ಪತ್ರಿಕಾ ಪ್ರಕಟಣೆ
ದಿನಾಂಕ: 21-04-2018
ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದವನ ಬಂಧನ, ಬಂಧಿತನಿಂದ ಸುಮಾರು 885/- ಬೆಲೆಯ ಮದ್ಯ ವಶ:
ದಿನಾಂಕ: 21-04-2018 ರಂದು
ಬೆಳಿಗ್ಗೆ 9-10 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಸಂಶೆಟ್ಟಿಹಳ್ಳಿ
ಗ್ರಾಮದ ವಾಸಿ ಶ್ರೀ ಯೋಗೇಶ್, ರವರು ಹಣ ಸಂಪಾದನೆ ಮಾಡುವ ಉದ್ದೇಶದಿಂದ ಅಕ್ರಮವಾಗಿ
ಮದ್ಯ ಸಾಗಿಸುತ್ತಿದ್ದಾರೆಂದು ಶ್ರೀ ಕೆ. ಪಹ್ಲಾದ್, ಎಎಸ್ಐ, ಬೇಲೂರು
ಪೊಲೀಸ್ ಠಾಣೆ. ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ
ನೋಡಲಾಗಿ ಯಾವುದೇ ಪರವಾನಿಲ್ಲದೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದವನನ್ನು ಹಿಡಿದು ಹೆಸರು
ವಿಳಾಸ ಕೇಳಲಾಗಿ ಶ್ರೀ ಯೋಗೇಶ್ ಬಿನ್ ಈರೇಗೌಡ, 49 ವರ್ಷ, ಸಂಶೆಟ್ಟಿಹಳ್ಳಿ
ಗ್ರಾಮ,
ಬೇಲೂರು ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಸುಮಾರು 885/- ಬೆಲೆಯ
ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ
ಕೈಗೊಂಡಿರುತ್ತೆ.
ಬೈಕ್ಗೆ ಟಿಪ್ಪರ್ ಲಾರಿ ಡಿಕ್ಕಿ, ಬೈಕ್ ಸಾವರ ಸಾವು : ದಿನಾಂಕ: 18-04-2018 ರಂದು ಸಂಜೆ 4-00 ಗಂಟೆ
ಸಮಯದಲ್ಲಿ ಹಾಸನ ತಾಲ್ಲೂಕು, ಕಸಬಾ ಹೋಬಳಿ, ಕುಪ್ಪಳ್ಳಿ
ಗ್ರಾಮದ ವಾಸಿ ಶ್ರೀ ಪ್ರಣೀಣ್, ರವರ ಬಾಬ್ತು ಕೆಎ-13-ವೈ-9772ರ ಯಮಹಾ
ಮೋಟಾರ್ ಬೈಕ್ನಲ್ಲಿ ಬಾಣಾಂತನಕ್ಕೆ ಹೋಗಿದ್ದ ಹೆಂಡತಿ ಮತ್ತು ಮಗವನ್ನು ನೋಡಿಕೊಂಡು ಬರಲು
ಸಾಣೇನಹಳ್ಳಿ ಗ್ರಾಮಕ್ಕೆ ಹೋಗಲು ಹಾಸನ ತಾಲ್ಲೂಕು, ಕಟ್ಟಾಯ
ಹೋಬಳಿ,
ಪೆಟ್ರೋಲ್ ಬಂಕ್ ಹತ್ತಿರ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಕೆಎ-52, 8312 ರ ಟಿಪ್ಪರ್
ಲಾರಿ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ಗೆ ಡಿಕ್ಕಿ ಮಾಡಿದ
ಪರಿಣಾಮ ಬೈಕ್ ಸಮೇತ ರಸ್ತೆಗೆ ಬಿದ್ದಾಗ ಶ್ರೀ ಪ್ರವೀಣ್ ಬಿನ್ ನಾಗರಾಜು, ಕುಪ್ಪಳ್ಳಿ
ಗ್ರಾಮ,
ಕಸಬಾ ಹೋಬಳಿ, ಹಾಸನ ತಾಲ್ಲೂಕು, ರವರ ತಲೆಯ
ಮೇಲೆ ಲಾರಿಯ ಚಕ್ರ ಹರಿದು ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು
ಮೃತರ ತಂದೆ ಶ್ರೀ ನಾಗರಾಜು, ರವರು ಕೊಟ್ಟ ದೂರಿನ ಮೇರೆಗೆ ಗೊರೂರು ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಹುಡುಗಿ ಕಾಣೆ : ದಿನಾಂಕ: 16-04-2018 ರಂದು
ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಶಾಂತಿಗ್ರಾಮ
ಹೋಬಳಿ,
ಮುತ್ತಿಗೆ ಹಿರೇಹಳ್ಳಿ ಗ್ರಾಮದ ವಾಸಿ ಶ್ರೀ ಚಲುವರಾಜು, ರವರ ಮಗಳು ಕು|| ಎಂ.ಸಿ.
ರಜಿನಿ,
ಮನೆಯಿಂದ ಹೊರಗೆ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ
ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು
ಕು||
ಎಂ.ಸಿ. ರಜಿನಿಯ ಅಣ್ಣ ಶ್ರೀ ರಾಜೇಶ್, ರವರು ಕೊಟ್ಟ
ದೂರಿನ ಮೇರೆಗೆ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ
ಚಹರೆ: ಕು|| ಎಂ.ಸಿ. ರಜಿನಿ ಬಿನ್ ಚಲುವರಾಜು, 23 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು
ಬಣ್ಣ,
ಸಾಧಾರಾಣ ಮೈಕಟ್ಟು, ಮನೆಯಿಂದ ಹೋಗುವಾಗ ಹಸಿರು ಬಣ್ಣದ ಚೂಡಿದಾರ
ಧರಿಸಿರುತ್ತಾರೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08172-258038 ಕ್ಕೆ ಸಂಪರ್ಕಿಸುವುದು.
ಹೆಂಗಸು ಕಾಣೆ : ದಿನಾಂಕ: 17-04-2018 ರಂದು ಸಂಜೆ 4-30 ಗಂಟೆ
ಸಮಯದಲ್ಲಿ ಹೊಳೆನರಸೀಪುರ ತಾಲ್ಲೂಕು, ಹಳೇಬೀಡು ಹೋಬಳಿ, ಹಳೇಕೋಟೆ
ಗ್ರಾಮದ ವಾಸಿ ಸ್ರೀಮತಿ ಸುಶೀಲಮ್ಮ, ರವರು ಮಾವಿನಕೆರೆ ನವೋದಯ
ಶಾಲೆಯ ಮಕ್ಕಳ ಸಮವಸ್ತ್ರ ಇಸ್ತ್ರೀ ಕೆಲಸ ಮಾಡಿಕೊಂಡು ನವೋದಯ ಶಾಲೆಗೆ ಇಎಂಡಿ ಹಣದ ಚೆಕ್
ತೆಗೆದುಕೊಂಡು ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ
ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ , ಪತ್ತೆಮಾಡಿಕೊಡಬೇಕೆಂದು
ಶ್ರೀಮತಿ ಸುಶೀಲಮ್ಮ, ರವರ ಮಗ ಶ್ರೀ ಸತೀಶ್, ರವರು ಕೊಟ್ಟ
ದೂರಿನ ಮೇರೆಗೆ ಹೊಳೆನರಸೀಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಗಂಡಸಿನ
ಚಹರೆ: ಶ್ರೀಮತಿ ಸುಶೀಲಮ್ಮ, 58 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು
ಬಣ್ಣ,
ಸಾಧಾರಾಣ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ
ಹೋಗುವಾಗ ಹಸಿರು ಬಣ್ಣದ ಸೀರೆ ಮತ್ತು ರವಿಕೆ
ಧರಿಸಿರುತ್ತಾರೆ. ಈ ವ್ಯಕ್ತಿಯ ಸುಳಿವು ಸಿಕ್ಕಲ್ಲಿ 08175-273333 ಕ್ಕೆ ಸಂಪರ್ಕಿಸುವುದು.
ಹೆಂಗಸು ಕಾಣೆ : ದಿನಾಂಕ: 16-04-2018 ರಂದು
ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ಹಾಸನದ ಪೆನ್ಷನ್ ಮೊಹಲ್ಲಾ ವಾಸಿ
ಶ್ರೀ ಸೈಯಾದ್ ನವಾಜ್, ರವರ ಮಗಳು ಶ್ರೀಮತಿ ತಸ್ಮಿಯಾತಾಜ್ಳನ್ನು ಈಗ್ಗೆ ಒಂದು
ವಾರದ ಹಿಂದೆ ಆಲೂರು ಟೌನ್ನ ಆಶಾ ಬಡಾವಣೆ ವಾಸಿ ಸಾಹೇಬ್ ಜಾನ್, ರವರ ಮಗ ಶ್ರೀ
ಮಜಾಹಿದ್ ಪಾಷ, ರವರಿಗೆ ಮದುವೆ ಮಾಡಿಕೊಟ್ಟಿದ್ದು, ಕಾಲೇಜಿಗೆ ಹೋಗಿ
ಹಾಲ್ಟಿಕೇಟ್ ತರುತ್ತೇನೆಂದು ಮನೆಯಲ್ಲಿ ಹೇಳಿ ಹೋದವಳು ಇದುವರವಿಗೂ ವಾಪಸ್ ಮನೆಗೆ ಬಾರದೆ
ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು
ಶ್ರೀಮತಿ ತಸ್ಮಿಯಾ ತಾಜ್ಳ ತಂದೆ ಶ್ರೀ ಸೈಯಾದ್ ನವಾಜ್, ರವರು ಕೊಟ್ಟ
ದೂರಿನ ಮೇರೆಗೆ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ
ಹುಡುಗಿಯ ಚಹರೆ: ಶ್ರೀಮತಿ ತಸ್ಮಿಯಾ ತಾಜ್ ಕೋಂ ಮಜಾಹಿದ್, 21 ವರ್ಷ, 5' ಅಡಿ ಎತ್ತರ, ಎಣ್ಣೆಗೆಂಪು
ಬಣ್ಣ,
ಸಾಧಾರಣ ಮೈಕಟ್ಟು, ಕನ್ನಡ & ಹಿಂದಿ ಭಾಷೆ
ಮಾತನಾಡುತ್ತಾರೆ. ಈ ಹೆಂಗಸಿನ ಸುಳಿವು ಸಿಕ್ಕಲ್ಲಿ 08172-272260 ಕ್ಕೆ ಸಂಪರ್ಕಿಸುವುದು.
ಗಂಡಸು ಕಾಣೆ : ದಿನಾಂಕ:10-04-2018 ರಂದು
ಮಧ್ಯಾಹ್ನ 2-00 ಗಂಟೆ ಸಮಯದಲ್ಲಿ ಹಾಸನದ ಅಶೋಕ ಬಡಾವಣೆ ವಾಸಿ ಶ್ರೀ
ಜಗದೀಶ್,
ಹಾಸನದ ಮಧು ಕಾಫಿಕ್ಯೂರಿಂಗ್ನಲ್ಲಿ ಕೆಲಸ ಮಾಡಿಕೊಂಡಿದ್ದು, ಎಂದಿನಂತೆ
ಕೆಲಸಕ್ಕೆ ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ
ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿವುದಿಲ್ಲ, ಪತ್ತೆಮಾಡಿಕೊಡಬೇಕೆಂದು
ಶ್ರೀ ಜಗದೀಶ್ನ ತಂದೆ ಶ್ರೀಮತಿ ರತ್ನ, ರವರು ದಿನಾಂಕ; 20-04-2018 ರಂದು ಕೊಟ್ಟ
ದೂರಿನ ಮೇರೆಗೆ ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಗಂಡಸಿನ ಚಹರೆ:
ಶ್ರೀ ಜಗದೀಶ್ ಬಿನ್ ತಮ್ಮಯ್ಯ, 42 ವರ್ಷ, 5'5' ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಾಣ
ಮೈಕಟ್ಟು,
ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಬಿಳಿ ಶರ್ಟ್ ಮತ್ತು ಕಪ್ಪು ಪ್ಯಾಂಟ್
ಧರಿಸಿರುತ್ತಾರೆ. ಈ ವ್ಯಕ್ತಿಯ ಸುಳಿವು ಸಿಕ್ಕಲ್ಲಿ 08172-268967 ಕ್ಕೆ ಸಂಪರ್ಕಿಸುವುದು.
No comments:
Post a Comment