ಪತ್ರಿಕಾ ಪ್ರಕಟಣೆ ದಿನಾಂಕ: 12-07-2018.
ಜೂಜಾಡುತ್ತಿದ್ದ 18 ಜನರ ಬಂಧನ, ಬಂಧಿತರಿಂದ 22,300/- ನಗದು ವಶ : ದಿನಾಂಕ: 11-07-2018 ರಂದು ರಾತ್ರಿ 09-00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಬಿಟ್ಟಗೌಡನಹಳ್ಳಿ ಹೆಚ್ಪಿ ಪೆಟ್ರೋಲ್ ಬಂಕ್ ಹಿಂಭಾಗ
ಜಿಲ್ಲಾ ಅಂಗವಿಕಲರ ಚೇತನ ಕ್ಲಬ್ನಲ್ಲಿ ಇಸ್ಪೀಟ್
ಜೂಜಾಟ ಆಡುತ್ತಿದ್ದಾರೆಂದು ಸಿಪಿಐ ಶ್ರೀ ಸತ್ಯನಾರಾಯಣ ಹಾಸನ ನಗರ ವೃತ್ತ ರವರಿಗೆ ಬಂದ
ಖಚಿತ ಮಾಹಿತಿ ಮೇರೆಗೆ ಮೇಲಾಧಿಕಾರಿಗಳ ಅನುಮತಿ
ಪಡೆದು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದ ಹೆಸರು ವಿಳಾಸ
ಕೇಳಲಾಗಿ 1) ವಿಷ್ಣುವರ್ಧನ ಬಿನ್ ವೆಂಕಟರಮಾನುಜಯ್ಯ, 35 ವರ್ಷ, ಕಂಚಮಾರನಹಳ್ಳಿ, ಕಸಬಾ ಹೋಬಳಿ, ಹಾಸನ ತಾಲ್ಲೂಕು 2) ಸ್ವಾಮಿ ಬಿನ್ ದೇವರಾಜೇಗೌಡ, 33 ವರ್ಷ, ಬೂವನಹಳ್ಳಿ ಗ್ರಾಮ, ಕಸಬಾ ಹೋಬಳಿ, ಹಾಸನ ತಾಲ್ಲೂಕು 3) ಜಯರಾಂ ಬಿನ್ ರಾಮೇಗೌಡ, 36 ವರ್ಷ, ಜೈಲ್ ಹಿಂಭಾಗ, ಶ್ರೀನಗರ, ಹಾಸನ 4) ಪರ್ವೇಜ್ ಬಿನ್ ಬಾಬಾಸಾಬ್, 41 ವರ್ಷ, ಖಾಜಿಮೊಹಲ್ಲಾ, ಆಲೂರು 5) ಶಿವಣ್ಣ ಬಿನ್ ರಂಗಸ್ವಾಮಿ, 32 ವರ್ಷ, ಕೌಶಿಕ ಗ್ರಾಮ, ಹಾಸನ ತಾಲ್ಲೂಕು 6) ಹರೀಶ್ ಬಿನ್ ಪದ್ಮರಾಜ್, 36 ವರ್ಷ, ಸತ್ಯಮಂಗಲ, ಹಾಸನ ತಾಲ್ಲೂಕು 7) ಮಧು ಬಿನ್ ಮಂಜೇಗೌಡ, 31 ವರ್ಷ, ಕೌಶಿಕ ಗ್ರಾಮ, ಶಾಂತಿಗ್ರಾಮ ಹೋಬಳಿ, ಹಾಸನ ತಾಲ್ಲಕು 8) ರಾಜು ಬಿನ್ ಅಮರ್ಶೇಖರ್, 38 ವರ್ಷ, ಪಾಂಡುರಂಗ ದೇವಸ್ಥಾನ ಹತ್ತಿರ
ಹಾಸನ 9) ನಸ್ರವುಲ್ಲಾ ಷರೀಫ್ ಬಿನ್ ಮಹಮದ್
ಷರೀಫ್, 48 ವರ್ಷ, ಹೆಚ್.ಬಿ.ಎಸ್. ಹಾಲ್ ಹತ್ತಿರ, ಹಾಸನ 10) ಪಾಪೇಗೌಡ ಬಿನ್ ನರಸಿಂಹೇಗೌಡ, 51 ವರ್ಷ, ಕೊಕ್ಕನಘಟ್ಟ, ಕಸಬಾ ಹೋಬಳಿ, ಹಾಸನ ತಾಲ್ಲೂಕು 11) ಹನುಮೇಗೌಡ ಬಿನ್ ರಂಗೇಗೌಡ, 33 ವರ್ಷ,
ಕೌಶಿಕ
ಗ್ರಾಮ, ಶಾಂತಿಗ್ರಾಮ ಹೋಬಳಿ, ಹಾಸನ ತಾಲ್ಲಕ 12) ಸ್ವಾಮಿ ಬಿನ್ ರಾಜೇಗೌಡ, 41 ವರ್ಷ, ಆಡುವಳ್ಳಿ, ಹಾಸನ ನಗರ 13) ಮಹೇಶ್ ಬಿನ್ ನಂಜೇಗೌಡ, 34 ವರ್ಷ, ಹೆಚ್.ಮೈಲನಹಳ್ಳಿ ಗ್ರಾಮ, 14) ಉದಯ್ಕುಮಾರ್ ಬಿನ್ ಲೇಟ್ ಪರಮೇಶ್, ಆರ್ಯಭಟ ರಸ್ತೆ, ಜಯನಗರ, ಹಾಸನ 15) ಯೋಗೇಶ್ ಬಿನ್ ಡಿ.ಆರ್. ವೆಂಕಟೇಶ್, 43 ವರ್ಷ, ದೇವರಾಯಪಟ್ಟಣ, ಹಾಸನ 16) ದೀಪು ಬಿನ್ ರುದ್ರಾಚಾರಿ, 38 ವರ್ಷ, ಗುಡ್ಡೇನಹಳ್ಳಿಕೊಪ್ಪಲು, ತಣ್ಣೀರುಹಳ್ಳ, ಹಾಸನ ನಗರ 17) ಪದ್ಮರಾಜು ಬಿನ್ ಕೃಷ್ಣೇಗೌಡ, 39 ವರ್ಷ, ಶಾಂತಿನಗರ, ಹಾಸನನಗರ 18) ಮಂಜುನಾಥ ಬಿನ್ ಮಲ್ಲೇಶಗೌಡ, 32 ವರ್ಷ, ಆಡುವಳ್ಳಿ ಹಾಸನ ನಗರ ಎಂದು
ತಿಳಿಸಿದವರನ್ನು ದಸ್ತಗಿರಿ ಮಾಡಿಕೊಂಡು, ಅವರ ವಶದಲ್ಲಿದ್ದ 22,300/- ನಗದನ್ನು ಅಮಾನತ್ತುಪಡಿಸಿಕೊಂಡು ಹಾಸನ ನಗರ
ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.
ಮನುಷ್ಯ ಕಾಣೆ : ದಿನಾಂಕ: 07-07-2018 ರಂದು ಬೆಳಿಗ್ಗೆ 06-30 ಗಂಟೆ ಸಮಯದಲ್ಲಿ ಸಕಲೇಶಪುರ ತಾಲ್ಲೂಕು, ಆಚಂಗಿ ಗ್ರಾಮದ ಯೂಸೂಫ್ ರವರು
ಕಣ್ಣೂರಿಗೆ ಹೋಗಿ ಬರುವುದಾಗಿ ಮನೆಯಿಂದ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ.
ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಯೂಸೂಫ್ ರವರ ಪತ್ನಿ
ಶ್ರೀಮತಿ ರಮುಲತ್ ರವರು ದಿನಾಂಕ: 11-07-2018 ರಂದು ಕೊಟ್ಟ ದೂರಿನ ಮೇರೆಗೆ ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ
ಕೈಗೊಂಡಿರುತ್ತದೆ. ಕಾಣೆಯಾದ ವ್ಯಕ್ತಿಯ ಚಹರೆ: ಯೂಸೂಫ್, 58 ವರ್ಷ, 5'2'' ಅಡಿ ಎತ್ತರ, ಕನ್ನಡ ಮತ್ತು ಉರ್ದು ಭಾಷೆ
ಮಾತನಾಡುತ್ತಾರೆ. ಕಾಣೆಯಾದ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಸಕಲೇಶಪುರ ನಗರ ಠಾಣೆ ಫೋನ್ ನಂ. 08173-244100 ಕ್ಕೆ ಸಂಪರ್ಕಿಸುವುದು.
No comments:
Post a Comment