ಪತ್ರಿಕಾ ಪ್ರಕಟಣೆ ದಿನಾಂಕ: 10-04-2018
ಬೈಕ್ಗಳ ಮುಖಾ-ಮುಖಿ ಡಿಕ್ಕಿ, ಬೈಕ್ ಸಾವರ ಸಾವು
: ದಿನಾಂಕ:
09-04-2018 ರಂದು ರಾತ್ರಿ 9-00 ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕು, ದೊಡ್ಡಮಗ್ಗೆ ಹೋಬಳಿ, ವಡ್ಡರಹಳ್ಳಿ ಗ್ರಾಮದ ವಾಸಿ ಶ್ರೀ
ರವಿನಂದಕುಮಾರ್, ರವರು ರಾಮನಾಥಪುರಕ್ಕೆ ಹೋಗಲು ಸ್ನೇಹಿತರಾದ
ಶ್ರೀ ರವಿಕುಮಾರ್, ಬಾಬ್ತು ಕೆಎ-21, ಜೆ-5813ರ ಎಕ್ಸ್ಸಿಡಿ ಬೈಕ್ನಲ್ಲಿ ಅರಕಲಗೂಡು
ತಾಲ್ಲೂಕು, ರಾಮನಾಥಪುರದ ಹೆಚ್.ಪಿ. ತೊಂಟದಾರ್ಯ
ಪೆಟ್ರೋಲ್ ಬಂಕ್ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಬೈಕ್ ಚಾಲಕ ತನ್ನ ವಾಹನವನ್ನು
ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ಬೈಕ್ ಹಿಂಬದಿ
ಕುಳಿತಿದ್ದ ಶ್ರೀ ರವಿನಂದಕುಮಾರ್, ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹಾಸನ ಸಕರ್ಾರಿ ಆಸ್ಪತ್ರೆಗೆ
ದಾಖಲಿಸಿದ್ದು, ವೈದ್ಯರ ಸಲಹೆ ಮೇರೆಗೆ ಹೆಚ್ಚಿನ
ಚಿಕಿತ್ಸೆಗಾಗಿ ಜನಪ್ರಿಯ ಆಸ್ಪತ್ರೆಗೆ ದಾಖಲಿಸಿದ್ದು, ಶ್ರೀ ರವಿನಂದಕುಮಾರ್ ಬಿನ್ ರಂಗಯ್ಯ, 35ವರ್ಷ, ವಡ್ಡರಹಳ್ಳಿ ಗ್ರಾಮ, ದೊಡ್ಡಮಗ್ಗೆ ಹೋಬಳಿ, ಅರಕಲಗೂಡು ತಾಲ್ಲೂಕು ರವರು
ಮೃತಪಟ್ಟಿರುತ್ತಾರೆಂದು ಮೃತರ ತಮ್ಮ ಶ್ರೀ ಕಾಳಿಪ್ರಸಾದ್, ರವರು ಕೊಟ್ಟ ದೂರಿನ ಮೇರೆಗೆ ಕೊಣನೂರು
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
No comments:
Post a Comment