ಪತ್ರಿಕಾ ಪ್ರಕಟಣೆ ದಿನಾಂಕ:05-08-2018
ಬೈಕ್ಗೆ ನಾಯಿ ಅಡ್ಡ ಬಂದು ವಿದ್ಯುತ್
ಕಂಬಕ್ಕೆ ಡಿಕ್ಕಿ, ಬೈಕ್ ಸವಾರ ಸಾವು : ದಿನಾಂಕ: 04-08-2018 ರಂದು
ಮಧ್ಯಾಹ್ನ 2.15 ಗಂಟೆ
ಸಮಯದಲ್ಲಿ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕ್ ಕೆಸ್ತೂರು ಕೊಪ್ಪಲು ಗ್ರಾಮದ ವಾಸಿ ಬಾಸ್ಕರ
ರವರ ಅಣ್ಣ ಬಸವರಾಜು ರವರು ತಮ್ಮ ಬಾಬ್ತು ಕೆಎ-45-ಎಸ್-1854 ರ ಬೈಕಿನಲ್ಲಿ ಹಳ್ಳಿಮೈಸೂರಿನಿಂದ
ಹೊಳೆನರಸೀಪುರಕ್ಕೆ ಹೋಗುವ ಟಾರು ರಸ್ತೆಯಲ್ಲಿ ಪದವಿ ಪೂರ್ವ ಕಾಲೇಜಿನ ಹತ್ತಿರ ಅಡ್ಡ ಬಂದ
ನಾಯಿಯನ್ನು ತಪ್ಪಿಸಲು ಹೋಗಿ ರಸ್ತೆಯ ಎಡಭಾಗದಲ್ಲಿದ್ದ ವಿದ್ಯುತ್ ಕಂಬಕ್ಕೆ ಗುದ್ದಿದ ಪರಿಣಾಮ
ರಕ್ತಗಾಯಗಳಾಗಿದ್ದು, ಚಿಕಿತ್ಸೆಗೆ
ಹೊಳೆನರಸೀಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುವಾಗ ಮಾರ್ಗ ಮಧ್ಯೆ ಬಸವರಾಜು ಬಿನ್
ಬಲರಾಮು, 54 ವರ್ಷ, ಕೆಸ್ತೂರುಕೊಪ್ಪಲುಗ್ರಾಮ, ಕೆ.ಆರ್.ನಗರ
ತಾಲ್ಲೂಕ್, ಮೈಸೂರು
ಜಿಲ್ಲೆ ರವರು ಮೃತಪಟ್ಟಿರುತ್ತಾರೆಂದು ಮೃತರ ಮೃತರ ತಮ್ಮ ಬಾಸ್ಕರ ರವರು ಕೊಟ್ಟ ದೂರಿನ ಮೇರೆಗೆ
ಹಳ್ಳಿಮೈಸೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕ್ರಮ ಕೈಗೊಂಡಿರುತ್ತದೆ.
No comments:
Post a Comment