ಪತ್ರಿಕಾ ಪ್ರಕಟಣೆ ದಿನಾಂಕ: 04-08-2018
ಮಗುವಿನೊಂದಿಗೆ ತಾಯಿ
ಕಾಣೆ : ದಿನಾಂಕ: 29-07-2018 ರಂದು ಬೆಳಿಗ್ಗೆ 11-30 ಗಂಟೆ ಸಮಯದಲ್ಲಿ ಆಲೂರು ತಾಲ್ಲೂಕು, ಪಾಳ್ಯ ಹೋಬಳಿ, ತೊಗರವಳ್ಳಿ ಗ್ರಾಮದ ರವಿಕುಮಾರ ರವರ ಪತ್ನಿ
ಸುಶೀಲಾ ಒಂದು ವರ್ಷದ ಹೆಣ್ಣುಮಗು ನಿಸರ್ಗಳೊಂದಿಗೆ ಮನೆಯಿಂದ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ
ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಸುಶೀಲಾ ರವರ ಪತಿ ಶ್ರೀ ರವಿಕುಮಾರ
ರವರು ದಿನಾಂಕ: 03-08-2018 ರಂದು ಕೊಟ್ಟ ದೂರಿನ ಮೇರೆಗೆ ಆಲೂರು
ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹೆಂಗಸು ಮತ್ತು ಮಗುವಿನ ಚಹರೆ: ಸುಶೀಲ ಕೋಂ
ರವಿಕುಮಾರ, 25 ವರ್ಷ, 5'5'' ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾರೆ. ಮಗುವಿನ
ಚಹರೆ: ನಿಸರ್ಗ ಬಿನ್ ರವಿಕುಮಾರ, 1 ವರ್ಷ. ಕಾಣೆಯಾದವರ ಬಗ್ಗೆ
ಸುಳಿವು ಸಿಕ್ಕಲ್ಲಿ ಆಲೂರು ಠಾಣೆ ಫೋನ್
ನಂ. 08170-218231 ಕ್ಕೆ ಸಂಪರ್ಕಿಸುವುದು.
ಹೆಂಗಸು ಕಾಣೆ : ದಿನಾಂಕ: 02-08-2018 ರಂದು ರಾತ್ರಿ 10-30 ಗಂಟೆ ಸಮಯದಲ್ಲಿ ಆಲೂರು ತಾಲ್ಲೂಕು, ಬೈರಾಪುರ ಗ್ರಾಮದ ವಾಸಿ ಸುರೇಶ ಬಿ.ಎಲ್. ರವರ ಪತ್ನಿ ಶ್ರೀಮತಿ ಟಿ.ಎಸ್.ದೀಪಾಶ್ರೀ
ರವರು ಮನೆಯಿಂದ ಹೊರಗೆ ಹೋದವರು ವಾಪಸ್ ಮನೆಗೆ ಬಂದಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು
ದೀಪಾಶ್ರೀ ರವರ ಪತಿ ಶ್ರೀ ಸುರೇಶ ಬಿ.ಎಲ್. ರವರು ಕೊಟ್ಟ ದೂರಿನ ಮೇರೆಗೆ ಆಲೂರು ಠಾಣೆಯಲ್ಲಿ
ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ದೀಪಾಶ್ರೀ ಕೋಂ ಸುರೇಶ ಬಿ.ಎಲ್., 34 ವರ್ಷ, ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾದ
ಹೆಂಗಸಿನ ಬಗ್ಗೆ ಸುಳಿವು ಸಿಕ್ಕಲ್ಲಿ ಆಲೂರು ಠಾಣೆ ಫೋನ್ ನಂ. 08170-218231 ಕ್ಕೆ ಸಂಪರ್ಕಿಸುವುದು.
ಮನುಷ್ಯ ಕಾಣೆ : ದಿನಾಂಕ: 11-07-2018 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ಹಾಸನ ನಗರ, ಸಹ್ಯಾದ್ರಿ ಚಿತ್ರಮಂದಿರದ ಹಿಂಭಾಗದಲ್ಲಿರುವ ಸಮಾಜ ರಸ್ತೆ ವಾಸಿ
ಖಲೀಮ್ ಪಾಷ ರವರು ಎಂದಿನಂತೆ ಹಣ್ಣಿನ ವ್ಯಾಪಾರ ಮತ್ತು ಲೋಡ್ ಮಾಡುವ ಕೆಲಸಕ್ಕೆಂದು ಮನೆಯಿಂದ
ಹೋದವರು ವಾಪಸ್ ಮನೆಗೆ ಬಾರದೆ ದಿನಾಂಕ: 14-07-2018 ರಂದು ಫೋನ್ ಮೂಲಕ ಚಾಮರ್ುಡಿಯಲ್ಲಿದ್ದೇನೆಂದು ಹೇಳಿದವರು ವಾಪಸ್ ಮನೆಗೆ ಬಾರದೆ
ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು
ಖಲೀಂ ಪಾಷ ರವರ ಪತ್ನಿ ಶ್ರೀಮತಿ ಶತಾಜ್ ಭಾನು ರವರು ದಿನಾಂಕ: 04-08-2018 ರಂದು ಕೊಟ್ಟ ದೂರಿನ ಮೇರೆಗೆ ಹಾಸನ ನಗರ
ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಮನುಷ್ಯನ ಚಹರೆ: ಖಲೀಂ ಪಾಷಾ, 40 ವರ್ಷ, 5'8'' ಅಡಿ ಎತ್ತರ, ಕನ್ನಡ, ಮತ್ತು ಉದರ್ು ಭಾಷೆ ಮಾತನಾಡುತ್ತಾರೆ.
ಕಾಣೆಯಾದ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಹಾಸನ ನಗರ ಠಾಣೆ ಫೋನ್ ನಂ. 08172-268333 ಕ್ಕೆ ಸಂಪರ್ಕಿಸುವುದು.
No comments:
Post a Comment