* * * * * * HASSAN DISTRICT POLICE

Monday, May 7, 2018

PRESS NOTE 07-05-2018




                                              ಪತ್ರಿಕಾ ಪ್ರಕಟಣೆ               ದಿನಾಂಕ: 07-05-2018.

ಕಾರು ಬೈಕಿಗೆ ಡಿಕ್ಕಿ ಬೈಕ್ ಸವಾರನ ಸಾವು:

ದಿನಾಂಕ: 06-05-2018 ರಂದು ಮಧ್ಯಾಹ್ನ 03-30 ಗಂಟೆ ಸಮಯದಲ್ಲಿ  ಚನ್ನರಾಯಪಟ್ಟಣ ತಾಲ್ಲೂಕು, ಶ್ರವಣಬೆಳಗೊಳ ಹೋಬಳಿ  ಬಸ್ತಿಹಳ್ಳಿ ಗ್ರಾಮದ ನಂದೀಶ ರವರ ಬಾಬ್ತು ಕೆಎ-13-ವೈ-2948 ರ ಮೋಟಾರು ಬೈಕಿನಲ್ಲಿ  ಗ್ರಾಮದ ಅಶೋಕ ಮತ್ತು ಮಂಜೇಗೌಡ ರವರನ್ನು ಕೂರಿಸಿಕೊಂಡು ಸಂಬಂಧಿಕರ  ಮದುವೆಗೆ  ಹಳ್ಳಿಮೈಸೂರು ಹೋಬಳಿಯ ಅಣ್ಣೇಚಾಕನಹಳ್ಳಿ ಗ್ರಾಮಕ್ಕೆ ಹೋಗಿ ವಾಪಸ್ ಊರಿಗೆ ಹೋಗಲು ಹೊಳೆನರಸೀಪುರ-ಶ್ರವಣೂರು ರಸ್ತೆ, ಶ್ರವಣೂರು ಗ್ರಾಮದ ಹತ್ತಿರ ಹೋಗುತ್ತಿದ್ದಾಗ ಶ್ರವಣೂರು ಕಡೆಯಿಂದ  ಬಂದ ಕೆಎ-13-ಸಿ-1368 ರ ಕಾರಿನ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ಬೈಕ್ ಸಮೇತ ರಸ್ತೆಗೆ ಬಿದ್ದು, ತೀವ್ರ ಸ್ವರೂಪದ ರಕ್ತಗಾಯಗಳಾಗಿ ನಂದೀಶ ಬಿನ್ ಮಂಜೇಗೌಡ,  45 ವರ್ಷ ರವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಉಳಿದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿರುತ್ತದೆಂದು ಮೃತರ ತಂದೆ ಶ್ರೀ ಮಂಜೇಗೌಡ ರವರು ಕೊಟ್ಟ ದೂರಿನ ಮೇರೆಗೆ ಹಳ್ಳಿಮೈಸೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ.

ಮನುಷ್ಯ ಕಾಣೆ
ದಿನಾಂಕ: 19-04-2018 ರಂದು ಬೆಳಿಗ್ಗೆ 07-00 ಗಂಟೆ ಸಮಯದಲ್ಲಿ  ಸಕಲೇಶಪುರ ಪಟ್ಟಣ ಚಂಪಕನಗರ ಬಡಾವಣೆ ವಾಸಿ ಮಹೇಶ್ ಕೆ.ಎನ್. ರವರು ಎಂದಿನಂತೆ ಹೇಮ ಗಂಗಾ ಸರ್ವಿಸ್ಸ್ ಸ್ಟೇಷನ್ ಪಕ್ಕದ ಮಹೇಶ್ ಆಟೋ ವಕರ್್ಗೆ ಮೆಕ್ಯಾನಿಕ್ ಕೆಲಸಕ್ಕೆ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು  ಮಹೇಶ್ ಕೆ.ಎನ್. ರವರ ಪತ್ನಿ ಶ್ರೀಮತಿ ಗಾಯಿತ್ರಿ ಎನ್.ಬಿ ರವರು ದಿನಾಂಕ: 06-05-2018 ರಂದು ಕೊಟ್ಟ ದೂರಿನ ಮೇರೆಗೆ ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ವ್ಯಕ್ತಿಯ ಚಹರೆ: ಮಹೇಶ್ ಕೆ.ಎನ್. ಬಿನ್ ನರಸೇಗೌಡ, 36 ವರ್ಷ, 5'6'' ಅಡಿ ಎತ್ತರತುಳು, ಕನ್ನಡ, ಹಿಂದಿ ಭಾಷೆ ಮಾತನಾಡುತ್ತಾರೆ. ಕಾಣೆಯಾದ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಸಕಲೇಶಪುರ ನಗರ ಠಾಣೆ ಫೋನ್ ನಂ. 08173-244100 ಕ್ಕೆ ಸಂಪರ್ಕಿಸುವುದು.

ಮನುಷ್ಯ ಕಾಣೆ
     ದಿನಾಂಕ: 06-05-2018 ರಂದು ಬೆಳಿಗ್ಗೆ 09-00 ಗಂಟೆ ಸಮಯದಲ್ಲಿ  ಹೊಳೆನರಸೀಪುರ ತಾಲ್ಲೂಕು, ಹಳ್ಳಿಮೈಸೂರು ಹೋಬಳಿ, ಅಣ್ಣೆಚಾಕನಹಳ್ಳಿ  ಗ್ರಾಮದ ಕೃಷ್ಣ ಮನೆಯಿಂದ ಹೊರಗಡೆ ಹೋದವನು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ  ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಕೃಷ್ಣ ರವರ ತಾಯಿ ಶ್ರೀಮತಿ ನಿಂಗಮ ರವರು ಕೊಟ್ಟ ದೂರಿನ ಮೇರೆಗೆ ಹಳ್ಳಿಮೈಸೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ವ್ಯಕ್ತಿಯ ಚಹರೆ: ಕೃಷ್ಣ ಬಿನ್ ಲೇಟ್ ಚಿಕ್ಕೇಗೌಡ, 48 ವರ್ಷ, ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾದ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಹಳ್ಳಿಮೈಸೂರು ಠಾಣೆ ಫೋನ್ ನಂ. 08175-260100 ಕ್ಕೆ ಸಂಪರ್ಕಿಸುವುದು.



ಹುಡುಗಿ ಕಾಣೆ
     ದಿನಾಂಕ: 05-05-2018 ರಂದು ಮಧ್ಯಾಹ್ನ 12-00 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಹಳೇಬೀಡು ಹೋಬಳಿ, ಹಿರೇಹಳ್ಳಿ ಗ್ರಾಮದ  ನಾಗಭೂಷಣ್ ರವರ ಮಗಳು ಪ್ರೀತಿ ಮನೆಯಿಂದ ತುಮಕೂರಿಗೆ ದೊಡ್ಡಪ್ಪನ ಮನೆಗೆ ಹೋಗಿ ಬರುವುದಾಗಿ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಪ್ರೀತಿ ರವರ ತಂದೆ ಶ್ರೀ ನಾಗಭೂಷಣ್ ರವರು ಕೊಟ್ಟ ದೂರಿನ ಮೇರೆಗೆ ಹಳೇಬೀಡು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಪ್ರೀತಿ ಬಿನ್ ನಾಗಭೂಷಣ್, 20 ವರ್ಷ, 5'2'' ಅಡಿ ಎತ್ತರ, ಕೋಲುಮುಖ, ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾಳೆ. ಕಾಣೆಯಾದ ಹುಡುಗಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಹಳೇಬೀಡು ಠಾಣೆ ಫೋನ್ ನಂ. 08177-273201 ಕ್ಕೆ ಸಂಪರ್ಕಿಸುವುದು.

No comments: