ಪತ್ರಿಕಾ ಪ್ರಕಟಣೆ ದಿನಾಂಕ: 26-06-2018.
ಜೂಜಾಡುತ್ತಿದ್ದ ಮೂವರ ಬಂಧನ, ಬಂಧಿತರಿಂದ ಸುಮಾರು 3,680/- ನಗದು ವಶ: ದಿನಾಂಕ: 25-06-2018 ರಂದು
ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣದ ಬಾಗೂರು
ರಸ್ತೆಯಲ್ಲಿರುವ ಟಿಪ್ಪು ವೃತ್ತದ ಬಳಿ
ಸಾರ್ವಜನಿಕರ ಸ್ಥಳದಲ್ಲಿ ಜೂಜಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ
ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಶ್ರೀ
ಶ್ರೀನಿವಾಸ @ ಮಾಮು ಬಿನ್ ಲೇಟ್ ಸಣ್ಣೇಗೌಡ, 60 ವರ್ಷ, ಗಾಯಿತ್ರಿ
ಬಡಾವಣೆ,
ಚ್ನನರಾಯಪಟ್ಟಣ ನಗರ 2) ಜುಬೇರ್ ಪಾಷ @ ಬಾಬು ಬಿನ್
ಲೇಟ್ ಅಬ್ದುಲ್ ರೆಹಮಾನ್, 53 ವರ್ಷ, ದೊಡ್ಡಮೊಹಲ್ಲಾ
ಚನ್ನರಾಯಪಟ್ಟಣ ಟೌನ್ 3) ಶ್ರೀ ನಾಸೀರ್ ಪಾಷ ಬಿನ್ ಲೇಟ್ ಅಮೀರ್, 35 ವರ್ಷ, ರೋಷನ್ ನಗರ, ಚನ್ನರಾಯಪಟ್ಟಣ
ಟೌನ್ ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಜೂಜಾಟಾದಲ್ಲಿ ಪಣಕ್ಕಿಟ್ಟಿದ್ದ ಸುಮಾರು 3,680/- ನಗದನ್ನು
ಅಮಾನತ್ತುಪಡಿಸಿಕೊಂಡು ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ
ಕೈಗೊಂಡಿರುತ್ತೆ.
ಹುಡುಗಿ ಕಾಣೆ : ದಿನಾಂಕ: 23-06-2018 ರಂದು
ಮಧ್ಯಾಹ್ನ 12-00 ಗಂಟೆ ಸಮಯದಲ್ಲಿ ಹಾಸನದ ಶ್ರೀರಾಮನಗರ ಆರ್ಟಿಓ ಆಫೀಸ್
ಹಿಂಭಾಗದ ವಾಸಿ ಶ್ರೀ ಆನಂದ, ರವರ ಮಗಳು ಕು|| ಚೈತ್ರ, ಮನೆಯಿಂದ
ಹೊರಗೆ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ
ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ಚೈತ್ರಳ ತಂದೆ
ಶ್ರೀ ಆನಂದ, ರವರು ಕೊಟ್ಟ ದೂರಿನ ಮೇರೆಗೆ ಹಾಸನ ಬಡಾವಣೆ ಠಾಣೆಯಲ್ಲಿ
ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕು|| ಚೈತ್ರ ಬಿನ್
ಆನಂದ,
20 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು
ಬಣ್ಣ,
ಸಾಧಾರಾಣಾ ಮೈಕಟ್ಟು, ಮನೆಯಿಂದ ಹೋಗುವಾಗ ಕೆಂಪು ಬಣ್ಣದ ಚೂಡಿದಾರ
ಧರಿಸಿರುತ್ತಾಳೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08172-268967 ಕ್ಕೆ ಸಂಪರ್ಕಿಸುವುದು.
ಹೆಂಗಸು ಕಾಣೆ
: ದಿನಾಂಕ: 25-06-2018 ರಂದು ಬೆಳಿಗ್ಗೆ 9-00 ಗಂಟೆ
ಸಮಯದಲ್ಲಿ ಹಾಸನದ ಸತ್ಯಮಂಗಲ ವಾಸಿ ಶ್ರೀ ವಿನೋದಕುಮಾರ್, ಹೆಚ್.ಎಸ್.
ರವರ ಪತ್ನಿ ಶ್ರೀಮತಿ ನಯನ, ಅಂಗಡಿಗೆ ಹೋಗಿ ಹಾಲು ತೆಗೆದುಕೊಂಡು ಬರುತ್ತೇನೆಂದು
ಮನೆಯಲ್ಲಿ ಹೇಳಿ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ
ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು
ಶ್ರೀಮತಿ ನಯನ, ರವರ ಪತಿ ಶ್ರೀ ವಿನೋದಕುಮಾರ್, ರವರು ಕೊಟ್ಟ
ದೂರಿನ ಮೇರೆಗೆ ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ:
ಶ್ರೀಮತಿ ನಯನ ಕೋಂ ವಿನೋದಕುಮಾರ್, 20 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು
ಬಣ್ಣ,
ಸಾಧಾರಣಾ ಮೈಕಟ್ಟು, ಮನೆಯಿಂದ ಹೋಗುವಾಗ ಹಸಿರು ಬಣ್ಣದ ಸೀರೆ
ಧರಿಸಿರುತ್ತಾಳೆ. ಈ ಹೆಂಗಸಿನ ಸುಳಿವು ಸಿಕ್ಕಲ್ಲಿ 08172-268967 ಕ್ಕೆ ಸಂಪರ್ಕಿಸುವುದು.
ಹುಡುಗಿ ಕಾಣೆ
: ದಿನಾಂಕ: 25-06-2018 ರಂದು ಮಧ್ಯಾಹ್ನ 1-00 ಗಂಟೆ
ಸಮಯದಲ್ಲಿ ಹಾಸನದ ಉದಯಗಿರಿ ಬಡಾವಣೆ ವಾಸಿ ಶ್ರೀ ಜವರೇಗೌಡ, ರವರ ಮಗಳು ಕು|| ದೀಪ್ತಿ, ಮನೆಯಿಂದ
ಹೊರಗೆ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ
ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ದೀಪ್ತಿಯ
ತಂದೆ ಶ್ರೀ ಜವರೇಗೌಡ, ರವರು ದಿನಾಂಕ: 25-06-2018 ರಂದು ಕೊಟ್ಟ
ದೂರಿನ ಮೇರೆಗೆ ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ:
ಕು||
ದೀಪ್ತಿ ಬಿನ್ ಜವರೇಗೌಡ, 23 ವರ್ಷ, 5'4 ಅಡಿ ಎತ್ತರ, ಎಣ್ಣೆಗೆಂಪು
ಬಣ್ಣ,
ಸಾಧಾರಣಾ ಮೈಕಟ್ಟು, ಮನೆಯಿಂದ ಹೋಗುವಾಗ ಗುಲಾಬಿ ಬಣ್ಣದ ಚೂಡಿದಾರ
ಧರಿಸಿರುತ್ತಾಳೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08172-268967 ಕ್ಕೆ ಸಂಪರ್ಕಿಸುವುದು.
No comments:
Post a Comment