ವಶದಲ್ಲಿದ್ದ  10,200/- ನಗದನ್ನು ಅಮಾನತ್ತುಪಡಿಸಿಕೊಂಡು ಹಾಸನ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

ಹುಡುಗಿ ಕಾಣೆ :        ದಿನಾಂಕ: 04-08-2018 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕು, ಕೊಣನೂರು ಹೋಬಳಿ, ಕೆರೆಕೋಡಿ ಗ್ರಾಮದ ರಾಜೇಗೌಡ ರವರ ಮಗಳು ನಿರೋಷಾ ಕೊಣನೂರಿಗೆ ಬಟ್ಟೆ ತರುವುದಾಗಿ ಮನೆಯಿಂದ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ನಿರೋಷಾ ರವರ ತಂದೆ ಶ್ರೀ ರಾಜೇಗೌಡ ರವರು ಕೊಟ್ಟ ದೂರಿನ ಮೇರೆಗೆ ಕೊಣನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ನಿರೋಷಾ ಬಿನ್ ರಾಜೇಗೌಡ, 18 ವರ್ಷ, 5' ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಜೀನ್ಸ್ ಪ್ಯಾಂಟ್ ಹಾಗೂ ಕಪ್ಪು ಬಿಳಿ ಮಿಶ್ರಿತ ಟಾಪ್ ಧರಿಸಿರುತ್ತಾಳೆ. ಕಾಣೆಯಾದ ಹುಡುಗಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಕೊಣನೂರು ಠಾಣೆ ಫೋನ್ ನಂ. 08175-226227 ಕ್ಕೆ ಸಂಪರ್ಕಿಸುವುದು.

ಬೈಕ್ ಡಿಕ್ಕಿ ಪಾದಾಚಾರಿ ವ್ಯಕ್ತಿ ಸಾವು :      ದಿನಾಂಕ: 04-08-2018 ರಂದು ರಾತ್ರಿ 08-30 ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕು, ಮಳಲಿಕೆರೆಕೊಪ್ಪಲು ಗ್ರಾಮದ ಸಣ್ಣೇಗೌಡ ರವರು ಮನೆಗೆ ಸಾಮಾನು ತರಲೆಂದು ಸಾಲುಕೊಪ್ಪಲು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಎದುರುನಿಂದ ಬಂದ ಕೆಎ-45-ಕ್ಯೂ-1533 ರ ಬಜಾಜ್ ಪಲ್ಸರ್ ಬೈಕ್ ಸವಾರ ತನ್ನ ಬೈಕ್ನ್ನು ನಿರ್ಲಕ್ಷ್ಯತೆಯಿಂದ  ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಚಿಕಿತ್ಸೆಗಾಗಿ ಅರಕಲಗೂಡು ಸಕರ್ಾರಿ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಣ್ಣೇಗೌಡ @ ಸ್ವಾಮಿಗೌಡ, 45 ವರ್ಷ ರವರು ಮೃತಪಟ್ಟಿರುತ್ತಾರೆಂದು ಮೃತರ ಮಗ ಶ್ರೀ ಶರತ್ ರವರು ಕೊಟ್ಟ ದೂರಿನ ಮೇರೆಗೆ ಅರಕಲಗೂಡು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.


ಆಟೋ ಪಲ್ಟಿ ಚಾಲಕ ಸಾವು :        ದಿನಾಂಕ: 05-08-2018 ರಂದು  ಬೆಳಿಗ್ಗೆ  08-00 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಬಾಣಾವರ ಹೋಬಳಿ, ಟಿ. ತಿಮ್ಮನಹಳ್ಳಿ ಗ್ರಾಮದ ಅಂಜನಶೆಟ್ಟಿ ರವರು ಕೆಎ-13-ಸಿ-0824 ರ ಆಟೋದಲ್ಲಿ ಕಲ್ಲುಸಾದರಹಳ್ಳಿ ಗ್ರಾಮಕ್ಕೆ ಸಂತೆಯ ಟ್ರಿಪ್  ಮಾಡಲು ಹೋಗುತ್ತಿದ್ದಾಗ ಮರಟಗೆರೆ ಬೋವಿ ಕಾಲೋನಿಯಿಂದ ಬಿಜಿ ಹಟ್ಟಿ ನಡುವಿನ  ರಸ್ತೆಯ ಸೇತುವೆಯ ಹತ್ತಿರ ಆಟೋವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಹೋಗಿ  ಆಟೋ  ಸಮೇತ ರಸ್ತೆಯ ಮೇಲೆ ಬಿದ್ದಾಗ ಆಟೋ ಅಂಜನಶೆಟ್ಟಿಯ ಮೇಲೆ ಬಿದ್ದು, ಅಂಜನಶೆಟ್ಟಿ, 35 ವರ್ಷ ರವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆಂದು ಶ್ರೀ ದೇವರಾಜಪ್ಪ ರವರು ಕೊಟ್ಟ ದೂರಿನ ಮೇರೆಗೆ  ಬಾಣಾವರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

No comments: