ಪತ್ರಿಕಾ ಪ್ರಕಟಣೆ ದಿನಾಂಕ: 13-05-2018
ಕಾರು ನಿಯಂತ್ರಣ ತಪ್ಪಿ ಹಸುಗೆ ಡಿಕ್ಕಿ ಒಂದು ಸಾವು : ದಿನಾಂಕ: 12-05-2018 ರಂದು ಬೆಳಗ್ಗೆ 10.00 ಗಂಟೆ ಸಮಯದಲ್ಲಿ ಹೊಳೆನರಸೀಪುರ ತಾಲ್ಲೂಕ್
ಚಿಟ್ಟನಹಳ್ಳಿಗ್ರಾಮದ ವಾಸಿ ಶೋಭಾ ರವರ ಗಂಡ ಈರಾಜಿ ರವರು ಮತದಾನ ಮಾಡಲು ನಾಗರಾಜು ರವರೊಂದಿಗೆ
ಕೆಎ-53-ಸಿ-8138ರ ಸ್ವಿಪ್ಟ್ ಕಾರಿನಲ್ಲಿ ಸಂಕನಹಳ್ಳಿ ಗ್ರಾಮಕ್ಕೆ ಹೋಗುತ್ತಿದ್ದಾಗ ಕಾರು ಚಾಲಕ
ನಾಗರಾಜು ಅತಿವೇಗ ಮತ್ತು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಹೋಗುತ್ತಿದ್ದಾಗ ಹಸು ಕಾರಿಗೆ ಅಡ್ಡ
ಬಂದ ಪರಿಣಾಮ ಕಾರು ನಿಯಂತ್ರಣ ತಪ್ಪ ರಸ್ತೆ ಬದಿಗೆ ಮಗುಚಿ ಬಿದ್ದಿದ್ದರಿಂದ ಕಾರಿನಲ್ಲಿದ್ದ
ಈರಾಜಿ ರವರಿಗೆ ತಲೆಗೆ ಪೆಟ್ಟಾಗಿ ಈರಾಜಿ ಬಿನ್ ಲೇಟ್ ಸಣ್ಣಜವರಯ್ಯ, 38ವರ್ಷ, ಚಿಟ್ಟನಹಳ್ಳಿಗ್ರಾಮ, ಹೊಳೆನರಸೀಪುರ ತಾಲ್ಲೂಕ್ ರವರು ಸ್ಥಳದಲ್ಲಿಯೇ ರವರು
ಮೃತಪಟ್ಟಿರುತ್ತಾರೆಂದು ಮೃತರ ಹೆಂಡತಿ ಶೋಭಾ ರವರು ಕೊಟ್ಟ ದೂರಿನ ಮೇರೆಗೆ ಹೊಳೆನರಸೀಪು
ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕ್ರಮ ಕೈಗೊಂಡಿರುತ್ತದೆ.
ಆಟೋಗೆ ಲಾರಿ ಡಿಕ್ಕಿ ಎರಡು ಸಾವು : ದಿನಾಂಕ: 12-05-2018 ರಂದು ಬೆಳಗ್ಗೆ 11.00 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕ್
ಕಲ್ಲುಶೆಟ್ಟಿಹಳ್ಳಿಗ್ರಾಮದ ವಾಸಿ ಲಕ್ಷ್ಮಣ ರವರು ಕೆಲಸದ ನಿಮಿತ್ತ ಬೇಲೂರಿಗೆ ಬಂದು ವಾಪಸ್ಸು
ತಮ್ಮ ಗ್ರಾಮಕ್ಕೆ ಹೋಗಲೆಂದು ಬೇಲೂರು-ಹಾಸನ ರಸ್ತೆ ಸಿ.ಹೊಸಳ್ಳಿ ಗೇಟ್ ಸಮೀಪ ಬೈಕ್ನಲ್ಲಿ
ಹೋಗುತ್ತಿದ್ದಾಗ ಲಕ್ಷ್ಮಣ ರವರ ಮುಂದೆ ಕೆಎ-46-6608 ರ ಬಜಾಜ್ ಅಪೇ ಆಟೋದಲ್ಲಿ ಸುಮಾರು ಜನ ಕಉಳಿತು ಹೋಗುತ್ತಿದ್ದು, ಆಟೋ ಚಾಲಕ ತನ್ನ ಆಟೋವನ್ನು ಚಿಲ್ಕೂರು ಕಡೆಗೆ
ತಿರುಗಿಸಿದಾಗ ಹಾಸನ ಕಡೆಯಿಂದ ಬಂದ ಕೆಎ-13-ಬಿ-4263 ರ ಲಾರಿ ಚಾಲಕ ತನ್ನ ಲಾರಿಯನ್ನು
ಅತಿವೇಗ ಮತ್ತು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಆಟೋಗೆ ಡಿಕ್ಕಿ ಮಾಡಿದ ಪರಿಣಾಮ
ಆಟೋ ಜಕಂಗೊಂಡು ಆಟೋದಲ್ಲಿದ್ದ ಪ್ರಯಾಣಿಕರು ಕೆಳಗೆ ಬಿದ್ದಿದ್ದು, ಸ್ಥಳದಲ್ಲಿದ್ದವರು ಆಂಬುಲೆನ್ಸ್ನಲ್ಲಿ ಬೇಲೂರಿನ
ಸಕರ್ಾರಿ ಆಸ್ಪತ್ರೆಗೆ ತಂದಾಗ ಶಾರದಮ್ಮ ಕೋಂ ಲೇಟ್ ರಾಮಯ್ಯ, 50ವರ್ಷ, ರಾಮೇನಹಳ್ಳಿಗ್ರಾಮ, ಬೇಲೂರು ತಾಲ್ಲೂಕ್, ಕಮಲಮ್ಮ
ಕೋಂ ಲೇಟ್ ನಿಂಗಯ್ಯ, 45ವರ್ಷ, ರಾಮೇನಹಳ್ಳಿಗ್ರಾಮ, ಬೇಲೂರು ತಾಲ್ಲೂಕ್ ರವರು ಮೃತಪಟ್ಟಿರುತ್ತಾರೆಂದು
ಪ್ರತ್ಯಕ್ಷದರ್ಶಿ ಲಕ್ಷ್ಮಣ ರವರು ಕೊಟ್ಟ ದೂರಿನ ಮೇರೆಗೆ ಬೇಲೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ
ತನಿಖೆ ಕ್ರಮ ಕೈಗೊಂಡಿರುತ್ತದೆ.
No comments:
Post a Comment