* * * * * * HASSAN DISTRICT POLICE

Tuesday, May 8, 2018

PRESS NOTE : 08-05-2018


ಪತ್ರಿಕಾ ಪ್ರಕಟಣೆ          ದಿನಾಂಕ: 08-05-2018.

ಟಾಟಾ ಏಸ್ ವಾಹನ ಬೈಕಿಗೆ ಡಿಕ್ಕಿ, ಬೈಕ್ ಸಾವರ ಸಾವು :       ದಿನಾಂಕ: 07-05-2018 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಬಿ. ಕಾಟೀಹಳ್ಳಿ, ಎಸ್.ಬಿ.ಎಂ. ಕಾಲೋನಿ ವಾಸಿ ಶ್ರೀ ಬ್ರಹ್ಮಲಿಂಗೇಗೌಡ ಎಂ.ಡಿ, ರವರ ಬಾಬ್ತು ಕೆಎ-13-ಯು-3582 ರ ಹೊಂಡಾ ಆಕ್ಟೀವಾ ಬೈಕಿನಲ್ಲಿ ಹಾಸನ ಡೈರಿ ಸರ್ಕಲ್ ಹತ್ತಿರವಿರುವ  ಎಸ್.ಬಿ.ಐ ಬ್ಯಾಂಕಿಗೆ ಸ್ವಂತ ಕೆಲಸಕ್ಕೆಂದು ಹೋಗಿ ಹಾಸನ ಡೈರಿ ಸರ್ಕಲ್ ಹತ್ತಿರವಿರುವ ಎಸ್.ಬಿ.ಐ ಬ್ಯಾಂಕ್ ಮುಂಭಾಗ ಬಿ.ಎಂ. ರಸ್ತೆಯಲ್ಲಿರುವ ಡಿವ್ಶೆಡರ್ ಓಪನ್ ಇರುವ ಜಾಗದಲ್ಲಿ ಯಾವುದೇ ವಾಹನಗಳು ಬಾರದೆ ಇದ್ದುದನ್ನು ನೋಡಿಕೊಂಡು ಬೈಕ್ನ್ನು ನಿಧಾನವಾಗಿ ಕ್ರಾಸ್ ಮಾಡುತ್ತಿರುವಾಗ ಹಾಸನ ಕಡೆಯಿಂದ ಬಂದ ಕೆಎ-11-ಬಿ-4086 ರ ಟಾಟಾ ಏಸ್ ವಾಹನದ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ಬೈಕ್ ಸಮೇತ ರಸ್ತೆಯ ಮೇಲೆ ಬಿದ್ದು, ತೀವ್ರ ಸ್ವರೂಪದ ರಕ್ತಗಾಯಗಳಾಗಿ ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಶ್ರೀ ಬ್ರಹ್ಮಲಿಂಗೇಗೌಡ ಎಂ.ಡಿ. ಬಿನ್ ಲೇಟ್ ದೊಡ್ಡೇಗೌಡ, 65 ವರ್ಷ, ಬಿ,ಕಾಟೀಹಳ್ಳಿ, ಎಸ್ಬಿಎಂ. ಕಾಲೋನಿ, ಹಾಸನ ತಾಲ್ಲೂಕು, ರವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆಂದು ಮೃತರ ಪತ್ನಿ ಶ್ರೀಮತಿ ಮೀನಾಕ್ಷಮ್ಮ ಹೆಚ್.ಎಸ್. ರವರು ಕೊಟ್ಟ ದೂರಿನ ಮೇರೆಗೆ ಹಾಸನ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಹುಡುಗಿ ಕಾಣೆ : ದಿನಾಂಕ: 07-05-2018 ರಂದು ಮಧ್ಯಾಹ್ನ 12-30 ಗಂಟೆ ಸಮಯದಲ್ಲಿ  ಹಾಸನ ತಾಲ್ಲೂಕು,  ಕಟ್ಟಾಯ ಹೋಬಳಿ, ನಾಯಕರಹಳ್ಳಿ  ಗ್ರಾಮದ ಲಕ್ಕೇಗೌಡ ರವರ ಮಗಳು ಶೃತಿ ಎನ್.ಎಲ್. ಹಾಸನದ ಹೊಸಬಸ್ ನಿಲ್ದಾಣದ ಪಕ್ಕದಲ್ಲಿರುವ ಎನ್ಡಿಆರ್ಕೆ ಕಾಲೇಜಿಗೆ  ಮಾಕ್ಸರ್್ ಕಾಡರ್್ ತೆಗೆದುಕೊಂಡು ಬರಲು ಕಾಲೇಜಿಗೆ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಶೃತಿ ಎನ್.ಎಲ್. ರವರ ತಂದೆ ಶ್ರೀ ಲಕ್ಕೇಗೌಡ ರವರು ಕೊಟ್ಟ ದೂರಿನ ಮೇರೆಗೆ ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ  ಹುಡುಗಿಯ ಚಹರೆ: ಶೃತಿ ಎನ್.ಎಲ್. ಬಿನ ಲಕ್ಕೇಗೌಡ, 27 ವರ್ಷ, 5'5'' ಅಡಿ ಎತ್ತರ,  ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಕೆಂಪು ಮತ್ತು ಹಳದಿ ಬಣ್ಣದ ಚೂಡಿದಾರ ಧರಿಸಿರುತ್ತಾಳೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ ಹಾಸನ ಬಡಾವಣೆ ಠಾಣೆ ಫೋನ್ ನಂ: 08172-268967 ಕ್ಕೆ ಸಂಪರ್ಕಿಸುವುದು.

ಹುಡುಗಿ ಕಾಣೆ : ದಿನಾಂಕ: 07-05-2018 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ದಂಡಿಗನಹಳ್ಳಿ ಹೋಬಳಿ, ದೊಡ್ಡಕರಡೇವು ಗ್ರಾಮದ ನಂಜಪ್ಪ ರವರ ಮಗಳು ಚೈತ್ರಾ ಡಿ.ಎನ್. ಮನೆಯಿಂದ ಚನ್ನರಾಯಪಟ್ಟಣಕ್ಕೆ ಹೋಗಿ ಬರುವುದಾಗಿ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಚೈತ್ಯಾ ರವರ ತಾಯಿ ಶ್ರೀಮತಿ ಲಕ್ಷ್ಮಿದೇವಿ ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಚೈತ್ರಾ ಬಿನ್ ಲೇಟ್ ನಂಜಪ್ಪ, 21 ವರ್ಷ, 5'3'' ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾಳೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆ ಫೋನ್ ನಂ08176-254933 ಕ್ಕೆ ಸಂಪರ್ಕಿಸುವುದು.

No comments: