ಪತ್ರಿಕಾ ಪ್ರಕಟಣೆ ದಿನಾಂಕ: 03-07-2018
ಕಾರು ಬೈಕ್ಗೆ ಡಿಕ್ಕಿ, ಒಂದು ಸಾವು, ಇಬ್ಬರಿಗೆ ಗಾಯ : ದಿನಾಂಕ: 01-07-2018 ರಂದು ಮಧ್ಯಾಹ್ನ 4-00 ಗಂಟೆ ಸಮಯದಲ್ಲಿ ತುಮಕೂರು ಜಿಲ್ಲೆ, ತಿಪಟೂರಿನ ಗಾಂದಿನಗರದ ವಾಸಿ ಶ್ರೀ ಶೌಕತ್, ರವರ ಬಾಬ್ತು ಕೆಎ-44, ಹೆಚ್-459 ರ ಹೋಂಡಾ ಆಕ್ಟೀವಾ ಬೈಕ್ನಲ್ಲಿ ಶ್ರೀಮತಿ ಫರ್ವಿನ್
ಮತ್ತು ಶ್ರೀ ಶಹೀದ್,
ರವರನ್ನು
ಕೂರಿಸಿಕೊಂಡು ಅರಸೀಕೆರೆ ತಾಲ್ಲೂಕು, ಜಾವಗಲ್ ದರ್ಗಾಕ್ಕೆ ಹೋಗಲು ಅರಸೀಕೆರೆ ತಾಲ್ಲೂಕು, ಬಾಣಾವರ ರೈಲ್ವೆ ಬ್ರಿಡ್ಜ್, ಹತ್ತಿರ ಎನ್ಹೆಚ್-234ರ ರಸ್ತೆಯಲ್ಲಿ ಹೋಗುತ್ತಿದ್ದಾಗ ಹಿಂಬದಿಯಿಂದ
ಬಂದ ಕೆಎ-13, ಸಿ-2683 ರ ಬೊಲೋರೋ ವಾಹನದ ಚಾಲಕ ತನ್ನ ವಾಹನವನ್ನು
ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ಶೌಕತ್, ಫರ್ವಿನ್, ಶಹೀದ್, ರವರುಗಳಿಗೆ ತೀವ್ರ ಸ್ವರೂಪದ
ರಕ್ತಗಾಯಗಳಾಗಿದ್ದು,
ಚಿಕಿತ್ಸೆಗಾಗಿ
ಅರಸೀಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಸರ್ಕಾರಿ ಆಸ್ಪತ್ರೆಗೆ
ದಾಖಲಿಸಿದ್ದು, ಶ್ರೀ ಶೌಕತ್ ಬಿನ್ ಜಾಫಾರ್ ಸಾಬ್, 45 ವರ್ಷ, ಗಾಂಧಿನಗರ ತಿಪಟೂರು, ತುಮಕೂರು ಜಿಲ್ಲೆ ರವರು ಚಿಕಿತ್ಸೆ
ಫಲಕಾರಿಯಾಗದೇ ಮೃತಪಟ್ಟಿರುತ್ತಾರೆಂದು ಮೃತರ ಮಗ ಶ್ರೀ ಅಮೀನ್, ರವರು ಕೊಟ್ಟ ದೂರಿನ ಮೇರೆಗೆ ಬಾಣಾವರ ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಹೆಂಗಸು ಕಾಣೆ : ಈಗ್ಗೆ 8 ದಿನಗಳ ಹಿಂದೆ ತುಮಕೂರು ಜಿಲ್ಲೆ, ತಿಪಟೂರು ತಾಲ್ಲೂಕು,
ಸೂರನಾಯಕನಹಳ್ಳಿ
ಗ್ರಾಮದ ವಾಸಿ ಶ್ರೀಮತಿ ಶ್ವೇತಾ, ತವರು ಮನೆಯಾದ ಬೇಲೂರು ತಾಲ್ಲೂಕು, ಹಳೇಬೀಡು ಹೋಬಳಿ, ದೊಡ್ಡಕೋಡಿಕೊಪ್ಪಲು ಗ್ರಾಮಕ್ಕೆ ಬಂದಿದ್ದು, ದಿನಾಂಕ: 01-07-2018 ರಂದು ಸಂಜೆ 7-30 ಗಂಟೆಗೆ ಮನೆಯಿಂದ ಹೊರಗೆ ಹೋದವರು
ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ
ಪತ್ತೆಮಾಡಿಕೊಡಬೇಕೆಂದು ಶ್ರೀಮತಿ ಶ್ವೇತಾಳ ತಾಯಿ ಶ್ರೀಮತಿ ಲಕ್ಷ್ಮಮ್ಮ, ರವರು ಕೊಟ್ಟ ದೂರಿನ ಮೇರೆಗೆ ಹಳೇಬೀಡು
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಶ್ರೀಮತಿ ಶ್ವೇತಾ
ಕೋಂ ಚಲುವರಾಜು @ ದಿನೇಶ್, 24 ವರ್ಷ, 5'5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಮನೆಯಿಂದ ಹೋಗುವಾಗ ಹಳದಿ ಬಣ್ಣದ ಚೂಡಿದಾರ
ಧರಿಸಿರುತ್ತಾಳೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08177-273201 ಕ್ಕೆ ಸಂಪರ್ಕಿಸುವುದು.
No comments:
Post a Comment