ಪತ್ರಿಕಾ
ಪ್ರಕರಣೆ ದಿನಾಂಕ: 19-05-2018
ಜೂಜಾಡುತ್ತಿದ್ದ 5 ಜನರ ಬಂಧನ, ಬಂಧಿತರಿಂದ ಸುಮಾರು 8,660/- ನಗದು ವಶ
ದಿನಾಂಕ: 18-05-2018 ರಂದು
ರಾತ್ರಿ 9-00 ಗಂಟೆ ಸಮಯದಲ್ಲಿ ಶ್ರೀ ಕೆ.ಎಂ. ಯೋಗೇಶ್, ಸಿಪಿಐ, ಬೇಲೂರು ವೃತ್ತ. ರವರು ಸಿಬ್ಬಂದಿಗಳೊಂದಿಗೆ ರಾತ್ರಿ ರೌಂಡ್ಸ್ ಕರ್ತವ್ಯ
ನಿರ್ವಹಿಸುತ್ತಿದ್ದಾಗ ಬೇಲೂರು ಪಟ್ಟಣದ ಗೆಂಡೇಹಳ್ಳಿ ರಸ್ತೆಯ ತಾಲ್ಲೂಕು ಕ್ರೀಡಾಂಗಣದಲ್ಲಿ
ಜೂಜಾಟಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ
ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಕೌಶಿಕ್
ಬಿನ್ ಮಹೇಶ್, 28 ವರ್ಷ, ಹೊಳೆಬೀದಿ, ಬೇಲೂರು ಟೌನ್ 2) ಕುಮಾರ ಬಿನ್ ಸತೀಶ್, 21 ವರ್ಷ, ವ್ಯಾಪಾರ, ಲಕ್ಷ್ಮೀಪುರ ಬಡಾವಣೆ, ಬೇಲೂರು ಟೌನ್ 3) ರಾಜಿಕ್ ಬಿನ್ ಸಾಧಿಕ್, 32 ವರ್ಷ, ಮ್ಯಾಕನಿಕ್, ಗೋಧಿ ಹತ್ತಿರ , ಬಿಕ್ಕೋಡು ರಸ್ತೆ, ಬೇಲೂರು ಟೌನ್ 4) ದೀಪು ಬಿನ್ ಆನಂದ, 24 ವರ್ಷ, ಕುರುಬಗೇರಿ ಬೀದಿ, ಬೇಲೂರು ಟೌನ್ 5) ಅನ್ವರ್ ಬಿನ್ ಕಮಾಲ್ ಸಾಬ್, 48 ವರ್ಷ, ಬಿಕ್ಕೋಡು ರಸ್ತೆ, ಬೇಲೂರು ಟೌನ್ ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟಾದಲ್ಲಿ
ಪಣಕ್ಕಿಟ್ಟಿದ್ದ ಸುಮಾರು 8660/-
ನಗದನ್ನು ಅಮಾನತ್ತುಪಡಿಸಿಕೊಂಡು
ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ. ಹುಡುಗಿ ಕಾಣೆ ದಿನಾಂಕ: 14-05-2018 ರಂದು ಸಂಜೆ 5-00 ಗಂಟೆ
ಸಮಯದಲ್ಲಿ ಕೇರಳ ರಾಜ್ಯ, ಅಬ್ಲಪಾಡಿ ವೈನಾಡು, ಕೃಷ್ಣಗಿರಿ ಪೋಸ್ಟ್, ಚೇತುಂ ಪರಾಂಭಟ್ ಗ್ರಾಮದ ವಾಸಿ ಶ್ರೀ
ಸಿ. ಬಾಲಕೃಷ್ಣ, ರವರ ಮಗಳು ಕು|| ಐಶ್ವರ್ಯ, ಜಾನಕಿ, ಹಾಸನದ ಶ್ರೀ ಧರ್ಮಸ್ಥಳದ ಮಂಜುನಾಥ, ಕಾಲೇಜಿನಲ್ಲಿ
ವ್ಯಾಸಂಗ ಮಾಡಿಕೊಂಡಿದ್ದು, ಕಾಲೇಜಿನಿಂದ ಹೊರಗೆ ಹೋದವಳು
ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ
ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ಐಶ್ವರ್ಯ ಜಾನಕಿಯ ತಂದೆ ಶ್ರೀ ಸಿ.
ಬಾಲಕೃಷ್ಣ, ರವರು ಕೊಟ್ಟ ದೂರಿನ ಮೇರೆಗೆ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ
ತನಿಖೆಯಲ್ಲಿರುತ್ತೆ. ಕಾಣೆಯಾದ ಹುಡುಗಿಯ ಚಹರೆ: ಕು|| ಐಶ್ವರ್ಯ
ಜಾನಿಕಿ ಬಿನ್ ಸಿ. ಬಾಲಕೃಷ್ಣ, 19 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಮನೆಯಿಂದ ಹೋಗುವಾಗ ಹಸಿರು ಬಣ್ಣದ
ಚೂಡಿದಾರ ಧರಿಸಿರುತ್ತಾಳೆ. ಈ ಹುಡುಗಿ ಸುಳಿವು ಸಿಕ್ಕಲ್ಲಿ 08172-272260 ಕ್ಕೆ
ಸಂಪರ್ಕಿಸುವುದು.
No comments:
Post a Comment