* * * * * * HASSAN DISTRICT POLICE

Thursday, June 14, 2018

HASSAN DISTRICT PRESS NOTE 14-06-2018




      ಪತ್ರಿಕಾ ಪ್ರಕಟಣೆ                ದಿನಾಂಕ: 14-06-2018.

ಹೆಂಗಸು ಕಾಣೆ

ಈಗ್ಗೆ 9 ವರ್ಷದ ಹಿಂದೆ ಆಲೂರು ತಾಲ್ಲೂಕು, ಕುಂದೂರು ಹೋಬಳಿ, ಕಳ್ಳಿಕೊಪ್ಪಲು ಗ್ರಾಮದ ವಾಸಿ ಶ್ರೀ ಸೋಮಶೇಖರ ರವರ ಮಗಳು ಕು|| ಮಾನಸ ರವರನ್ನು ಆಲೂರು ತಾಲ್ಲೂಕು, ಕುಂದೂರು ಹೋಬಳಿ ಅರಳೀಮರದಕೊಪ್ಪಲು ಗ್ರಾಮದ ವಾಸಿ ರಾಜೇಗೌಡ, ರವರ ಮಗ ಶ್ರೀ ಜಯಣ್ಣ ರವರಿಗೆ ಮದುವೆ ಮಾಡಿಕೊಟ್ಟಿದ್ದು, ಗಂಡ ಹೆಂಡತಿ ಬೆಂಗಳೂರಿನಲ್ಲಿ ವಾಸವಾಗಿದ್ದು, ಸ್ವಂತ ಊರಿನಲ್ಲಿರುವ ಸಲುವಾಗಿ ದಿನಾಂಕ: 07-06-2018 ರಂದು ಶ್ರೀ ಜಯಣ್ಣ ರವರು ಪತ್ನಿ ಶ್ರೀಮತಿ ಮಾನಸ, ರವರನ್ನು ಕಳ್ಳಿಕೊಪ್ಪಲು ಗ್ರಾಮಕ್ಕೆ  ಕರೆದುಕೊಂಡು ಬಂದು ತವರು ಮನೆಯಲ್ಲಿ ಬಿಟ್ಟು ಶ್ರೀ ಜಯಣ್ಣ ಬೆಂಗಳೂರಿಗೆ ಹೋಗಿದ್ದು, ಶ್ರೀಮತಿ ಮಾನಸ, ರವರು ಮನೆಯಿಂದ ಹೊರಗೆ ಹೋಗಿದ್ದು, ವಾಪಸ್ ಮನೆಗೆ ಬಾರದೆ  ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ,. ಪತ್ತೆ ಮಾಡಿಕೊಡಬೇಕೆಂದು ಶ್ರೀಮತಿ ಮಾನಸ, ರವರ ತಂದೆ ಶ್ರೀ ಸೋಮಶೇಖರ ರವರು ದಿನಾಂಕ: 13-06-2018 ರಂದು ಕೊಟ್ಟ ದೂರಿನ ಮೇರೆಗೆ ಆಲೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಶ್ರೀಮತಿ ಮಾನಸ ಕೋಂ ಜಯಣ್ಣ, 28 ವರ್ಷ, 5'3'' ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾರೆ. ಈ ಹೆಂಗಸಿನ ಸುಳಿವು ಸಿಕ್ಕಲ್ಲಿ ಆಲೂರು ಠಾಣೆ ಫೋನ್ ನಂ. 08170-218231 ಕ್ಕೆ ಸಂಪರ್ಕಿಸುವುದು.


No comments: