ಪತ್ರಿಕಾ ಪ್ರಕಟಣೆ ದಿನಾಂಕ:
28-06-2018
ಜೂಜಾಡುತ್ತಿದ್ದ 9 ಜನರ ಬಂಧನ, ಬಂಧಿತರಿಂದ
5,190/- ನಗದು ವಶ : ದಿನಾಂಕ: 27-06-2018 ರಂದು ರಾತ್ರಿ 11-00 ಗಂಟೆ ಸಮಯದಲ್ಲಿ ಅರಸೀಕೆರೆ
ಪಟ್ಟಣದ ಜೇನುಕಲ್ ನಗರ ಪಕ್ಕದಲ್ಲಿರುವ ಜಾಫರ್ ರವರ ಮನೆಯ ಮಹಡಿ ರೂಂನಲ್ಲಿ ಅಂದರ್-ಬಾಹರ್ ಅಕ್ರಮ
ಇಸ್ಪೀಟು ಜೂಜಾಟವಾಡುತ್ತಿದ್ದಾರೆಂದು ಡಿವೈ.ಎಸ್.ಪಿ ಶ್ರೀ ಸದಾನಂದ ತಿಪ್ಪಣ್ಣನವರ್ ಅರಸೀಕೆರೆ
ಉಪ-ವಿಭಾಗ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ
ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಸದರ್ಾರ್ ಬಿನ್ ರಹೀಂಸಾಬ್, 34 ವರ್ಷ, ಜೇನುಕಲ್ ನಗರ, ಅರಸೀಕೆರೆ ಪಟ್ಟಣ 2) ಸೆಫಿ ಬಿನ್ ಲೇಟ್ ಗೌಸ್ ಸಾಬ್, 48 ವರ್ಷ, 9 ನೇ ಕ್ರಾಸ್, ಹಾಸನ ರಸ್ತೆ, ಅರಸೀಕೆರೆ ಪಟ್ಟಣ 3) ಸಲಾಂ ಬಿನ್ ಖಲೀಲ್, 28 ವರ್ಷ, ಮುಜಾವರ ಮೊಹಲ್ಲಾ 4) ಮೊಹಿನ್ ಬಿನ್ ಲೇಟ್ ಮಹಮದ್
ಇಕ್ಬಾಲ್,
28 ವರ್ಷ, 4 ನೇ ಕ್ರಾಸ್, ಎಂ.ಜಿ. ಸಾಹೇಬ್ ಮನೆ ಹತ್ತಿರ, ಅರಸೀಕೆರೆ ಪಟ್ಟಣ 5) ಶಕಿಲ್ ಬಿನ್ ಲೇಟ್ ಬಷೀರ್, 30 ವರ್ಷ, ಲಕ್ಷ್ಮಿಪುರ, ಅರಸೀಕೆರೆ ಪಟ್ಟಣ 6) ಸಾದಿಕ್ ಬಿನ್ ಲೇಟ್ ಅಮೀರ್ ಸಾಬ್, 27 ವರ್ಷ, 3 ನೇ ಕ್ರಾಸ್, ಲಕ್ಷ್ಮಿಪುರ, ಅರಸೀಕೆರೆ ಪಟ್ಟಣ 7) ರಿಯಾಜ್ ಬಿನ್ ಮುಕ್ತಿಯಾರ್, 25 ವರ್ಷ, ಮಟನ್ ಮಾಕರ್ೆಟ್, 3 ನೇ ಕ್ರಾಸ್, ಅರಸೀಕೆರೆ ಪಟ್ಟಣ 8) ನಟೇಶ ಬಿನ್ ತಿಮ್ಮನಾಯ್ಕ, 30 ವರ್ಷ, ಮಿನಿವಿಧಾನಸೌಧ ಹಿಂಭಾಗ, ಅರಸೀಕೆರೆ ಪಟ್ಟಣ 9) ರಂಗಸ್ವಾಮಿ ಬಿನ್ ಲೇಟ್
ನಾರಾಯಣಪ್ಪ, 30 ವರ್ಷ, ಜೇನುಕಲ್ ನಗರ, ಅರಸೀಕೆರೆ ಪಟ್ಟಣ
ಎಂದು ತಿಳಿಸಿದವರನ್ನು ದಸ್ತಗಿರಿ ಮಾಡಿಕೊಂಡು ಅವರ ವಶದಲ್ಲಿದ್ದ 5,190/- ನಗದನ್ನು ಅಮಾನತ್ತುಪಡಿಸಿಕೊಂಡು
ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.
No comments:
Post a Comment