* * * * * * HASSAN DISTRICT POLICE

Tuesday, May 29, 2018

PRESS NOTE : 26-05-2018


ಪತ್ರಿಕಾ ಪ್ರಕಟಣೆ                                    ದಿನಾಂಕ: 26-05-2018.

ಬೈಕ್ನ ನಿಯಂತ್ರಣದ ತಪ್ಪಿ, ಬೈಕ್ ಹಿಂಬದಿ ಕುಳಿತ್ತಿದ್ದವನ ಸಾವು :  ಈಗ್ಗೆ 3 ದಿವಸಗಳ ಹಿಂದೆ ಕೇರಳ ರಾಜ್ಯ, ಕಣ್ಣೂರು ಜಿಲ್ಲೆ, ತಲಶೀರಿ ತಾಲ್ಲೂಕು, ಚಾಲಕ್ಕಲ್ ಗ್ರಾಮದ ವಾಸಿ ಶ್ರೀ ಅಬ್ದುಲ್ಲಾ, ರವರು ಸ್ನೇಹಿತರಾದ ಸಕಲೇಶಪುರ ತಾಲ್ಲೂಕು, ಜೆ.ಪಿ. ನಗರ ಬಾಳ್ಳುಪೇಟೆಗೆ ಶ್ರೀ ಖಲಂದರ್ ಶಫಿ, ರವರ ಮನೆಯಲ್ಲಿ ಉಳಿದುಕೊಂಡಿದ್ದು, ದಿನಾಂಕ: 24-05-2018 ರಂದು ರಾತ್ರಿ 9-00 ಗಂಟೆ ಸಮಯದಲ್ಲಿ ಶ್ರೀ ಅಬ್ದುಲ್ಲಾ, ರವರು ಸ್ನೇಹಿತರಾದ ಶ್ರೀ ಖಲಂದರ್ ಶಫಿ, ರವರ ಬಾಬ್ತು ಕೆಎ-46, ಹೆಚ್-3787 ರ ಬೈಕ್ನಲ್ಲಿ ಸಕಲೇಶಪುರಕ್ಕೆ ಹೋಗಲು ಸಕಲೇಶಪುರಪಟ್ಟಣದ ಬಿ.ಎಂ. ರಸ್ತೆ, ಬಾಳಗದ್ದೆ ಬಡಾವಣೆ, ಹಾಲೇಬೇಲೂರು ಕ್ರಾಸ್, ಹತ್ತಿರ ಹೋಗುತ್ತಿದ್ದಾಗ ಬೈಕ್ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದ ತಕ್ಷಣ ಬ್ರೇಕ್ ಹಾಕಿದಾಗ ಬೈಕ್ ಹಿಂಬದಿ ಕುಳಿತಿದ್ದ ಶ್ರೀ ಅಬ್ದುಲ್ಲಾ, ರವರು ರಸ್ತೆಗೆ ಬಿದ್ದು, ತೀವ್ರ ಸ್ವರೂಪದ ರಕ್ತಗಾಯಳಾಗಿದ್ದು, ಚಿಕಿತ್ಸೆಗಾಗಿ ಸಕಲೇಶಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಎನ್ಡಿಆರ್ಕೆ ಆಸ್ಪತ್ರೆಗೆ ದಾಖಲಿಸಿದು, ಶ್ರೀ ಅಬ್ದುಲ್ ಬಿನ್ ವಿ.ಟಿ. ಮಹಮದ್, 45 ವರ್ಷ, ಚಾಲಕ್ಕಲ್ ಗ್ರಾಮ, ತಲಶೀರಿ ತಾಲ್ಲೂಕು, ಕಣ್ಣೂರು ಜಿಲ್ಲೆ, ಕೇರಳ ರಾಜ್ಯ, ರವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆಂದು ಮೃತರ ಪತ್ನಿ ಶ್ರೀಮತಿ ಶಾಹಿದಾ, ರವರು ಕೊಟ್ಟ ದೂರಿನ ಮೇರೆಗೆ ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರರಕಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಯಾವುದೋ ವಾಹನ ಡಿಕ್ಕಿ, ಅಪರಿಚಿತ ವ್ಯಕ್ತಿಯ ಶವ ಪತ್ತೆ :  ದಿನಾಂಕ: 25-05-2018 ರಂದು ರಾತ್ರಿ 8-15 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ನುಗ್ಗೇಹಳ್ಳಿ ಗ್ರಾಮದ ವಾಸಿ ಶ್ರೀ ಕಿರಣ್, ರವರ ಬಾಬ್ತು ಬೈಕ್ನಲ್ಲಿ ನುಗ್ಗೇಹಳ್ಳಿ-ಚನ್ನರಾಯಪಟ್ಟಣ ರಸ್ತೆ, ಎನ್. ಕೆ. ಅಯ್ಯಂಗಾರ್, ರವರ ತೋಟದ ಗೇಟ್ ನೇರದಲ್ಲಿ ಕೋಲಿ ಮನೆ ಹತ್ತಿರ ಯಾರೋ ಒಬ್ಬ ಸುಮಾರು 55 ರಿಂದ 60 ವರ್ಷ ವಯಸ್ಸಿನ ವ್ಯಕ್ತಿ ಅಪಘಾತವಾಗಿ ತಲೆ, ಮೈ, ಕೈಗಳಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಮೃತಪಟ್ಟಿದ್ದು, ಮೈಮೇಲೆ ಕಪ್ಪು-ಬಿಳಿ ಬಣ್ಣ ಗೀರಿನ ಡಿಸೈಜನ್ ಇರುವ ಶರ್ಟ್, ನೀಲಿ ಬಣ್ಣದ ಪಂಚೆ, ನೀಲಿ ಬಣ್ಣದ ಅಂಡರ್ ವೇರ್ ಧರಿಸಿರುತ್ತಾರೆಂದು ಶ್ರೀ ಕಿರಣ್, ರವರು ಕೊಟ್ಟ ದೂರಿನ ಮೇರೆಗೆ ನುಗ್ಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ. ಈ ಮೃತ ವ್ಯಕ್ತಿಯ ಪತ್ತೆಗಾಗಿ 08176-233033 ಕ್ಕೆ ಸಂಪರ್ಕಿಸುವುದು.
ಹುಡುಗಿ ಕಾಣೆ : ದಿನಾಂಕ: 24-05-2018 ರಂದು ರಾತ್ರಿ 10-00 ಗಂಟೆ ಸಮಯದಲ್ಲಿ ಆಲೂರು ತಾಲ್ಲೂಕು, ದೈತಾಪುರ ಗ್ರಾಮದ ವಾಸಿ ಶ್ರೀ ಚಿದಾನಂದ, ರವರ ಪತ್ನಿ ಶ್ರೀಮತಿ ಶಾಲಿನಿ ರವರು ಮಗಳು ಕು|| ಪೂರ್ವಿಕಳನ್ನು ಕರೆದುಕೊಂಡು ಹೋಗಿದ್ದು, ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀಮತಿ ಶಾಲಿನಿಯ ಪತಿ ಶ್ರೀ ಚಿದಾನಂದ, ರವರು ಕೊಟ್ಟ ದೂರಿನ ಮೇರೆಗೆ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹೆಂಗಸು ಮತ್ತು ಮಗುವಿನ ಚಹರೆ: ಶ್ರೀಮತಿ ಶಾಲಿನಿ ಕೋಂ ಚಿದಾನಂದ, 32 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು. ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಹಸಿರು ಬಣ್ಣದ ಚೂಡಿದಾರ ಧರಿಸಿರುತ್ತಾರೆ. ಮಗುವಿನ ಚಹರೆ: ಕು|| ಪೂರ್ವಿಕ ಬಿನ್ ಚಿದಾನಂದ, 11 ವರ್ಷ, ಕೆಂಪು ಬಣ್ಣದ ಬಟ್ಟೆ ಧರಿಸಿರುತ್ತಾರೆ. ಇವರ ಸುಳಿವು ಸಿಕ್ಕಲ್ಲಿ 08170-8231 ಕ್ಕೆ ಸಂಪರ್ಕಿಸುವುದು.

No comments: