ಪತ್ರಿಕಾ
ಪ್ರಕಟಣೆ ದಿನಾಂಕ:
15-06-2018.
ಆಟೋದಿಂದ ಬಿದ್ದು
ವ್ಯಕ್ತಿ ಸಾವು : ದಿನಾಂಕ: 13-06-2018 ರಂದು ಬೆಳಿಗ್ಗೆ 09-45 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಕಸಬಾ ಹೋಬಳಿ, ಬೊಮ್ಮೇನಹಳ್ಳಿ ವಡ್ಡರಹಳ್ಳಿ ಗ್ರಾಮದ
ಗಿರಿಯಪ್ಪ ರವರು ಗ್ರಾಮದ ರಂಗಾಬೋವಿ ಮತ್ತು ಲಲಿತಮ್ಮ
ರವರೊಂದಿಗೆ ಅರಸೀಕೆರೆ ಪಟ್ಟಣಕ್ಕೆ ಬಂದು
ಜಮೀನಿನ ಕೇಸಿನ ಬಗ್ಗೆ ವಕೀಲರ ಹತ್ತಿರ ಮಾಹಿತಿ ತಿಳಿದುಕೊಂಡು ವಾಪಸ್ ಊರಿಗೆ ಹೋಗಲು ಕೆಎ-13-ಬಿ-0381 ರ ಆಫೆ ಆಟೋದಲ್ಲಿ
ಹೋಗುತ್ತಿದ್ದಾಗ ಅರಸೀಕೆರೆ-ಹುಳಿಯಾರು ರಸ್ತೆ, ಕಾರೇಹಳ್ಳಿ ಗ್ರಾಮದ ಸ್ವಲ್ಪ ಮುಂದೆ
ಇರುವ ಸಿಮೆಂಟ್ ಇಟ್ಟಿಗೆ ಪ್ಯಾಕ್ಟರಿ ಮುಂಭಾಗ
ಉಬ್ಬು ರಸ್ತೆಯಲ್ಲಿ ಆಟೋವನ್ನು ಚಾಲಕ ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಹೋದ ಪರಿಣಾಮ
ಆಟೋದಲ್ಲಿದ್ದ ಗಿರಿಯಪ್ಪ ರವರು ಆಟೋದಿಂದ ಕೆಳಕ್ಕೆ ಬಿದ್ದು, ತೀವ್ರ ಸ್ವರೂಪದ ರಕ್ತಗಾಯಗಳಾಗಿ
ಚಿಕಿತ್ಸೆಗಾಗಿ ಅರಸೀಕೆರೆ ಸರ್ಕಾರಿ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಿ, ನಂತರ ಹಾಸನ ಸಕರ್ಾರಿ ಆಸ್ಪತ್ರೆಯಲ್ಲಿ
ಚಿಕಿತ್ಸೆ ಕೊಡಿಸಿ,
ಹೆಚ್ಚಿನ
ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಗಿರಿಯಪ್ಪ, 85 ವರ್ಷ ರವರು ಮೃತಪಟ್ಟಿರುತ್ತಾರೆಂದು
ಮೃತರ ಮಗ ಶ್ರೀ ಚಂದ್ರಕಾಂತ ರವರು ಕೊಟ್ಟ ದೂರಿನ ಮೇರೆಗೆ ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ
ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.
ಹುಡುಗಿ ಕಾಣೆ : ದಿನಾಂಕ: 14-06-2018 ರಂದು ಸಂಜೆ 05-00 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಜಾವಗಲ್ ನವಗ್ರಾಮದ ವಾಸಿ ರವಿಶಂಕರ ರವರ
ಮಗಳು ಸೌಮ್ಯ ಮನೆಯಿಂದ ಹೊರಗೆ ಹೋದವಳು ವಾಪಸ್
ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ
ಮಾಡಿಕೊಡಬೇಕೆಂದು ಸೌಮ್ಯ ರವರ ತಂದೆ ಶ್ರೀ ರವಿಶಂಕರ ರವರು ಕೊಟ್ಟ ದೂರಿನ ಮೇರೆಗೆ ಜಾವಗಲ್
ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಸೌಮ್ಯ ಬಿನ್ ರವಿಶಂಕರ, 21 ವರ್ಷ, 5' ಅಡಿ ಎತ್ತರ, ದುಂಡುಮುಖ, ಕನ್ನಡ ಮತ್ತು ಇಂಗ್ಲೀಷ್ ಭಾಷೆ
ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಕಪ್ಪು ನೀಲಿ ಟೀ ಶಟರ್್, ಸಿಮೆಂಟ್ ಕಲರ್ ಜೀನ್ಸ್ ಪ್ಯಾಂಟ್
ಧರಿಸಿರುತ್ತಾಳೆ. ಕಾಣೆಯಾದ ಹುಡುಗಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಜಾವಗಲ್ ಠಾಣೆ ಫೋನ್ ನಂ. 08174-27122 ಕ್ಕೆ ಸಂಪರ್ಕಿಸುವುದು.
ಹುಡುಗ ಕಾಣೆ : ವಿಜಯಪುರ ಜಿಲ್ಲೆ ವಿಜಯಪುರ ತಾಲ್ಲೂಕಿನ ಗುಣಕಿ
ಗ್ರಾಮದ ಲಾಲು ಸಾಬ್ ರವರು ಮದರಾ ಸಾಬ್ ಹಾಗೂ ಮೈರೂನ್ ರವರೊಂದಿಗೆ ಕಳೆದ ಎರಡೂವರೆ ತಿಂಗಳಿನಿಂದ
ಚನ್ನರಾಯಪಟ್ಟಣ ತಾಲ್ಲೂಕು, ಹೊಂಬಾಳೆಕೊಪ್ಪಲು ಗ್ರಾಮದ ಗೇಟ್ ಬಳಿ ಹೆಚ್ಬಿಸಿ ಪ್ರಾಜೆಕ್ಟ್ನ ಡಿವೈ ಉಪ್ಪಾರ್
ಮತ್ತು ಸನ್ಸ್ ಕಂಪನಿಯವರ ಹತ್ತಿರ ಚಾನಲ್ ಕೆಲಸ ಮಾಡಿಕೊಂಡು ಅಲ್ಲಿಯೇ ಶೆಡ್ನ್ನು ನಿರ್ಮಾಣ
ಮಾಡಿಕೊಂಡಿದ್ದು,
ದಿನಾಂಕ: 03-06-2018 ರಂದು ಮಧ್ಯಾಹ್ನ 12-00 ಗಂಟೆ ಸಮಯದಲ್ಲಿ ಲಾಲೂ ಸಾಬ್
ಶೆಡ್ನಿಂದ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ
ಮಾಡಿಕೊಡಬೇಕೆಂದು ಶ್ರೀ ಮದರಾ ಸಾಬ್ ರವರು
ದಿನಾಂಕ: 14-06-2018 ರಂದು ಕೊಟ್ಟ ದೂರಿನ ಮೇರೆಗೆ
ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹುಡುಗನ ಚಹರೆ: ಲಾಲುಸಾಬ್
ಬಿನ್ ಮೊದ್ದೀನ್ ಸಾಬ್,
22 ವರ್ಷ, 5'5'' ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ದುಂಡುಮುಖ, ಉದರ್ು, ಕನ್ನಡ, ಮರಾಠಿ ಭಾಷೆ ಮಾತನಾಡುತ್ತಾರೆ.
ಮನೆಯಿಂದ ಹೋಗುವಾಗ ನೀಲಿ ಟೀ ಶಟರ್್, ಬಿಳಿ ಬನಿಯನ್, ನೀಲಿ ನಿಕ್ಕರ್, ಹಸಿರು ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ. ಕಾಣೆಯಾದ ಹುಡುಗನ ಬಗ್ಗೆ ಸುಳಿವು
ಸಿಕ್ಕಲ್ಲಿ ಚನ್ನರಾಯಪಟ್ಟಣ ನಗರ ಠಾಣೆ ಫೋನ್ ನಂ. 08176-252333ಕ್ಕೆ ಸಂಪರ್ಕಿಸುವುದು.
No comments:
Post a Comment