ಪತ್ರಿಕಾ
ಪ್ರಕಟಣೆ ದಿನಾಂಕ:
11-06-2018.
ಕಾರು ಆಟೋಗೆ ಡಿಕ್ಕಿ, ಆಟೋ ಪಲ್ಟಿ ಒಂದು ಸಾವು, ಐವರಿಗೆ ಗಾಯ.
ದಿನಾಂಕ: 10-06-2018 ರಂದು ಬೆಳಿಗ್ಗೆ 9-30
ಗಂಟೆ ಸಮಯದಲ್ಲಿ ಹೊಳೆನರಸೀಪುರ ತಾಲ್ಲೂಕು, ಹಳ್ಳಿಮೈಸೂರು
ಹೋಬಳಿ, ರಂಗೇನಹಳ್ಳಿ ಗ್ರಾಮದ ವಾಸಿ ಶ್ರೀ ಬಸವೇಗೌಡ, ರವರ ಮಗಳು ಕು|| ಲಕ್ಷ್ಮೀ, ಮತ್ತು ಇತರೆ
ಪ್ರಯಾಣಿಕರಾದ ಕು|| ಕೃತಿಕಾ, ಕು|| ಬಾಮ, ಕು|| ಲಲಿತಾ ಶ್ರೀ
ಮೋಹನ, ಶ್ರೀ ಬಾಬು, ರವರುಗಳು ಕೆಎ-13, ಬಿ-4457 ರ
ಆಟೋದಲ್ಲಿ ಹೊಳೆನರಸೀಪುರದಿಂದ ದೊಡ್ಡಕಾಡನೂರು
ಗ್ರಾಮಕ್ಕೆ ಹೋಗಲು ಚನ್ನರಾಯಪಟ್ಟಣ ತಾಲ್ಲೂಕು, ಹಳ್ಳಿಮೈಸೂರು
ಹೋಬಳಿ, ಚಿಕ್ಕಕಾಡನೂರು ಗ್ರಾಮ, ಮೈಸೂರು ರಸ್ತೆ, ಹೋಗುತ್ತಿದ್ದಾಗ
ಕೆಎ-09, ಎಂಸಿ-2516 ರ ಕೆಂಪು ಬಣ್ಣದ ಕಾರು ಹೋಗುತ್ತಿದ್ದು, ರಸ್ತೆ
ಅಡ್ಡವಾಗಿ ಎಮ್ಮೆ ಬಂದಾಗ ಕಾರಿನ ಚಾಲಕ ವೇಗವನ್ನು ಕಡಿಮೆ ಮಾಡಿದಾಗ ಹಿಂದಿನಿಂದ ಬಂದ ಕೆಎ-18,ಪಿ-1782 ರ
ಬಿಳಿ ಮಾಸಲು ಬಣ್ಣದ ಕಾರಿನ ಚಾಲಕ ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಮುಂದೆ
ಹೋಗುತ್ತಿದ್ದ ಕೆಎ-09, ಎಂಸಿ-2516 ರ ಕೆಂಪು ಬಣ್ಣದ ಕಾರಿಗೆ ಡಿಕ್ಕಿ ಮಾಡಿ
ಮುಂದೆ ಕೆಎ-13, ಬಿ-4457 ರ ಆಟೋಗೆ ಡಿಕ್ಕಿ ಮಾಡಿದ ಪರಿಣಾಮ ಆಟೋ
ಪಲ್ಟಿಯಾಗಿ ಪ್ರಯಾಣಿಸುತ್ತಿದ್ದ ಕು|| ಲಕ್ಷ್ಮೀ, ಕು|| ಕೃತಿಕಾ, ಕು|| ಬಾಮ, ಕು|| ಲಲಿತಾ ಶ್ರೀ
ಮೋಹನ, ಶ್ರೀ ಬಾಬು, ರವರುಗಳಿಗೆ ತೀವ್ರ ಸ್ವರೂಪದ
ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹೊಳೆನರಸೀಪುರ ಸರ್ಕಾರಿ ಆಸ್ಪತ್ರೆಗೆ
ದಾಖಲಿಸಿದ್ದು, ಕು|| ಲಕ್ಷ್ಮೀ ಬಿನ್
ಮಹಾದೇವ, 15 ವರ್ಷ, ರಂಗೇನಹಳ್ಳಿ
ಗ್ರಾಮ, ಹಳ್ಳಿಮೈಸೂರು ಹೋಬಳಿ, ಹೊಳೆನರಸೀಪುರ
ತಾಲ್ಲೂಕು. ರವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆಂದು ಶ್ರೀ ಬಾಬು, ರವರು
ಹೊಳೆನರಸೀಪುರ ಸರ್ಕಾರಿ ಆಸ್ಪತ್ರೆಯಲ್ಲಿ ಕೊಟ್ಟ ಹೇಳಿಕೆ ಮೇರೆಗೆ ಹಳ್ಳಿಮೈಸೂರು ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
|
* * * * * * HASSAN DISTRICT POLICE
Monday, June 11, 2018
HASSAN DISTRICT PRESS NOTE 11-06-2018
Subscribe to:
Post Comments (Atom)
No comments:
Post a Comment