* * * * * * HASSAN DISTRICT POLICE

Sunday, June 17, 2018

HASSAN DISTRICT PRESS NOTE : 16-06-2018


ಪತ್ರಿಕಾ ಪ್ರಕಟಣೆ                                   ದಿನಾಂಕ: 16-06-2018

ಬೈಕಿಗೆ ಬೊಲೆರೋ ಪಿಕಪ್ ವಾಹನ ಡಿಕ್ಕಿ ಬೈಕ್ ಸವಾರ ಸಾವು : ದಿನಾಂಕ: 15-06-2018 ರಂದು ಹಾಸನ ತಾಲ್ಲೂಕ್ ಸಮುದ್ರವಳ್ಳಿಗ್ರಾಮದ ಸ್ವಾಮಿಗೌಡ ರವರು ಹೊಳೆನರಸೀಪುರ ತಾಲ್ಲೂಕ್ ಬಾಗಿವಾಳುಗ್ರಾಮದ ತಮ್ಮ ಸಂಬಂಧಿಕರ ಮನೆಯ ಗೃಹಪ್ರವೇಶಕ್ಕೆ ಬಂದಿದ್ದು, ಮಧ್ಯಾಹ್ನ ಸುಮಾರು 2.30 ಗಂಟೆ ಸಮಯದಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಉದ್ದೂರುಗ್ರಾಮದ ತನ್ನ ಅಕ್ಕ ರತ್ನಮ್ಮನನ್ನು ಕಾರಿನಲ್ಲಿ ಕೂರಿಸಿಕೊಂಡು ಮುಂದೆ ಹೊರಟು ಬಂದಿದ್ದು, ಹಿಂಬದಿಯಲ್ಲಿ ತನ್ನ ಅಕ್ಕನ ಮಗ ಅಭಿಜಿತ ತನ್ನ ಬಾಬ್ತು ಕೆಎ-13-ಇಜೆ-4111 ರ ಮೋಟಾರ್ ಬೈಕಿನಲ್ಲಿ ಬರುತ್ತಿದ್ದಾಗ ಮೊಸಳೆಹೊಸಳ್ಳಿಗ್ರಾಮದ ಬಳಿ ಅಂದರೆ ಮೊಸಳೆ ಗಡಿ ಬಳಿ ತಿಮ್ಮೇಗೌಡರ ಜಮೀನಿನ ಹತ್ತಿರ ಹೊಳೆನರಸೀಪುರ ರಸ್ತೆಯಲ್ಲಿ ಹಾಸನ ಕಡೆಯಿಂದ ಬಂದ ಬೊಲೆರೋ ಪಿಕಪ್ ಗೂಡ್ಸ್ ವಾಹನ ಚಾಲಕ ಅತಿವೇಗ ಮತ್ತು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕಿಗೆ ಮುಖಾಮುಖಿಯಾಗಿ ಡಿಕ್ಕಿ ಮಾಡಿದ ಪರಿಣಾಮ ಬೈಕ್ ಜಕಂಗೊಂಡು ಅಭಿಜಿತ್ ರಸ್ತೆ ಮೇಲೆ ಬಿದ್ದಾಗ ಬೊಲೆರೊ ವಾಹನದ ಮುಂಭಾಗಕ್ಕೆ ಸಿಕ್ಕಿಹಾಕಿಕೊಂಡು ಸ್ವಲ್ಪ ದೂರ ಎಳೆದುಕೊಂಡು ಹೋದಾಗ ಅಭಿಜಿತ್ ಬಿನ್ ದ್ಯಾವೇಗೌಡ, 28ವರ್ಷ, ಉದ್ದೂರುಗ್ರಾಮ, ಹಾಸನ ತಾಲ್ಲೂಕ್ ರವರು ಸ್ಥಳದಲ್ಲಿಯೇ ರವರು ಮೃತಪಟ್ಟಿರುತ್ತಾರೆಂದು ಮೃತರ ಮಾವ ಹಾಗೂ ಪ್ರತ್ಯಕ್ಷದರ್ಶಿ ಸ್ವಾಮಿಗೌಡ ರವರು ಕೊಟ್ಟ ದೂರಿನ ಮೇರೆಗೆ ಗೊರೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕ್ರಮ ಕೈಗೊಂಡಿರುತ್ತದೆ.

ಟಿವಿಎಸ್ ಎಕ್ಸ್ಎಲ್ಗೆ ಒಮಿನಿ ಕಾರು ಡಿಕ್ಕಿ ಒಂದು ಸಾವು : ದಿನಾಂಕ: 15-06-2018 ರಂದು ರಾತ್ರಿ 8.30 ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕ್ ಮುತುಗದ ಹೊಸೂರು ಗ್ರಾಮದ ವಾಸಿ ಕಾಳೇಗೌಡ ರವರ ತಮ್ಮ ಪುರುಷೋತ್ತಮ ರವರ ಮಗಳು ಕಾವ್ಯ ಮೈಸೂರಿನಿಂದ ತಮ್ಮ ದೊಡ್ಡಪ್ಪನ ಮಗಳ ಮದುವೆಗೆ ಮುತ್ತುಗದ ಹೊಸುರಿಗೆ ಬರುತ್ತಿದ್ದು, ಅವಳನ್ನು ಕರೆದುಕೊಂಡು ಬರಲು ಪುರುಷೋತ್ತಮ ರವರು ರಾಮನಾಥಪುರಕ್ಕೆ ತನ್ನ ಬಾಬ್ತು ಕೆಎ-09-ಇಪಿ-3299 ರ ಟಿವಿಎಸ್ ಎಕ್ಸ್ಎಲ್ನಲ್ಲಿ ಹೋಗುತ್ತಿದ್ದಾಗ ರಾಮನಾಥಪುರ ಪೆಟ್ರೋಲ್ ಬಂಕ್ ಸಮೀಪವಿರುವ ವೇ-ಬ್ರಿಡ್ಜ್ ಎದುರು ಹೋಗುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಕೆಎ-03-ಎಂಸಿ-8397 ರ ಒಮಿನಿ ಕಾರು ಚಾಲಕ ಪುರುಷೋತ್ತಮರಿಗೆ ಡಿಕ್ಕಿ ಮಾಡಿದ ಪರಿಣಾಮ ತಲೆಗೆ ಏಟಾಗಿ ಪುರುಷೋತ್ತಮ ಬಿನ್ ಲೇಟ್ ದ್ಯಾಮೇಗೌಡ, 48ವರ್ಷ, ಮುತ್ತುಗದ ಹೊಸೂರು, ಅರಕಲಗೂಡು ತಾಲ್ಲೂಕ್ ರವರು ಸ್ಥಳದಲ್ಲಿಯೇ ರವರು ಮೃತಪಟ್ಟಿರುತ್ತಾರೆಂದು ಮೃತರ ಅಣ್ಣ ಕಾಳೇಗೌಡ ರವರು ಕೊಟ್ಟ ದೂರಿನ ಮೇರೆಗೆ ಕೊಣನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕ್ರಮ ಕೈಗೊಂಡಿರುತ್ತದೆ.

ಮನುಷ್ಯ ಕಾಣೆ :  ಹಾಸನ ಬಿ.ಕಾಟೀಹಳ್ಳಿಕೊಪ್ಪಲಿನ ವಾಸಿ ಧಮರ್ಾವತಿ ರವರ ಗಂಡ ಶಿವಕುಮಾರ ರವರು ಹಾಸನದ ಲೇಬರ್ ಆಫೀಸಿನಲ್ಲಿ ಎಫ್ಡಿಎ ಆಗಿ ಕೆಲಸ ಮಾಡುತ್ತಿದ್ದು, ದಿನಾಂಕ:01-06-2018 ರಂದು ಬೆಳಗ್ಗೆ 9-30 ಗಂಟೆಗೆ ಕೆಲಸಕ್ಕೆಂದು ಮನೆಯಿಂದ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆ ಮಾಡಿಕೊಡಬೇಕೆಂದು ಶಿವಕುಮಾರ ರವರ ಹೆಂಡತಿ ಧರ್ಮಾವತಿ ರವರಿ ದಿನಾಂಕ : 15-06-2018 ರಂದು ಕೊಟ್ಟ ದೂರಿನ ಮೇರೆಗೆ ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಮನುಷ್ಯನ ಚಹರೆ: ಶಿವಕುಮಾರ, 43ವರ್ಷ,  ಗೋಧಿ ಬಣ್ಣ, ದುಂಡುಮುಖ, 5.3 ಅಡಿ ಎತ್ತರ ಕನ್ನಡ ವಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಹಸಿರು ಬಿಳಿ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಈ ವ್ಯಕ್ತಿಯ ಸುಳಿವು ಸಿಕ್ಕಲ್ಲಿ ಹಾಸನ ಬಡಾವಣೆ ಪೊಲೀಸ್ ಠಾಣೆ ಪೋನ್ ನಂ.08172-268967 ಕ್ಕೆ ಸಂಪರ್ಕಿಸುವುದು.

No comments: