* * * * * * HASSAN DISTRICT POLICE

Wednesday, May 2, 2018

PRESS NOTE : 01-05-2018


ಪತ್ರಿಕಾ ಪ್ರಕಟಣೆ                           ದಿನಾಂಕ:01-05-2018
ಮನುಷ್ಯ ಕಾಣೆ : ದಿನಾಂಕ:26-04-2018 ರಂದು ಬೆಳಗ್ಗೆ 11.00 ಗಂಟೆಗೆ ಹೊಳೆನರಸೀಪುರ ತಾಲ್ಲೂಕ್ ದೇವರಗುಡ್ಡೇನಹಳ್ಳಿಗ್ರಾಮದ ವಾಸಿ ಶಿವಕುಮಾರ ರವರ ತಂದೆ ಚಂದ್ರಪ್ಪ ರವರು ಸಿಂಗನಕುಪ್ಪೆ ಗ್ರಾಮದಲ್ಲಿನ ಗೃಹಪ್ರವೇಶಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆ ಮಾಡಿಕೊಡಬೇಕೆಂದು ಚಂದ್ರಪ್ಪ ರವರು ದಿನಾಂಕ:30-04-2018 ರಂದು ಕೊಟ್ಟ ದೂರಿನ ಮೇರೆಗೆ ಹಳ್ಳಿಮೈಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಮನುಷ್ಯನ ಚಹರೆ: ಚಂದ್ರಪ್ಪ, 60ವರ್ಷ, ಗೋಧಿ ಬಣ್ಣ, ದುಂಡುಮುಖ, 5 ಅಡಿ ಎತ್ತರ ಕನ್ನಡ ವಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಹಸಿರು ಬಿಳಿ ಶರ್ಟ್, ಬಿಳಿ ಪಂಚೆ ಧರಿಸಿರುತ್ತಾರೆ. ಈ ವ್ಯಕ್ತಿಯ ಸುಳಿವು ಸಿಕ್ಕಲ್ಲಿ ಹಳ್ಳಿಮೈಸೂರು ಪೊಲೀಸ್ ಠಾಣೆ ಪೋನ್ ನಂ.08175-260100 ಕ್ಕೆ ಸಂಪರ್ಕಿಸುವುದು.

ವಿವಿಧ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವರ  ಬಂಧನ, 444/- ಬೆಲೆಯ ಮದ್ಯ ವಶ
       
ಪ್ರಕರಣ-1 :- ದಿನಾಂಕ: 30-04-2018 ರಂದು ಸಂಜೆ 4.15 ಗಂಟೆ ಸಮಯದಲ್ಲಿ ಸಕಲೇಶಪುರ ತಾಲ್ಲೂಕ್ ಮೂಗಲಿಗ್ರಾಮದ ಧರ್ಮ ಎಂಬುವರು ತಮ್ಮ ಅಂಗಡಿಯ ಮುಂದೆ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆಂದು ಪಿಎಸ್ಐ ಶ್ರೀ ಜಗದೀಶ್, ಸಕಲೇಶಪುರ ಗ್ರಾಮಾಂತರ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಮದ್ಯ  ಮಾರಾಟ ಮಾಡುತ್ತಿದ್ದವನ ಹಿಡಿದು ಹೆಸರು ವಿಳಾಸ ಕೇಳಲಾಗಿ ಧರ್ಮ ಬಿನ್ ನಿಂಗಪ್ಪಶೆಟ್ಟಿ, 40ವರ್ಷ, ಮೂಗಲಿಗ್ರಾಮ, ಸಕಲೇಶಪುರ ತಾಲ್ಲೂಕ್ ಎಂದು ತಿಳಿಸಿದವನನ್ನು ದಸ್ತಗಿರಿ ಮಾಡಿಕೊಂಡು ಮದ್ಯ ಮಾರಾಟಕ್ಕಿಟ್ಟಿದ್ದ 300/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು  ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ದಸ್ತಗಿರಿ ಮಾಡಿ ತನಿಖೆ ಕ್ರಮ ಕೈಗೊಂಡಿರುತ್ತೆ. 
ಪ್ರಕರಣ-2 :- ದಿನಾಂಕ: 30-04-2018 ರಂದು ಮಧ್ಯಾಹ್ನ 3.45 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕ್ ಅರೇಹಳ್ಳಿ ಹೋಬಳಿ ಲಿಂಗಾಪುರ ಗ್ರಾಮದ ಸಾರ್ವಜನಿಕ ಬಸ್ನಿಲ್ದಾಣದಲ್ಲಿ ಒಬ್ಬ ವ್ಯಕ್ತಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆಂದು ಎಎಸ್ಐ ಶ್ರೀ ಚಲುವರಾಜ, ಅರೇಹಳ್ಳಿ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಮದ್ಯ  ಮಾರಾಟ ಮಾಡುತ್ತಿದ್ದವನ ಹಿಡಿದು ಹೆಸರು ವಿಳಾಸ ಕೇಳಲಾಗಿ ಮಧುಗೌಡ ಬಿನ್ ರಮೇಶಗೌಡ, 20ವರ್ಷ, ಕಡೇಗಜರ್ೆಗ್ರಾಮ, ಅರೇಹಳ್ಳಿ ಹೋಬಳಿ, ಅರಸೀಕೆರೆ ತಾಲ್ಲೂಕ್ ಎಂದು ತಿಳಿಸಿದವನನ್ನು ದಸ್ತಗಿರಿ ಮಾಡಿಕೊಂಡು ಮದ್ಯ ಮಾರಾಟಕ್ಕಿಟ್ಟಿದ್ದ 144/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು  ಅರೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ದಸ್ತಗಿರಿ ಮಾಡಿ ತನಿಖೆ ಕ್ರಮ ಕೈಗೊಂಡಿರುತ್ತೆ. 
ಹುಡುಗಿ ಕಾಣೆ
      ದಿನಾಂಕ :30-04-2018 ರಂದು ಬೆಳಗ್ಗೆ 7.30 ಗಂಟೆ  ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕ್ ತಗ್ಗಮ್ಮ ಬಡಾವಣೆಯ ವಾಸಿ ಲತಾ ರವರ ಮಗಳು ಸ್ನೇಹ ರವರು ಮನೆಯಿಂದ  ಅಂಗಡಿಗೆ ಹೋಗುವುದಾಗಿ ಹೇಳಿ ಹೋದವಳು  ವಾಪಸ್ಸು ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಸ್ನೇಹಾಳ ತಾಯಿ ಲತಾ ರವರು ದಿ :30-04-2018 ರಂದು ಕೊಟ್ಟ ದೂರಿನ ಮೇರೆಗೆ  ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹುಡುಗಿ ಚಹರೆ : ಸ್ನೇಹಾ ಬಿನ್ ಮಂಜುನಾಥ, 18ವರ್ಷ,  5.3 ಅಡಿ ಎತ್ತರ, ಬಿಳಿ ಬಣ್ಣ, ಸಾಧಾರಣ ಮೈಕಟ್ಟು, ಕೋಲುಮುಖ, ಕನ್ನಡ ಬಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ನೀಲಿ ಮತ್ತು ಬಿಳಿ  ಬಣ್ಣದ ಚೂಡಿದಾರ್ ಧರಿಸಿರುತ್ತಾಳೆ. ಕಾಣೆಯಾದ ಹುಡುಗಿ ಪತ್ತೆಯಾದಲ್ಲಿ ಚನ್ನರಾಯಪಟ್ಟಣ ನಗರ ಪೊಲೀಸ್  ಠಾಣೆ ಫೋನ್ ನಂ. 08176-252333 ಕ್ಕೆ ಸಂಪರ್ಕಿಸುವುದು.

No comments: