* * * * * * HASSAN DISTRICT POLICE

Thursday, June 21, 2018

PRESS NOTE : 18-06-2018


ಪತ್ರಿಕಾ ಪ್ರಕಟಣೆ                                    ದಿನಾಂಕ: 18-06-2018

ಬೈಕ್ನ ನಿಯಂತ್ರಣ ತಪ್ಪಿ, ಒಂದು ಸಾವು ಇಬ್ಬರಿಗೆ ಗಾಯ : ದಿನಾಂಕ: 17-06-2018 ರಂದು ಸಂಜೆ 5-30 ಗಂಟೆ ಸಮಯದಲ್ಲಿ ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕು, ಬೀಚನಹಳ್ಳಿ ವಾಸಿ ಶ್ರೀ ಶೇಷಾದ್ರಿ @ ಶಶಿಧರ್, ರವರು ಸ್ನೇಹಿತರಾದ ಶ್ರೀ ರುದ್ರೇಗೌಡ, ಮತ್ತು ಶ್ರೀ ದೇವರಾಜು ರವರುಗಳು ಕೆಎ-54, ಹೆಚ್-2072 ರ ಹೀರೋ ಹೋಂಡಾ ಬೈಕ್ನಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಶ್ರವಣಬೆಳಗೊಳ ಟೌನ್, ಅಫಲಯ ವೃತ್ತ, ನಾಗಮಂಗಲ ರಸ್ತೆ  ಹತ್ತಿರ ಹೋಗುತ್ತಿದ್ದಾಗ ಬೈಕ್ ಚಾಲಕ ಬೈಕನ್ನು ನಿರ್ಲಕ್ಷ್ಯತೆಯಿಂದ ಓಡಿಸಿದ್ದರ ಪರಿಣಾಮ ಬೈಕ್ನ ನಿಂಯಂತ್ರಣ ತಪ್ಪಿ ಬೈಕ್ ಹಿಂಬದಿ ಕುಳಿತ್ತಿದ್ದ  ಶ್ರೀ ಶೇಷಾದ್ರಿ @ ಶಶಿಧರ್ ಮತ್ತು ಶ್ರೀ ರುದ್ರೇಗೌಡ, ರವರುಗಳು ಬೈಕ್ನಿಂದ ಬಿದ್ದು, ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಚನ್ನರಾಯಪಟ್ಟಣದ ಪುಣ್ಯ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಜನಪ್ರಿಯ ಆಸ್ಪತ್ರೆಗೆ ದಾಖಲಿಸಿದ್ದು, ಶ್ರೀ ಶೇಷಾದ್ರಿ @ ಶಶಿಧರ್ ಬಿನ್ ಕೆಂಪಲಿಂಗೇಗೌಡ, 33 ವರ್ಷ, ಬೀಚನಹಳ್ಳಿ ಗ್ರಾಮ, ನಾಗಮಂಗಲ ತಾಲ್ಲೂಕು, ಮಂಡ್ಯ ಜಿಲ್ಲೆ     ರವರು ಚಿಕಿತ್ಸೆ ಫಲಕಾಯಾಗದೇ ಮೃತಪಟ್ಟಿರುತ್ತಾರೆಂದು ಪ್ರತ್ಯಕ್ಷದರ್ಶಿ ಶ್ರೀ ಶಿವರಾಜ್, ರವರು ಕೊಟ್ಟ ದೂರಿನ ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

No comments: