* * * * * * HASSAN DISTRICT POLICE

Thursday, June 21, 2018

PRESS NOTE : 19-06-2018

ಪತ್ರಿಕಾ ಪ್ರಕಟಣೆ          ದಿನಾಂಕ: 19-06-2018

ಮೆಟಡೋರ್ ಲಾರಿಗೆ ಡಿಕ್ಕಿ, ಇಬ್ಬರು ಉಳಿದವರಿಗೆ ಸಣ್ಣ-ಪುಟ್ಟ ರಕ್ತಗಾಯ: ದಿನಾಂಕ: 18-06-2018 ರಂದು ಬೆಳಗಿನ ಜಾವ 5-15 ಗಂಟೆ ಸಮಯದಲ್ಲಿ ಬೆಂಗಳೂರಿನ ಗೌರಿ ಪಾಳ್ಯದ ವಾಸಿ ಶ್ರೀ ಶಫಿ, ಪತ್ನಿ ಶ್ರೀಮತಿ ಶಹತಾಜ್, ಮಗ ಕು|| ಉಮರ್, ಹಾಗೂ ಸಂಬಂಧಿಕರಾದ ಶ್ರೀ ಯೂಸಫ್, ಶ್ರೀಮತಿ ರಿಜ್ವಾನ್, ಶ್ರೀ ಅರ್ಷದ್, ಶ್ರೀ ಹರ್ಷದ್, ಶ್ರೀಮತಿ ಮುಜಿಬಾ, ರವರುಗಳು ಕೆಎ-03, ಎ-3752 ರ ಮೆಟಡೋರ್ನಲ್ಲಿ ಅರಸೀಕೆರೆ ತಾಲ್ಲೂಕು, ಜಾವಗಲ್ ದಗರ್ಾಕ್ಕೆ ಹೋಗಲು ಚನ್ನರಾಯಪಟ್ಟಣ ತಾಲ್ಲೂಕು, ಶೆಟ್ಟಿಹಳ್ಳಿ ಹತ್ತಿರ ಎನ್ಹೆಚ್-75, ಬಿ.ಎಂ. ರಸ್ತೆಯಲ್ಲಿ ಹೋಗುತ್ತಿದ್ದಾಗ ಮುಂದೆ ಹೋಗುತ್ತಿದ್ದ ಕೆಎ-03, ಎ-3752 ರ ಲಾರಿಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀಮತಿ ಶಹತಾಜ್ ಕೋಂ ಶಫಿ, 25 ವರ್ಷ, ಮತ್ತು ಮಗ ಕು|| ಉಮರ್ ಬಿನ್ ಶಫಿ, 3 ವರ್ಷ, ರವರುಗಳಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ ಹಾಗೂ ಉಳಿದವರಿಗೆ ಸಣ್ಣ-ಪುಟ್ಟ ರಕ್ತಗಾಯಗಳಾಗಿರುತ್ತದೆಂದು ಲಾರಿಯ ಚಾಲಕ ಶ್ರೀ ಬಾಸ್ಕರ್, ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಟ್ರ್ಯಾಕ್ಟರ್ ಪಲ್ಟಿ, ಒಂದು ಸಾವು, ಇಬ್ಬರಿಗೆ ಗಾಯ : ದಿನಾಂಕ: 18-06-2018 ರಂದು ಮಧ್ಯಾಹ್ನ 2-30 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಗಂಡಸಿ ಹೋಬಳಿ, ವಿಠಲಾಪುರ ಗ್ರಾಮದ ವಾಸಿ ಶ್ರೀ ಕೃಷ್ಣ, ಅದೇ ಗ್ರಾಮದ ವಾಸಿಗಳಾದ ಶ್ರೀ ಶಂಕರ & ಶ್ರೀ ಯೋಗೇಶ್, ರವರುಗಳು ಟಮೋಟೋ ಗಿಡಗಳಿಗೆ ಗುಜ್ಜು ನೆಡುವ ಕೂಲಿ ಕೆಲಸಕ್ಕೆ ಜಾನ್ ಡಿಯರ್ ಟ್ರ್ಯಾಕ್ಟರ್ನಲ್ಲಿ ಅರಸೀಕೆರೆ ತಾಲ್ಲೂಕು, ಗಂಡಸಿ ಹೋಬಳಿ, ಅರಸೀಕೆರೆ-ಚನ್ನರಾಯಪಟ್ಟಣ ರಸ್ತೆ, ಹೊನ್ನಕುಮಾರನಹಳ್ಳಿ ಗ್ರಾಮದ ಹತ್ತಿರ ಹೋಗುತ್ತಿದ್ದಾಗ ಟ್ರ್ಯಾಕ್ಟರ್ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿದ್ದರ ಪರಿಣಾಮ ಟ್ರ್ಯಾಕ್ಟರ್ ಪಲ್ಟಿಯಾಗಿ ಟ್ರ್ಯಾಕ್ಟರ್ ಮೇಲೆ ಕುಳಿತಿದ್ದ ಶ್ರೀ ಕೃಷ್ಣ, ಶ್ರೀ ಯೋಗೇಶ್, ಶ್ರೀ ರವರುಗಳು ರಸ್ತೆಗೆ ಬಿದಿದ್ದು, ಶ್ರೀ ಕೃಷ್ಣ, 40 ವರ್ಷ, ವಿಠಲಾಪುರ ಗ್ರಾಮ, ಗಂಡಸಿ ಹೋಬಳಿ, ಅರಸೀಕೆರೆ ತಾಲ್ಲೂಕು, ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಅದೇ ಗ್ರಾಮದ ವಾಸಿ ಶ್ರೀ ಯೋಗೇಶ್, ರವರು ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ಕೊಟ್ಟ ದೂರಿನ ಮೇರೆಗೆ ಗಂಡಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಹೆಂಗಸು ಕಾಣೆ : ದಿನಾಂಕ: 14-06-2018 ರಂದು ಬೆಳಿಗ್ಗೆ 6-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ದಂಡಿಗನಹಳ್ಳಿ ಹೋಬಳಿ, ಕುಂಬೇನಹಳ್ಳಿ ಗ್ರಾಮದ ವಾಸಿ ಶ್ರೀ ಕೆ.ಸಿ. ಯೋಗೇಶ್, ರವರು ಪತ್ನಿ ಶ್ರೀಮತಿ ಸುಜಾತ, ಮಗುವಿನೊಂದಿಗೆ ಈಗ್ಗೆ 1ಳಿ ವರ್ಷದಿಂದ ಚನ್ನರಾಯಪಟ್ಟಣದ ಗಾಯಿತ್ರಿ ಬಡಾವಣೆಯಲ್ಲಿ ವಾಸವಾಗಿದ್ದು, ಮನೆಯಿಂದ ಹೊರಗೆ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀಮತಿ ಸುಜಾತಳ ಪತಿ ಶ್ರೀ ಕೆ.ಸಿ. ಯೋಗೇಶ್, ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಶ್ರೀಮತಿ ಸುಜಾತ ಕೋಂ ಕೆ.ಸಿ. ಯೋಗೇಶ್, 28 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಮನೆಯಿಂದ ಹೋಗುವಾಗ ಹಸಿರು ಬಣ್ಣದ ಸೀರೆ ಮತ್ತು ರವಿಕೆ ಧರಿಸಿರುತ್ತಾರೆ.

No comments: