ಪತ್ರಿಕಾ ಪ್ರಕಟಣೆ ದಿನಾಂಕ: 10-06-2018
ಆಟೋದಿಂದ ಬಿದ್ದು ಪ್ರಯಾಣಿಕನ ಸಾವು:
ದಿನಾಂಕ: 09-06-2018 ರಂದು
ಮದ್ಯಾಹ್ನ 12-30 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ಟೌನ್, ರೇಷ್ಮೇ
ಕಛೇರಿ ಎದುರು, ಹೆಚ್ ಡಿ ರೇವಣ್ಣ ಸರ್ಕಲ್, ಕಗ್ಗಲಿ
ಕಾವಲು ಗ್ರಾಮ ವಾಸಿ ಶ್ರೀ ಕೆ.ಜೆ ಪುಟ್ಟಲಕ್ಕೇಗೌಡರವರು ಚನ್ನರಾಯಪಟ್ಟಣ ಸಂತೆಯಿಂದ ಸಾಮಾನು ತೆಗೆದುಕೊಂಡು
ವಾಪಸ್ ಊರಿಗೆ ಹೋಗಲು ಚನ್ನರಾಯಪಟ್ಟಣ
ನವೋದಯ ಸರ್ಕಲ್ ನಲ್ಲಿ ಕೆಎ-46-1711 ರ
ಪ್ಯಾಸೆಂಜರ್ ಆಟೋದಲ್ಲಿ ಪ್ರಯಾಣಿಕರೊಂದಿಗೆ ಕುಳಿತು ಮದ್ಯಾಹ್ನ 12-45 ಗಂಟೆಯಲ್ಲಿ
ಹೌಸಿಂಗ್ ಬೋರ್ಡ್ ರಸ್ತೆಯ ಕೋಟೆ ಚಂದ್ರಣ್ಣರವರ ಮನೆಯ ಮುಂದೆ ಆಟೋದಲ್ಲಿ ಹೋಗುತ್ತಿದ್ದಾಗ ಆಟೋ ಚಾಲಕ ತನ್ನ ಆಟೋವನ್ನು
ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು
ಹೋಗುವಾಗ ಹಿಂದೆ ಕುಳಿತ್ತಿದ್ದ ಪುಟ್ಟಲಕ್ಕೇಗೌಡ
ಬಿನ್ ಲೇಟ್ ಜವರೇಗೌಡ 62 ವರ್ಷ, ಕಗ್ಗಲಿ
ಕಾವಲು, ರೇಷ್ಮೇ ಕಛೇರಿ ಎದುರು, ಹೆಚ್.ಡಿ
ರೇವಣ್ಣ ಸರ್ಕಲ್ ಚನ್ನರಾಯಪಟ್ಟಣಟೌನ್, ರವರು
ಆಟೋದಿಂದ ಕೆಳಗೆ ಬಿದ್ದಾಗ ತಲೆಗೆ ಹಾಗೂ ಮೈಕೈಗೆ ಪೆಟ್ಟು ಬಿದ್ದು ಸ್ಥಳದಲ್ಲೇ
ಮೃತಪಟ್ಟಿರುತ್ತಾರೆಂದು ಮೃತರ ತಮ್ಮನ ಮಗ ಶ್ರೀ ಭಾನುಪ್ರಕಾಶ್ ಟಿ.ಎಸ್ ರವರು ಕೊಟ್ಟ ದೂರಿನ
ಮೇರೆಗೆ ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಮನುಷ್ಯ ಕಾಣೆ : 1) ದಿನಾಂಕ:25-04-18 ರಂದು
ಬೆಳಿಗ್ಗೆ 11-00 ಗಂಟೆಯಲ್ಲಿ ಹಾಸನ ತಾಲ್ಲೂಕು, ಶಾಂತಿಗ್ರಾಮ
ಹೋಬಳಿ, ತ್ಯಾವೀಹಳ್ಳಿ ಗ್ರಾಮ, ಶ್ರೀ
ಜವರೇಗೌಡರವರು ಮನೆಯಿಂದ ಹೊರಗೆ ಹೋದವರು ಇದೂವರೆಗೆ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ.
ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು
ಜವರೇಗೌರವರ ಪತ್ನಿ ಶ್ರೀಮತಿ ಜಯಮ್ಮರವರು
ದಿನಾಂಕ:09-06-2018 ರಂದು
ಕೊಟ್ಟ ದೂರಿನ ಮೇರೆಗೆ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ
ಗಂಡಸಿನ ಚಹರೆ: ಶ್ರೀ ಜವರೇಗೌಡ ಬಿನ್ ದ್ಯಾವೇಗೌಡ, 65 ವರ್ಷ, 5 ಅಡಿ ಎತ್ತರ, ಕಪ್ಪು ಬಣ್ಣ, ತೆಳುವಾದ
ಮೈಕಟ್ಟು, ಮನೆಯಿಂದ ಹೋಗುವಾಗ ಬಿಳಿ ಶಟರ್್ ಮತ್ತು ಬಿಳಿ ಪಂಚೆ, ಧರಿಸಿರುತ್ತಾನೆ.
ಈತನ ಸುಳಿವು ಸಿಕ್ಕಲ್ಲಿ ಶಾಂತಿಗ್ರಾಮ ಪೊಲೀಸ್ ಠಾಣೆ ಫೋನ್ ನಂಬರ್;
08172-258038 ಕ್ಕೆ ಸಂಪರ್ಕಿಸುವುದು.
2)ದಿನಾಂಕ:04-06-18 ರಂದು
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕು, ಬೇಗೂರು
ಹೋಬಳಿ, ತೋರವಳ್ಳಿ ಗ್ರಾಮದ ಶ್ರೀ ಸಿದ್ದರಾಜುರವರು ತಮ್ಮ
ಚಿಕ್ಕಪ್ಪನ ಮನೆಗೆ ಹಣಪಡೆದುಕೊಳ್ಳಲು
ಹೊಳೇನರಸೀಪುರ ತಾಲ್ಲೂಕು ಎಳ್ಳೇಶಪುರ ಗ್ರಾಮಕ್ಕೆ ಬಂದಿದ್ದು, ದಿನಾಂಕ:06-06-18 ರಂದು ಸಂಜೆ 06-00 ಗಂಟೆಯಲ್ಲಿ
ವಾಪಸ್ ಗ್ರಾಮಕ್ಕೆ ಹೋಗಲು ಹೊಳೇನರಸೀಪುರಕ್ಕೆ ಯಾವುದೋ ಬೈಕಿನಲ್ಲಿ ಹೋಗಿದ್ದು, ಇದೂವರೆಗೆ
ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು
ಸಿದ್ದರಾಜುರವರ ತಂದೆ ಶ್ರೀ ಮಹದೇವಶೆಟ್ಟಿ ರವರು
ದಿನಾಂಕ: 09-06-2018 ರಂದು
ಕೊಟ್ಟ ದೂರಿನ ಮೇರೆಗೆ ಹೊಳೇನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಕಾಣೆಯಾದ ಗಂಡಸಿನ ಚಹರೆ: ಶ್ರೀ ಸಿದ್ದರಾಜು ಬಿನ್ ಮಹದೇವಶೆಟ್ಟಿ, 28 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು
ಬಣ್ಣ, ಸಾದಾರಣ ಮೈಕಟ್ಟು, ಮನೆಯಿಂದ
ಹೋಗುವಾಗ ಬಿಳಿ ಶಟರ್್ ಮತ್ತು ಕಪ್ಪು ಪ್ಯಾಂಟ್ ಧರಿಸಿರುತ್ತಾನೆ. ಈತನ ಸುಳಿವು ಸಿಕ್ಕಲ್ಲಿ
ಹೊಳೇನರಸೀಪುರ ನಗರ ಪೊಲೀಸ್ ಠಾಣೆ ಫೋನ್ ನಂಬರ್: 08175-273333 ಕ್ಕೆ ಸಂಪರ್ಕಿಸುವುದು.
3)ದಿನಾಂಕ:09-06-18 ರಂದು
ಮದ್ಯಾಹ್ನ 01-30 ಗಂಟೆಯಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ನುಗ್ಗೇಹಳ್ಳಿ
ಹೋಬಳಿ, ಮುತ್ತುಗದಹೊನ್ನೇನಹಳ್ಳಿ ಗ್ರಾಮದ ಶ್ರೀಮತಿ ಮಂಜುಳ ಟಿ.ವಿ ರವರು ವ್ಯವಹಾರದ
ನಿಮಿತ್ತ ಚನ್ನರಾಯಪಟ್ಟಣದ ಬ್ಯಾಂಕಿಗೆ ಪಿರ್ಯಾದಿ ಜೊತೆಯಲ್ಲಿ ಬಂದಿದ್ದು ಜೆರಾಕ್ಸ್ ಮಾಡಿಕೊಂಡು
ಬರುತ್ತೇನೆಂದು ಹೇಳಿ ಹೋದವಳು ಇದೂವರೆಗೆ ವಾಪಸ್ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ
ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು
ಶ್ರೀಮತಿ ಮಂಜುಳ ರವರ ತಂದೆ ಶ್ರೀ ವಿರೂಪಾಕ್ಷರವರು
ದಿನಾಂಕ:09-06-2018 ರಂದು
ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಕಾಣೆಯಾದ ಹೆಂಗಸಿನ ಚಹರೆ: ಶ್ರೀಮತಿ ಮಂಜುಳ ಟಿ.ವಿ ಕೊಂ ಮಹೇಶ, 26 ವರ್ಷ, 4.8 ಅಡಿ ಎತ್ತರ, ಎಣ್ಣೆಗೆಂಪು
ಬಣ್ಣ, ಸಾದಾರಣ ಮೈಕಟ್ಟು, ಮನೆಯಿಂದ
ಹೋಗುವಾಗ ಗುಲಾಬಿ ಬಣ್ಣದ ಚೂಡಿದಾರ್
ಧರಿಸಿರುತ್ತಾನೆ. ಈಕೆಯ ಸುಳಿವು ಸಿಕ್ಕಲ್ಲಿ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆ ಫೋನ್
ನಂಬರ್: 08176-272333 ಕ್ಕೆ ಸಂಪರ್ಕಿಸುವುದು.
No comments:
Post a Comment