ಪತ್ರಿಕಾ ಪ್ರಕಟಣೆ
ದಿನಾಂಕ:
03-06-2018
ಕಾರು ಬೈಕ್ಗೆ
ಡಿಕ್ಕಿ, ಬೈಕ್ ಸವಾರ ಸಾವು :
ದಿನಾಂಕ: 02-06-2018 ರಂದು
ರಾತ್ರಿ 7-30 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಶ್ರೀನಿವಾಸಪುರ
ಗ್ರಾಮದ ಸಕ್ಕರೆ ಫ್ಯಾಕ್ಟರಿ ಕ್ವಾರ್ಟಸ್ ವಾಸಿ (ಸ್ವಂತ ವಿಳಾಸ ಹೊಳೆನರಸೀಪುರ ತಾಲ್ಲೂಕು, ಹಳೇಕೋಟೆ
ಹೋಬಳಿ, ನ್ಯಾಮನಹಳ್ಳಿ ಗ್ರಾಮ) ಶ್ರೀ ಸ್ವಾಮಿಗೌಡರು ರವರ
ಬಾಬ್ತು ಕೆಎ-41 ಇ-5041 ರ ಟಿ.ವಿ.ಎಸ್. ಎಕ್ಸ್ಎಲ್ ಬೈಕ್ನಲ್ಲಿ ಚನ್ನರಾಯಪಟ್ಟಣಕ್ಕೆ ಹೋಗಿದ್ದು, ಕೆಲಸ
ಮುಗಿಸಿಕೊಂಡು ವಾಪಸ್ ಗ್ರಾಮಕ್ಕೆ ಹೋಗಲು ಚನ್ನರಾಯಪಟ್ಟಣದ ತಾಲ್ಲೂಕು, ಎನ್.
ಬಿಂಡೇನಹಳ್ಳಿ ಗ್ರಾಮದ ಹತ್ತಿರ ಚನ್ನರಾಯಪಟ್ಟಣ-ಹೊಳೆನರಸೀಪುರ ರಸ್ತೆ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ
ಬಂದ ಕೆಎ-13, ಎನ್-1056 ರ ಮಾರುತಿ ಕಾರಿನ ಚಾಲಕ ತನ್ನ ವಾಹನವನ್ನು
ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ಸ್ವಾಮಿಗೌಡ, ರವರು ಬೈಕ್
ಸಮೇತ ರಸ್ತೆಗೆ ಬಿದ್ದು, ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ
ಚನ್ನರಾಯಪಟ್ಟಣ ಸಕರ್ಾರಿ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರ
ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಸಕರ್ಾರಿ ಆಸ್ಪತ್ರೆಗೆ ದಾಖಲಿಸಿದ್ದು, ಶ್ರೀ
ಸ್ವಾಮಿಗೌಡ ಬಿನ್ ಹುನುಮೇಗೌಡ, 52 ವರ್ಷ, ನ್ಯಾಮನಹಳ್ಳಿ
ಗ್ರಾಮ, ಹಳೇಕೋಟೆ ಹೋಬಳಿ, ಹೊಳೆನರಸೀಪುರ
ತಾಲ್ಲೂಕು ರವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆಂದು ಮೃತರ ಅಳಿಯ ಶ್ರೀ ದಿನೇಶ್, ರವರು ಕೊಟ್ಟ
ದೂರಿನ ಮೇರೆಗೆ ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರರಕರಣ ದಾಖಲಾಗಿರುತ್ತದೆ.
ಹೆಂಗಸು ಕಾಣೆ
: ದಿನಾಂಕ: 11-01-2018 ರಂದು ಮಧ್ಯಾಹ್ನ 2-00 ಗಂಟೆ ಸಮಯದಲ್ಲಿ ಹಾಸನದ ವಿಶ್ವನಾಥ
ನಗರ ವಾಸಿ ಶ್ರೀಮತಿ ರಾಜೇಶ್ವರಿ, ಮನೆಯಿಂದ
ಹೊರಗೆ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ, ಎಲ್ಲಾ ಕಡೆ
ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು
ಶ್ರೀಮತಿ ರಾಜೇಶ್ವರಿ ಮಗ ಶ್ರೀ ಶ್ರೀಧರ, ರವರು ಕೊಟ್ಟ
ದೂರಿನ ಮೇರೆಗೆ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ
ಹೆಂಗಸಿನ ಚಹರೆ: ಶ್ರೀಮತಿ ರಾಜೇಶ್ವರಿ ಕೋಂ ಲೇಟ್ ಶಿವಕಮಾರೇಗೌಡ, 44 ವರ್ಷ, 5 ಅಡಿ
ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ
ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಹಸಿರು ಬಣ್ಣದ ಸೀರೆ ಮತ್ತು ರವಿಕೆ
ಧರಿಸಿರುತ್ತಾರೆ. 08172-272260 ಕ್ಕೆ ಸಂಪರ್ಕಿಸುವುದು.
No comments:
Post a Comment