ಪತ್ರಿಕಾ ಪ್ರಕಟಣೆ ದಿನಾಂಕ: 18-06-2018
ಬೈಕ್ನ ನಿಯಂತ್ರಣ
ತಪ್ಪಿ, ಒಂದು ಸಾವು ಇಬ್ಬರಿಗೆ ಗಾಯ : ದಿನಾಂಕ: 17-06-2018 ರಂದು ಸಂಜೆ 5-30 ಗಂಟೆ ಸಮಯದಲ್ಲಿ ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕು, ಬೀಚನಹಳ್ಳಿ ವಾಸಿ ಶ್ರೀ ಶೇಷಾದ್ರಿ @ ಶಶಿಧರ್, ರವರು ಸ್ನೇಹಿತರಾದ ಶ್ರೀ ರುದ್ರೇಗೌಡ, ಮತ್ತು ಶ್ರೀ ದೇವರಾಜು ರವರುಗಳು ಕೆಎ-54, ಹೆಚ್-2072 ರ ಹೀರೋ ಹೋಂಡಾ ಬೈಕ್ನಲ್ಲಿ
ಚನ್ನರಾಯಪಟ್ಟಣ ತಾಲ್ಲೂಕು, ಶ್ರವಣಬೆಳಗೊಳ ಟೌನ್, ಅಫಲಯ ವೃತ್ತ, ನಾಗಮಂಗಲ ರಸ್ತೆ ಹತ್ತಿರ
ಹೋಗುತ್ತಿದ್ದಾಗ ಬೈಕ್ ಚಾಲಕ ಬೈಕನ್ನು ನಿರ್ಲಕ್ಷ್ಯತೆಯಿಂದ ಓಡಿಸಿದ್ದರ ಪರಿಣಾಮ ಬೈಕ್ನ
ನಿಂಯಂತ್ರಣ ತಪ್ಪಿ ಬೈಕ್ ಹಿಂಬದಿ ಕುಳಿತ್ತಿದ್ದ
ಶ್ರೀ ಶೇಷಾದ್ರಿ @ ಶಶಿಧರ್ ಮತ್ತು ಶ್ರೀ ರುದ್ರೇಗೌಡ, ರವರುಗಳು ಬೈಕ್ನಿಂದ ಬಿದ್ದು, ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಚನ್ನರಾಯಪಟ್ಟಣದ ಪುಣ್ಯ
ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಜನಪ್ರಿಯ ಆಸ್ಪತ್ರೆಗೆ
ದಾಖಲಿಸಿದ್ದು,
ಶ್ರೀ
ಶೇಷಾದ್ರಿ @
ಶಶಿಧರ್
ಬಿನ್ ಕೆಂಪಲಿಂಗೇಗೌಡ,
33 ವರ್ಷ, ಬೀಚನಹಳ್ಳಿ ಗ್ರಾಮ, ನಾಗಮಂಗಲ ತಾಲ್ಲೂಕು, ಮಂಡ್ಯ ಜಿಲ್ಲೆ ರವರು ಚಿಕಿತ್ಸೆ ಫಲಕಾಯಾಗದೇ
ಮೃತಪಟ್ಟಿರುತ್ತಾರೆಂದು ಪ್ರತ್ಯಕ್ಷದರ್ಶಿ ಶ್ರೀ ಶಿವರಾಜ್, ರವರು ಕೊಟ್ಟ ದೂರಿನ ಶ್ರವಣಬೆಳಗೊಳ
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
No comments:
Post a Comment