* * * * * * HASSAN DISTRICT POLICE

Wednesday, May 30, 2018

PRESS NOTE : 30-05-2018


ಪತ್ರಿಕಾ ಪ್ರಕಟಣೆ                  ದಿನಾಂಕ: 30-05-2018.

ಜೂಜಾಡುತ್ತಿದ್ದ 6 ಜನರ ಬಂಧನ, ಬಂಧಿತರಿಂದ 15,100/- ನಗದು ವಶ :         ದಿನಾಂಕ: 29-05-2018 ರಂದು ಸಂಜೆ 05-45 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಹಳೇಬೀಡು ಪಟ್ಟಣದ ಸಂತೆ ಮೈದಾನದಲ್ಲಿ ಅಕ್ರಮವಾಗಿ ಇಸ್ಪೀಟು ಜೂಜಾಟ ಆಡುತ್ತಿದ್ದಾರೆಂದು ಎಎಸ್ಐ ಶ್ರೀ ಗೊವಿಂದಪ್ಪ, ಹಳೇಬೀಡು ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ವಿನಯ್ ಬಿನ್ ಚಂದ್ರಶೇಖರಪ್ಪ, 21 ವರ್ಷ, ಹೊಯ್ಸಳ ಬಡಾವಣೆ, ಹಳೆಬೀಡು ಟೌನ್ 2) ಅರುಣ್ ಬಿನ್ ಶಿವಕುಮಾರ್, 24 ವರ್ಷ, ಗೋಣಿಸೋಮನಹಳ್ಳಿ ಹಳೇಬೀಡು ಹೋಬಳಿ, ಬೇಲೂರು ತಾಲ್ಲೂಕು 3) ಚಂದನ ಬಿನ್ ಸುರೇಶ, 21 ವರ್ಷ, ಹೊಯ್ಸಳ ಬಡಾವಣೆ, ಹಳೇಬೀಡು ಟೌನ್ 4) ಆಕಾಶ ಬಿನ್ ರಾಮೇಗೌಡ, 24 ವರ್ಷ, ಬಸ್ತಿಹಳ್ಳಿ ಹಳೇಬೀಡು ಹೋಬಳಿ, ಬೇಲೂರು ತಾಲ್ಲೂಕು 5) ಪ್ರದೀಪ ಬಿನ್ ಸೋಮಶೇಖರ, 24 ವರ್ಷ, ತರಗಿನಪೇಟೆ, ಹಳೇಬೀಡು ಟೌನ್ 6) ದರ್ಶನ ಬಿನ್ ಗಂಗಾಧರಪ್ಪ, 25 ವರ್ಷ, ಗೋಣಿಸೋಮನಹಳ್ಳಿ ಗ್ರಾಮ, ಹಳೇಬೀಡು ಹೋಬಳಿ, ಬೇಲೂರು ತಾಲ್ಲೂಕು ಎಂದು ತಿಳಿಸಿದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 15,100/- ನಗದನ್ನು ಅಮಾನತ್ತುಪಡಿಸಿಕೊಂಡು ಹಳೇಬೀಡು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

ಹೆಂಗಸು ಕಾಣೆ :        ದಿನಾಂಕ: 21-05-2018 ರಂದು ಬೆಳಿಗ್ಗೆ 09-00 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಕಣಕಟ್ಟೆ ಹೋಬಳಿ, ಯರೇಹಳ್ಳಿ ಗ್ರಾಮದ ಜಯಪ್ಪ ರವರ ಪತ್ನಿ ಶ್ರೀಮತಿ ಗಗನ ಎಂಬುವರು ಧನ ಮೇಯಿಸಲು ಜಮೀನಿನ ಹತ್ತಿರ ಹೋದವಳು ಸಂಜೆಯಾದರೂ ವಾಪಸ್ ಮನೆಗೆ ಬಂದಿರುವುದಿಲ್ಲ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಗಗನ ರವರ ಪತಿ ಶ್ರೀ ಜಯಪ್ಪ ರವರು ದಿನಾಂಕ: 29-05-2018 ರಂದು ಕೊಟ್ಟ ದೂರಿನ ಮೇರೆಗೆ ಬಾಣಾವರ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಗಗನ ಕೋಂ ಜಯಪ್ಪ, 26 ವರ್ಷ,  5' ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಕೆಂಪು ಬಣ್ಣದ ಸೀರೆಯನ್ನು ಧರಿಸಿರುತ್ತಾರೆ. ಕಾಣೆಯಾದ ಹೆಂಗಸಿನ ಬಗ್ಗೆ ಸುಳಿವು ಸಿಕ್ಕಲ್ಲಿ ಬಾಣಾವರ ಠಾಣೆ ಫೋನ್ ನಂ.08174-235633 ಕ್ಕೆ ಸಂಪರ್ಕಿಸುವುದು.

ಹುಡುಗಿ ಕಾಣೆ :     ದಿನಾಂಕ: 27-05-2018 ರಂದು ಸಂಜೆ 06-00 ಗಂಟೆ ಸಮಯದಲ್ಲಿ  ಹಾಸನ ತಾಲ್ಲೂಕು, ಕಸಬಾ ಹೋಬಳಿ, ದೊಡ್ಡಬಾಗನಹಳ್ಳಿ ಗ್ರಾಮದ ಪ್ರಕಾಶ್ ರವರ ಮಗಳು ಲಾವಣ್ಯ ಮನೆಯಿಂದ ದೊಡ್ಡಪ್ಪನ ಮನೆಗೆ ಹೋಗಿ ಬರುವುದಾಗಿ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಲಾವಣ್ಯ ರವರ ತಂದೆ ಶ್ರೀ ಪ್ರಕಾಶ ರವರು ಕೊಟ್ಟ ದೂರಿನ ಮೇರೆಗೆ ಹಾಸನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಲಾವಣ್ಯ ಬಿನ್ ಪ್ರಕಾಶ, 20 ವರ್ಷ, 5'2'' ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾಳೆ. ಕಾಣೆಯಾದ ಹುಡುಗಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಹಾಸನ ಗ್ರಾಮಾಂತರ ಠಾಣೆ ಫೋನ್ ನಂ. 08172-268630 ಕ್ಕೆ ಸಂಪರ್ಕಿಸುವುದು.

ಆಟೋ ಪಲ್ಟಿ ಬಾಲಕ ಸಾವು : ದಿನಾಂಕ: 29-05-2018 ರಂದು ಸಂಜೆ 04-30 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ, ಬಾಗೂರು ರಸ್ತೆ, ರೋಷನ್ ನಗರದ ವಾಸಿ ಮಾಜ್ಖಾನ್ ರವರು ತನ್ನ ಮಾವ ಇನಾಯತ್ ಉಲ್ಲಾಖಾನ್ ರವರ ಜೊತೆ  ಕೆಎ-03-ಎಂವಿ-0907 ರ ಆಟೋರಿಕ್ಷಾದಲ್ಲಿ ಹಿಂಬದಿಯಲ್ಲಿ ಕುಳಿತುಕೊಂಡು ಸಮುದ್ರವಳ್ಳಿ ಗ್ರಾಮಕ್ಕೆ ಹೋಗಿ ತೆಂಗಿನಕಾಯಿ ತೆಗೆದುಕೊಂಡು ವಾಪಸ್ ಮನೆಗೆ ಹೋಗಲು ಚನ್ನರಾಯಪಟ್ಟಣ ತಾಲ್ಲೂಕು, ದಂಡಿಗನಹಳ್ಳಿ ಹೋಬಳಿ, ಕತ್ತರಿಘಟ್ಟ-ಸಮುದ್ರವಳ್ಳಿ ಗ್ರಾಮದ ರಸ್ತೆಯಲ್ಲಿ ಹೋಗುತ್ತಿದ್ದಾಗ  ಆಟೋವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಹೋದ ಪರಿಣಾಮ ಮಾಜ್ಖಾನ್ ಆಟೋದಿಂದ ಕೆಳಕ್ಕೆ ಬಿದ್ದಾಗ ಆಟೋ ಚಕ್ರ ತಲೆ ಮೇಲೆ ಹತ್ತಿ ರಕ್ತಗಾಯಗಳಾಗಿ ಮಾಜ್ಖಾನ್ ಬಿನ್ ಅನ್ಸರ್ ಪಾಷಾ, 13 ವರ್ಷ ರವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆಂದು ಮೃತರ ತಂದೆ ಶ್ರೀ ಅನ್ಸರ್ಪಾಷಾ ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.
           

No comments: