ಪತ್ರಿಕಾ
ಪ್ರಕಟಣೆ ದಿನಾಂಕ: 28-07-2018.
ಲಾರಿ
ಡಿಕ್ಕಿ 2
ವರ್ಷದ ಬಾಲಕ ಸಾವು
ಮಂಡ್ಯ ಜಿಲ್ಲೆ, ಕೆ.ಆರ್.ಪೇಟೆ
ತಾಲ್ಲೂಕು, ಅಗ್ರಾಹರ ದೊಡ್ಡಜೀರಮ್ಮ ಬೀದಿ ಹರೀಶ ರವರ ಮಗ
ಅಜಿಂತ್ಯನು ತಾತನ ಮನೆ ಚನ್ನರಾಯಪಟ್ಟಣ ತಾಲ್ಲೂಕು, ನುಗ್ಗೇಹಳ್ಳಿ ಹೋಬಳಿ, ಜಂಬೂರು
ಗ್ರಾಮದ ತಿಮ್ಮಪ್ಪ ರವರ ಮನೆಯಲ್ಲಿದ್ದು, ದಿನಾಂಕ: 27-07-2018 ರಂದು ಮಧ್ಯಾಹ್ನ 12-30 ಗಂಟೆ
ಸಮಯದಲ್ಲಿ ಜಂಬೂರಿನ ಸರ್ಕಾರಿ ಶಾಲೆಯ ಪಕ್ಕದಲ್ಲಿ ಆಟವಾಡುತ್ತಿರುವಾಗ ಚನ್ನರಾಯಪಟ್ಟಣದ ಕಡೆಯಿಂದ
ಬಂದಂತಹ ಕೆಎ-44-8346 ರ ಮಿನಿ ಅಶೋಕ ಲೈಲ್ಯಾಂಡ್ ವಾಹನದ ಚಾಲಕ ತನ್ನ
ವಾಹನವನ್ನು ಓವರ್ಟೇಕ್ ಮಾಡಲು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ
ತೀವ್ರ ಸ್ವರೂಪದ ರಕ್ತಗಾಯಗಳಾಗಿ ಚಿಕಿತ್ಸೆಗಾಗಿ ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಗೆ
ಸೇರಿಸಿದ್ದು, ಪರೀಕ್ಷಿಸಿದ ವೈದ್ಯರು ಅಜಿಂತ್ಯ ಕೆ.ಹೆಚ್ ಬಿನ್
ಹರೀಶ, 2 ವರ್ಷ ರವರು ಮೃತಪಟ್ಟಿರುತ್ತಾರೆಂದು ಮೃತರ ತಂದೆ
ಶ್ರೀ ಹರೀಶ ರವರು ಕೊಟ್ಟ ದೂರಿನ ಮೇರೆಗೆ ನುಗ್ಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ
ಕೈಗೊಂಡಿರುತ್ತದೆ.
ಯಾವುದೋ
ವಾಹನ ಸೈಕಲ್ಗೆ ಡಿಕ್ಕಿ ಸೈಕಲ್ ಸವಾರ ಸಾವು
ದಿನಾಂಕ: 28-07-2018 ರಂದು
ಬೆಳಿಗ್ಗೆ ಸುಮಾರು 05-30 ಗಂಟೆ
ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಮೂಡನಹಳ್ಳಿ
ಗಾಮದ ಸಿದ್ದೇಶ್ ರವರು ಎಂದಿನಂತೆ ಜಾಜೂರಿನ ಕರ್ನಾಟಕ
ಬ್ಯಾಂಕ್ ಎಟಿಎಂನಲ್ಲಿ ಸೆಕ್ಯೂರಿಟಿ ಕೆಲಸಕ್ಕೆ ಹೋಗಲು ಅರಸೀಕೆರೆ ಪಟ್ಟಣ, ಬಿ ಹೆಚ್. ರಸ್ತೆ, ಕೃಷ್ಣ
ಕಲ್ಯಾಣ ಮಂಟಪದ ಮುಂಭಾಗ ಸೈಕ್ ಲ್ ನಲ್ಲಿ ಹೋಗುತ್ತಿದ್ದಾಗ ಯಾವುದೋ ವಾಹನದ ಚಾಲಕ ತನ್ನ
ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ತೀವ್ರ ಸ್ವರೂಪದ
ರಕ್ತಗಾಯಳಾಗಿ ಸಿದ್ದೇಶ್, 45 ವರ್ಷ ರವರು
ಮೃತಪಟ್ಟಿರುತ್ತಾರೆಂದು ಮೃತರ ಪತ್ನಿ ಶ್ರೀಮತಿ ತ್ರಿವೇಣಿ ರವರು ಕೊಟ್ಟ ದೂರಿನ ಮೇರೆಗೆ
ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.
No comments:
Post a Comment