ಪತ್ರಿಕಾ ಪ್ರಕಟಣೆ ದಿನಾಂಕ: 14-05-2018
ಜೂಜಾಡುತ್ತಿದ್ದ 7 ಜನರ ಬಂಧನ, ಬಂಧಿತರಿಂದ ಸುಮಾರು 5,185/- ನಗದು ವಶ: ದಿನಾಂಕ: 13-05-2018 ರಂದು ಬೆಳಿಗ್ಗೆ 9-30 ಗಂಟೆ ಸಮಯದಲ್ಲಿ ಹಾಸನದ ಸುವರ್ಣ ಹೋಟೆಲ್
ಹಿಂಭಾಗದ ಸಾರ್ವಜನಿಕರ ಸ್ಥಳದಲ್ಲಿ ಜೂಜಾಟಾಡುತ್ತಿದ್ದಾರೆಂದು ಶ್ರೀ ಸುರೇಶ್, ಪಿಎಸ್ಐ, ಹಾಸನ
ನಗರ ಠಾಣೆ., ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ
ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1)ಶ್ರೀ ಪ್ರಮೋದ್ ಬಿನ್ ಶ್ರೀನಿವಾಸ, 28 ವರ್ಷ, ಚಾಲಕ, ಚನ್ನಪಟ್ಟಣ, ಕಸಬಾ
ಹೋಬಳಿ, ಹಾಸನ ತಾಲ್ಲೂಕು 2) ಶ್ರೀ ಬಾಬು ಬಿನ್ ಕಾಳೇಗೌಡ, 32 ವರ್ಷ, ಚಾಲಕ, ರಾಜಘಟ್ಟ, ಕಸಬಾ
ಹೋಬಳಿ, ಹಾಸನ ತಾಲ್ಲೂಕು 3) ಶ್ರೀ ಚಂದ್ರಕಾಂತ ಬಿನ್ ಕುಪ್ಪೇಗೌಡ, ಚನ್ನಪಟ್ಟಣ, ಕಸಬಾ
ಹೋಬಳಿ, ಹಾಸನ ತಾಲ್ಲೂಕು 4) ಅನೂಪ್ ಬಿನ್ ಮಂಜೇಗೌಡ, ಅಡ್ಲಿಮನೆ ರಸ್ತೆ, ಹಾಸನ
5) ಶ್ರೀ ಪ್ರತಾಪ್ ಬಿನ್ ಸದಾಶಿವ, 23 ವರ್ಷ, ಅಡ್ಲಿಮನೆ
ರಸ್ತೆ, ಹಾಸನ. 6) ಶ್ರೀ ನರಸಿಂಹಸ್ವಾಮಿ ಬಿನ್ ರಂಗಪ್ಪ, 30 ವರ್ಷ, ರಂಗೋಲಿಹಳ್ಳಿ, ಆರ್.ಸಿ. ರಸ್ತೆ, ಹಾಸನ
7) ಶ್ರೀ ದಿನೇಶ್ ಬಿನ್ ಮಂಜೇಗೌಡ, 31 ವರ್ಷ, ಚಾಲಕ, ವಿಜಯನಗರ ಬಡಾವಣೆ, ಹಾಸನ
ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ಸುಮಾರು 5,185/-ನಗದನ್ನು ಅಮಾನತ್ತುಪಡಿಸಿಕೊಂಡು ಹಾಸನ ನಗರ ಠಾಣೆಯಲ್ಲಿ
ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.
ಲಾರಿ ಡಿಕ್ಕಿ, ಪಾದಚಾರಿ ಸಾವು: ದಿನಾಂಕ: 13-05-2018 ರಂದು ರಾತ್ರಿ 10-30 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಹಿರೀಸಾವೆ ಹೋಬಳಿ, ಗೌಡರಹಳ್ಳಿ
ಗ್ರಾಮದ ವಾಸಿ ಶ್ರೀ ಗಿರಿಗೌಡ @ ಮೂಗ, ಹಿರೀಸಾವೆಯ
ಆರ್.ಕೆ. ಲಾಡ್ಜ್, ಕಡೆಯಿಂದ ಶ್ರವಣಬೆಳಗೊಳ ರಸ್ತೆ, ಎನ್.ಹೆಚ್-75, ಬಿ.ಎಂ. ರಸ್ತೆ ದಾಟುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎ-1/ಎ-2429 ರ ಕಬ್ಬಿನ ಲಾರಿಯ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು
ಬಂದು ಡಿಕ್ಕಿಯಾದ ಪರಿಣಾಮ ಶ್ರೀ ಗಿರಿಗೌಡ @
ಮೂಗ, 55 ವರ್ಷ, ಗೌಡರಹಳ್ಳಿ
ಗ್ರಾಮ, ಹಿರೀಸಾವೆ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು ರವರಿಗೆ ತೀವ್ರ ಸ್ವರೂಪದ
ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಪ್ರತ್ಯಕ್ಷದರ್ಶಿ, ಶ್ರೀ ವಿಜಯಕುಮಾರ್, ರವರು
ಕೊಟ್ಟ ದೂರಿನ ಮೇರೆಗೆ ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ
ತನಿಖೆಯಲ್ಲಿರುತ್ತೆ. ಕಾರು ಬೈಕ್ಗೆ ಡಿಕ್ಕಿ, ಬೈಕ್ ಸವಾರ ಸಾವು ದಿನಾಂಕ: 13-05-2018 ರಂದು ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಕಸಬಾ ಹೋಬಳಿ, ಬೂವನಹಳ್ಳಿ
ಗ್ರಾಮ ವಾಸಿ ಶ್ರೀ ಪ್ರಕಾಶ್, ರವರ ಬಾಬ್ತು ಕೆಎ-04, ಹೆಚ್-4287 ರ ಬೈಕ್ನಲ್ಲಿ ಸಂಬಂಧಿಕರ ಮದುವೆಗೆ ಹಾಸನದ ಅನ್ನಪೂರ್ಣೇಶ್ವರಿ ಕಲ್ಯಾಣ
ಮಂಟಪಕ್ಕೆ ಹೋಗಿದ್ದು, ವಾಪಸ್ ಮನೆಗೆ ಹೋಗಲು ಹಾಸನದ ಕೆಎಸ್ಆರ್ಟಿಸಿ
ತರಬೇತಿ ಕೇಂದ್ರದ ಹತ್ತಿರ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಕೆಎ-01, ಎಇ-1152 ರ ಕಾರಿನ ಚಾಲಕ ತನ್ನ ಕಾರನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ಗೆ
ಡಿಕ್ಕಿ ಮಾಡಿದ ಪರಿಣಾಮ ಶ್ರೀ ಪ್ರಕಾಶ್,
ರವರು
ಬೈಕ್ ಸಮೇತ ರಸ್ತೆಗೆ ಬಿದ್ದು, ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆ ಚಿಕಿತ್ಸೆ
ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ತಪಾಸಣೆ ನಡೆಸಿ ಗುಣವಾಗುವುದಿಲ್ಲವೆಂದು ತಿಳಿಸಿದ
ಕಾರಣ ವಾಪಸ್ ಹಾಸನ ಸಕರ್ಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡುತ್ತಿದ್ದು, ದಿನಾಂಕ: 14-05-2018 ರಂದು ಬೆಳಗಿನ ಜಾವ 3-00 ಗಂಟೆಗೆ ಶ್ರೀ ಪ್ರಕಾಶ್ ಬಿನ್ ರಾಮೇಗೌಡ, 45 ವರ್ಷ, ಬೂವನಹಳ್ಳಿ
ಗ್ರಾಮ, ಕಸಬಾ ಹೋಬಳಿ, ಹಾಸನ ತಾಲ್ಲೂಕು ರವರು ಚಿಕಿತ್ಸೆ ಫಲಕಾರಿಯಾಗದೇ
ಮೃತಪಟ್ಟಿರುತ್ತಾರೆಂದು ಮೃತರ ಕು|| ರಕ್ಷಿತಾ, ರವರು
ಕೊಟ್ಟ ದೂರಿನ ಮೇರೆಗೆ ಹಾಸನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ
ತನಿಖೆಯಲ್ಲಿರುತ್ತೆ. ಗೂಡ್ಸ್ ಆಪೇ ಆಟೋ ಬೈಕ್ಗೆ
ಡಿಕ್ಕಿ, ಬೈಕ್ ಸವಾರ ಸಾವು ದಿನಾಂಕ: 13-05-2018 ರಂದು ಬೆಳಿಗ್ಗೆ 10-20 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಕಸಬಾ ಹೋಬಳಿ, ಗುಲಸಿಂದ
ಗ್ರಾಮದ ವಾಸಿ ಶ್ರೀ ದೇವರಾಜೇಗೌಡ, ರವರ ಬಾಬ್ತು ಏಂ-13-ಇಅ-5971 ರ ವಿಗೋ ಸ್ಕೂಟಿಯಲ್ಲಿ ಮಗಳು ಕು|| ಭಾನುಮತಿಯನ್ನು ಕರೆದುಕೊಂಡು ಬರಲು ಚನ್ನರಾಯಪಟ್ಟಣ ಬಸ್ ನಿಲ್ದಾಣಕ್ಕೆ ಹೋಗಲು
ಚನ್ನರಾಯಪಟ್ಟಣ ತಾಲ್ಲೂಕು, ಕಸಬಾ ಹೋಬಳಿ, ಗೂರನಹಳ್ಳಿ ಗ್ರಾಮದ ರುದ್ರ ಭೂಮಿ ಹತ್ತಿರ
ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಏಂ-27-ಃ-3163 ರ ಗೂಡ್ಸ್ ಆಪೇ ಆಟೋ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು
ಬಂದು ಬೈಕ್ ಡಿಕ್ಕಿಯಾದ ಪರಿಣಾಮ, ಶ್ರೀ ದೇವರಾಜೇಗೌಡ, 58 ವರ್ಷ, ಗುಲಸಿಂದ
ಗ್ರಾಮ, ಕಸಬಾ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು ರವರು ತೀವ್ರ ಸ್ವರೂಪದ
ರಕ್ತಗಾಯಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಮೃತರ ಸಂಬಂಧಿಕರಾದ ಶ್ರೀ ಟಿ.ಎನ್.
ರಾಘವೇಂದ್ರಕುಮಾರ್, ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ
ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಹುಡುಗಿ ಕಾಣೆ : ದಿನಾಂಕ: 12-05-2018 ರಂದು ಸಂಜೆ 5-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಕೊತ್ತನಗಟ್ಟ ಗ್ರಾಮದ ವಾಸಿ ಶ್ರೀ ನಂಜಪ್ಪ, ರವರ ಮಗಳು ಕು|| ಕೆ.ಎನ್. ಪಲ್ಲವಿ, ಶ್ರವಣಬೆಳಗೊಳಕ್ಕೆ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ
ಹೋದವರು ಇದುವರೆವಿಗೂ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ
ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ಪಲ್ಲವಿಯ ತಂದೆ ಶ್ರೀ ನಂಜಪ್ಪ, ರವರು ಕೊಟ್ಟ ದೂರಿನ ಮೇರೆಗೆ ಶ್ರವಣಬೆಳಗೊಳ ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗನ ಚಹರೆ: ಕು|| ಕೆ.ಎನ್. ಪಲ್ಲವಿ ಬಿನ್ ನಂಜಪ್ಪ, 19 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಾಣಾ ಮೈಕಟ್ಟು, ಮನೆಯಿಂದ
ಹೋಗುವಾಗ ಬಿಳಿ ಚೂಡಿದಾರ ಧರಿಸಿರುತ್ತಾರೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08176-257229 ಕ್ಕೆ ಸಂಪರ್ಕಿಸುವುದು.
No comments:
Post a Comment