* * * * * * HASSAN DISTRICT POLICE

Monday, July 9, 2018

HASSAN DISTRICT PRESS NOTE 09-07-2018




                                            ಪತ್ರಿಕಾ  ಪ್ರಕಟಣೆ                     ದಿನಾಂಕ: 09-07-2018.

ಟ್ರ್ಯಾಕ್ಟರ್ ನಿಂದ ಬಿದ್ದು, ವ್ಯಕ್ತಿ ಸಾವು:

       ದಿನಾಂಕ: 08-07-2018 ರಂದು ಮಧ್ಯಾಹ್ನ 02-30 ಗಂಟೆ ಸಮಯದಲ್ಲಿ  ಆಲೂರು ತಾಲ್ಲೂಕು, ಕುಂದೂರು ಹೋಬಳಿ, ಚಟ್ಟನಹಳ್ಳಿ ಗ್ರಾಮದ ನಿಂಗರಾಜು ಕೆಎ-46-ಟಿ-3169 ರ ಟ್ರ್ಯಾಕ್ಟರ್ನಲ್ಲಿ ಗದ್ದೆ ಉಳುಮೆ ಮಾಡುತ್ತಿದ್ದಾಗ ಟ್ರ್ಯಾಕ್ಟರ್ನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಗದ್ದೆಯ ಬದುವಿನ ಮೇಲೆ ಹತ್ತಿಸಿದ್ದರ ಪರಿಣಾಮ ಟ್ರ್ಯಾಕ್ಟರ್ ಮಗುಚಿ ಬಿದ್ದು ಟ್ರ್ಯಾಕ್ಟರ್ ಕೆಳಭಾಗಕ್ಕೆ ಸಿಕ್ಕಿ ಹಾಕಿಕೊಂಡು ತೀವ್ರ ಸ್ವರೂಪದ ರಕ್ತಗಾಯಗಳಾಗಿ ನಿಂಗರಾಜು ಬಿನ್ ವೀರಭದ್ರೇಗೌಡ, 37 ವರ್ಷ ರವರು  ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆಂದು ಮೃತರ ಅಣ್ಣ ಮಾದಪ್ಪ ರವರು ಕೊಟ್ಟ ದೂರಿನ ಮೇರೆಗೆ  ಆಲೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

ಹೆಂಗಸು ಕಾಣೆ

     ಅರಕಲಗೂಡು ತಾಲ್ಲೂಕು, ಕಸಬಾ ಹೋಬಳಿ, ಹೆತ್ತಗೌಡನಹಳ್ಳಿ ಗ್ರಾಮದ ಹನುಮಂತೇಗೌಡ ರವರ ಮಗಳು  ಸೌಮ್ಯ ರವರನ್ನು ದಿನಾಂಕ: 25-06-2018 ರಂದ ಹಾಸನದ ಹರೀಶ ರವರಿಗೆ ಮದುವೆ ಮಾಡಿಕೊಟ್ಟಿದ್ದು, ಮದುವೆಯಾದ ದಿನದಿಂದ ಸೌಮ್ಯ ತಾಯಿ ಮನೆಯಲ್ಲಿದ್ದವಳು ದಿನಾಂಕ: 07-07-2018 ರಂದು ಮಧ್ಯಾಹ್ನ 01-15 ಗಂಟೆ ಸಮಯದಲ್ಲಿ ಮನೆಯಿಂದ ಹೊರಗಡೆ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಸೌಮ್ಯ ರವರ ತಾಯಿ ಶ್ರೀಮತಿ ರೇಣುಕ ರವರು ಕೊಟ್ಟ ದೂರಿನ ಮೇರೆಗೆ ಅರಕಲಗೂಡು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಸೌಮ್ಯ ಹೆಚ್.ಹೆಚ್ ಕೋಂ ಹರೀಶ, 28 ವರ್ಷ, 5'3'' ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾಳೆ ಕಾಣೆಯಾದ ಹೆಂಗಸಿನ ಬಗ್ಗೆ ಸುಳಿವು ಸಿಕ್ಕಲ್ಲಿ ಅರಕಲಗೂಡು ಠಾಣೆ ಫೋನ್ ನಂ. 08175-220249 ಕ್ಕೆ ಸಂಪರ್ಕಿಸುವುದು.


No comments: