* * * * * * HASSAN DISTRICT POLICE

Monday, May 14, 2018

PRESS NOTE : 11-05-2018


ಪತ್ರಿಕಾ ಪ್ರಕಟಣೆ             ದಿನಾಂಕ: 11-05-2018

ಕಾರು ಡಿಕ್ಕಿ, ಪಾದಚಾರಿ ಸಾವು:   ದಿನಾಂಕ: 09-05-2018 ರಂದು ರಾತ್ರಿ 9-30 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಚಿಕ್ಕಮಂಡಿಗನಹಳ್ಳಿ ರಾಘವೇಂದ್ರ ಕಾಲೋನಿ ವಾಸಿ ಶ್ರೀ ಸಣ್ಣೇಗೌಡ, ರವರು ಮನೆಗೆ ಸಾಮಾನು ತರಲು ತಣ್ಣೀರುಹಳ್ಳ ಶೋ ರೂಮ್ ಮುಂಭಾಗ ಬಿ.ಎಂ. ರಸ್ತೆಯ ಎಡಭಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಕಾರಿನ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಶ್ರೀ ಸಣ್ಣೇಗೌಡ ಬಿನ್ ದ್ಯಾವೇಗೌಡ, 65 ವರ್ಷ, ರಾಘವೇಂದ್ರ ಕಾಲೋನಿ, ಚಿಕ್ಕಮಂಡಿಗನಹಳ್ಳಿ ಹಾಸನ ತಾಲ್ಲೂಕು ರವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆಂದು ಮೃತರ ಮಗ ಶ್ರೀ ಕೃಷ್ಣೇಗೌಡ, ರವರು ಕೊಟ್ಟ ದೂರಿನ ಮೇರೆಗೆ ಹಾಸನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

No comments: