ಪತ್ರಿಕಾ ಪ್ರಕಟಣೆ
ದಿನಾಂಕ: 03-08-2018
ಮನುಷ್ಯ ಕಾಣೆ : ದಿನಾಂಕ: 31-07-2018 ರಂದು ಬೆಳಿಗ್ಗೆ 09-00 ಗಂಟೆ ಸಮಯದಲ್ಲಿ ಹಾಸನ ಸತ್ಯಮಂಗಲ ಕೆಹೆಚ್ಬಿ
ಬಡಾವಣೆ ವಾಸಿ ಮೂರ್ತಿ ರವರು ಹಾಸನ ಬಿ.ಎಂ. ರಸ್ತೆ ಜುವೆಲ್ ರಾಕ್ ಹೋಟೆಲ್ ಎದುರು ಚಪ್ಪಡಿ ಕಲ್ಲು
ಅಂಗಡಿ ವ್ಯಾಪಾರಕ್ಕೆ ಎಂದಿನಂತೆ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ
ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಮೂರ್ತಿ ರವರ ಪತ್ನಿ ಶ್ರೀಮತಿ ಉಮಾ
ರವರು ದಿನಾಂಕ: 02-08-2018 ರಂದು ಕೊಟ್ಟ ದೂರಿನ ಮೇರೆಗೆ ಹಾಸನ ಬಡಾವಣೆ
ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ವ್ಯಕ್ತಿಯ ಚಹರೆ: ಮೂರ್ತಿ, 36 ವರ್ಷ, 5'5'' ಅಡಿ ಎತ್ತರ, ಕನ್ನಡ ಮತ್ತು ತಮಿಳು ಭಾಷೆ ಮಾತನಾಡುತ್ತಾರೆ.
ಮನೆಯಿಂದ ಹೋಗುವಾಗ ನೀಲಿಶರ್ಟ್, ಬ್ಲ್ಯೂ ಜರ್ಕಿನ್, ನೀಲಿ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ. ಕಾಣೆಯಾದ ಮನುಷ್ಯನ ಬಗ್ಗೆ ಸುಳಿವು
ಸಿಕ್ಕಲ್ಲಿ ಹಾಸನ ಬಡಾವಣೆ ಠಾಣೆ ಫೋನ್ ನಂ. 08172-268967 ಕ್ಕೆ ಸಂಪರ್ಕಿಸುವುದು.
No comments:
Post a Comment