* * * * * * HASSAN DISTRICT POLICE

Monday, April 30, 2018

PRESS NOTE : 28-04-2018


ಪತ್ರಿಕಾ ಪ್ರಕಟಣೆ               ದಿನಾಂಕ: 28-04-2018.

ಜೂಜಾಡುತ್ತಿದ್ದ ಇಬ್ಬರ ಬಂಧನ, ಬಂಧಿತರಿಂದ ಸುಮಾರು 2050/- ನಗದು ವಶ : ದಿನಾಂಕ: 27-04-2018 ರಂದು ಸಂಜೆ 7-00 ಗಂಟೆ ಸಮಯದಲ್ಲಿ ಹೊಳೆನರಸೀಪುರ ಪಟ್ಟಣದ ಚಿಕ್ಕ ಮಸೀದಿ ರಸ್ತೆ, ಪೇಟೆ ಬೀದಿಯಲ್ಲಿರುವ ಅಪೂರ್ವ ಅಂಗಡಿ ಹತ್ತಿರ ಸಾರ್ವಜನಿಕರ ಸ್ಥಳದಲ್ಲಿ ಜೂಜಾಡುತ್ತಿದ್ದಾರೆಂದು ಶ್ರೀ ಪಿ. ಮೋಹನ್ಕೃಷ್ಣ, ಪಿಎಸ್ಐ ಹೊಳೆನರಸೀಪುರ ನಗರ ಠಾಣೆ ರವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಕುಮಾರ ಬಿನ್ ರಂಗಶೆಟ್ಟಿ, 33 ವರ್ಷ, ಕಂಚುಗಾರರ ಬೀದಿ, ಹೊಳೆನರಸೀಪುರ ನಗರ 2) ಮಿರ್ಜಾ ಕಬೀರ್ ಹುಸೇನ್ ಬಿನ್ ಮಿರ್ಜಾ ಮಸೀದ್ ಆಲಿ. 26 ವರ್ಷ, ಹೊಳೆನರಸೀಪುರ ನಗರ ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ಸುಮಾರು 2050/-ನಗದನ್ನು ಅಮಾನತ್ತುಪಡಿಸಿಕೊಂಡು ದಸ್ತಗಿರಿಮಾಡಿಕೊಂಡು ಹೊಳೆನರಸೀಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.
ಬೈಕ್ ಬೈಕ್ಗೆ ಡಿಕ್ಕಿ, ಬೈಕ್ ಸಾವರ ಸಾವು: ದಿನಾಂಕ: 27-04-2018 ರಂದು ಸಂಜೆ 4-30 ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕು, ರಾಮನಾಥಪುರ ಹೋಬಳಿ, ಸೋಂಪುರ ಗ್ರಾಮದ ವಾಸಿ ಶ್ರೀ ವೆಂಕಟೇಶ್,  ರವರು ಪೋಸ್ಟ್ ಮ್ಯಾನ್ ಆಗಿದ್ದು, ರವರ ನೊಂದಣಿಯಾಗದ ಹೊಸ ಬೈಕ್ನಲ್ಲಿ ಹೋಗತ್ತಿದ್ದಾಗ ಅರಕಲಗೂಡು ತಾಲ್ಲೂಕು, ಕೊಣನೂರು ಹೋಬಳಿ, ರುದ್ರಪಟ್ಟಣ ಹ್ಯಾಂಡ್ ಪೋಸ್ಟ್, ಸಾಕಮ್ಮ ಮೋರಿ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಅದೇ ಗ್ರಾಮದ ವಾಸಿ ಶ್ರೀ ಚಂದ್ರಶೇಖರ್, ರವರನ್ನು ನೋಡಿ ಬೈಕ್  ನಿಲ್ಲಿಸಿ ಪೋಸ್ಟ್ ಕೊಡಲು ಹೋದಾಗ ಹಿಂಬದಿಯಿಂದ ಬಂದ  ಬೈಕ್ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ವೆಂಕಟೇಶ್, ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಕೊಣನೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಅಕಲಗೂಡು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಶ್ರೀ ವೆಂಕಟೇಶ್ ಬಿನ್  ಲೇಟ್ ಕೆಂದಯ್ಯ, 42 ವರ್ಷ, ಸೋಂಪುರ ಗ್ರಾಮ, ಕೊಣನೂರು ಹೋಬಳಿ, ಅರಕಲಗೂಡು ತಾಲ್ಲೂಕು ರವರು ಮಾರ್ಗಮಧ್ಯೆ ಮೃತಪಟ್ಟಿರುತ್ತಾರೆಂದು ಪ್ರತ್ಯಕ್ಷದರ್ಶಿ ಶ್ರೀ ಚಂದ್ರಶೇಖರ್, ರವರು ಕೊಟ್ಟ ದೂರಿನ ಮೇರೆಗೆ ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಹುಡುಗಿ ಕಾಣೆ : ದಿನಾಂಕ: 27-04-2018 ರಂದು ಬೆಳಗಿನಜಾವ 3-00 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಶೆಟ್ಟಿಹಳ್ಳಿ ಗ್ರಾಮದ ವಾಸಿ ಶ್ರೀ ಕಾಂತರಾಜು, ರವರ ಮಗಳು ಕು|| ಎಸ್.ಕೆ. ವರ್ಷ, ಬೇಲೂರಿನ ಬಿ.ಜಿಎಸ್ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿಕೊಂಡಿದ್ದು, ಎಂದಿನಂತೆ ಕಾಲೇಜಿಗೆ ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ , ಪತ್ತೆಮಾಡಿಕೊಡಬೇಕೆಂದು ಕು|| ಎಸ್.ಕೆ. ವರ್ಷಳ ಮಾವ ಶ್ರೀ ಬಸವರಾಜು, ರವರು ಕೊಟ್ಟ ದೂರಿನ ಮೇರೆಗೆ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕು|| ಎಸ್.ಕೆ. ವರ್ಷ ಬಿನ್ ಕಾಂತರಾಜು, 18 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಾಣ ಮೈಕಟ್ಟು, ಮನೆಯಿಂದ ಹೋಗುವಾಗ ಕೆಂಪುಬಣ್ಣ ಮತ್ತು ನೀಲಿ ಬಣ್ಣದ ಪ್ರಾಕ್ ಧರಿಸಿರುತ್ತಾರೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08177-222444  ಕ್ಕೆ ಸಂಪರ್ಕಿಸುವುದು.

No comments: