* * * * * * HASSAN DISTRICT POLICE

Thursday, March 1, 2018

PRESS NOTE : 28-02-2018


ಪತ್ರಿಕಾ ಪ್ರಕಟಣೆ                                     ದಿನಾಂಕ: 28-02-2018.

ಕೆಎಸ್ಆರ್ಟಿಸಿ ಬಸ್ ಬೈಕಿಗೆ ಡಿಕ್ಕಿ ಬೈಕ್ ಸವಾರ ಸಾವು

         ದಿನಾಂಕ: 27-02-2018 ರಂದು ಬೆಳಿಗ್ಗೆ 06-00 ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕು, ಮಲ್ಲಿಪಟ್ಟಣ ಹೋಬಳಿ, ಅಬ್ಬೂರು ಮಾಚಗೌಡನಹಳ್ಳಿ  ಗ್ರಾಮದ  ಮುಹಿದ್ ಪಾಷಾ ರವರ ಬಾಬ್ತು ಕೆಎ-12-ಹೆಚ್-9338 ರ ಹಿರೋಹೊಂಡಾ ಪ್ಯಾಷನ್ ಬೈಕಿನಲ್ಲಿ ಮೆಣಸು ವ್ಯಾಪಾರಕ್ಕೆಂದು  ಸಕಲೇಶಪುರ ತಾಲ್ಲೂಕು, ಹಾಲೆ ಬೇಲೂರು ಗ್ರಾಮದ ರಸ್ತೆಯಲ್ಲಿ ಹೋಗುತ್ತಿದ್ದಾಗ  ಹಾಲೆಬೇಲೂರು ಕಡೆಯಿಂದ ಬಂದ ಕೆಎ-18-ಎಫ್-549 ರ ಕೆಎಸ್ಆರ್ಟಿಸಿ ಬಸ್ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಮುಹಿದ್ ಪಾಷಾ ಬಿನ್ ಅಬ್ದುಲ್ ಖುದ್ದೂಸ್, 25 ವರ್ಷ ರವರು ಮೃತಪಟ್ಟಿರುತ್ತಾರೆಂದು ಮೃತರ ಸಂಬಂಧಿ ಶ್ರೀ ಅಬ್ದುಲ್ ಕಯ್ಯೂಮ್ ಪಾಷಾ ರವರು ಕೊಟ್ಟ ದೂರಿನ ಮೇರೆಗೆ ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

ಕಾರು ಬೈಕಿಗೆ ಡಿಕ್ಕಿ ಬೈಕ್ ಸವಾರ ಸಾವು
    ದಿನಾಂಕ: 27-02-2018 ರಂದು ಮಧ್ಯಾಹ್ನ 03-00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಕಟ್ಟಾಯ ಹೋಬಳಿ ಗೊರೂರು, ಅರಳಿಕಟ್ಟೆ ಗ್ರಾಮದ ಪರಮೇಶ ರವರ ಬಾಬ್ತು ಕೆಎ-13-ಇಹೆಚ್-3028 ರ ಟಿವಿಎಸ್ ಎಕ್ಸ್ಎಲ್ ಸೂಪರ್ ಹೆವಿ ಡ್ಯೂಟಿ ಮೋಟಾರ್ ಬೈಕಿನಲ್ಲಿ ಗೊರೂರಿನಲ್ಲಿ ಹಾಸನ ರಸ್ತೆ, ಎಎನ್ವಿ ಪ್ರಥಮ ದಜರ್ೆ ಕಾಲೇಜು ಮುಂಭಾಗ ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದಾಗ ಹಾಸನ ಕಡೆಯಿಂದ ಬಂದ ಕೆಎ-02-ಎಂಎ-1338 ಇನೋವಾ ಕಾರಿನ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಚಿಕಿತ್ಸೆಗಾಗಿ ಹಾಸನ ಸಕರ್ಾರಿ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಪರಮೇಶ ಬಿನ್ ಲೇಟ್ ಮರಿಗೌಡ,  44 ವರ್ಷ ರವರು ಮೃತಪಟ್ಟಿರುತ್ತಾರೆಂದು  ಮೃತರ ಸಂಬಂಧಿ ಶ್ರೀ ಮಲ್ಲೇಶ ರವರು ಕೊಟ್ಟ ದೂರಿನ ಮೇರೆಗೆ  ಗೊರೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

ಕಾರು ಬೈಕಿಗೆ ಡಿಕ್ಕಿ ಬೈಕ್ ಸವಾರ ಸಾವು
    ದಿನಾಂಕ: 27-02-2018 ರಂದು ಮಧ್ಯಾಹ್ನ 03-00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಕಟ್ಟಾಯ ಹೋಬಳಿ ಗೊರೂರು, ಅರಳಿಕಟ್ಟೆ ಗ್ರಾಮದ ಪರಮೇಶ ರವರ ಬಾಬ್ತು ಕೆಎ-13-ಇಹೆಚ್-3028 ರ ಟಿವಿಎಸ್ ಎಕ್ಸ್ಎಲ್ ಸೂಪರ್ ಹೆವಿ ಡ್ಯೂಟಿ ಮೋಟಾರ್ ಬೈಕಿನಲ್ಲಿ ಗೊರೂರಿನಲ್ಲಿ ಹಾಸನ ರಸ್ತೆ, ಎಎನ್ವಿ ಪ್ರಥಮ ದಜರ್ೆ ಕಾಲೇಜು ಮುಂಭಾಗ ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದಾಗ ಹಾಸನ ಕಡೆಯಿಂದ ಬಂದ ಕೆಎ-02-ಎಂಎ-1338 ಇನೋವಾ ಕಾರಿನ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಚಿಕಿತ್ಸೆಗಾಗಿ ಹಾಸನ ಸಕರ್ಾರಿ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಪರಮೇಶ ಬಿನ್ ಲೇಟ್ ಮರಿಗೌಡ,  44 ವರ್ಷ ರವರು ಮೃತಪಟ್ಟಿರುತ್ತಾರೆಂದು  ಮೃತರ ಸಂಬಂಧಿ ಶ್ರೀ ಮಲ್ಲೇಶ ರವರು ಕೊಟ್ಟ ದೂರಿನ ಮೇರೆಗೆ  ಗೊರೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

ಕಾರು ಬೈಕಿಗೆ ಡಿಕ್ಕಿ ಬೈಕ್ ಸವಾರ ಸಾವು
        ದಿನಾಂಕ: 27-02-2018 ರಂದು ಸಂಜೆ 05-00 ಗಂಟೆ ಸಮಯದಲ್ಲಿ ಹೊಳೆನರಸೀಪುರ ತಾಲ್ಲೂಕು, ಹಳೆಕೋಟೆ ಹೋಬಳಿ, ಸಿಗರನಹಳ್ಳಿ ಗ್ರಾಮದ ನಾಗರಾಜು  ಎಸ್.ಎನ್. ರವರು ಕೆಎ-01-ಹೆಚ್ಎ-3755  ರ ಯಮಹಾ ಬೈಕ್ನಲ್ಲಿ  ಹೊಳೆನರಸೀಪುರ ತಾಲ್ಲೂಕು, ಬಾಗಿವಾಳು ಕ್ರಾಸ್ ಸಮೀಪ ರಸ್ತೆ ಎಡಭಾಗದಲ್ಲಿ ಹೋಗುತ್ತಿದ್ದಾಗ  ಮುಂಭಾಗದಿಂದ ಬಂದ ಕೆಎ-13-ಬಿ-7752 ರ ಮಾರುತಿ ಸ್ವಿಫ್ಟ್ ಡಿಸೈರ್ ಕಾರಿನ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಚಿಕಿತ್ಸೆಗಾಗಿ ಹೊಳೆನರಸೀಪುರ ಸಕರ್ಾರಿ ಆಸ್ಪತ್ರೆಗೆ ಸೇರಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಎನ್ಡಿಆರ್ಕೆ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮದ್ಯೆ  ನಾಗರಾಜು ಎಸ್.ಎನ್. ಬಿನ್ ನಂಜುಂಡ, 21 ವರ್ಷ ರವರು ಮೃತರಪಟ್ಟಿರುತ್ತಾರೆಂದು ಮೃತರ ತಂದೆ ಶ್ರೀ ನಂಜುಂಡ ರವರು ಕೊಟ್ಟ ದೂರಿನ ಮೇರೆಗೆ  ಹೊಳೆನರಸೀಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

ಹೆಂಗಸು ಕಾಣೆ
          ದಿನಾಂಕ: 26-02-2018 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಕಟ್ಟಾಯ ಹೋಬಳಿ, ಜೋಡಿಮಲ್ಲಪ್ಪನಹಳ್ಳಿ ಗ್ರಾಮದ ಪರಮೇಶ ರವರ ಹೆಂಡತಿ ಶ್ರೀಮತಿ ಶೃತಿ ಕಾಲರ್ೆ ಆಸ್ಪತ್ರೆಗೆ ಹೋಗಿ ಬರುವುದಾಗಿ ಮನೆಯಿಂದ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಶೃತಿ ರವರ ಪತಿ ಶ್ರೀ ಪರಮೇಶ ರವರು ಕೊಟ್ಟ ದೂರಿನ ಮೇರೆಗೆ ಗೊರೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಶೃತಿ ಕೋಂ ಪರಮೇಶ, 22 ವರ್ಷ, 5'2'' ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾಳೆ. ಕಾಣೆಯಾದ  ಹೆಂಗಸಿನ ಬಗ್ಗೆ ಸುಳಿವು ಸಿಕ್ಕಲ್ಲಿ  ಗೊರೂರು ಠಾಣೆ ಫೋನ್ ನಂ.08172-225475  ಕ್ಕೆ ಸಂಪಕರ್ಿಸುವುದು.

No comments: