ಪತ್ರಿಕಾ ಪ್ರಕಟಣೆ ದಿನಾಂಕ:27-02-2018
ಅಪರಿಚಿತ ವಾಹನ ಬೈಕ್ಗೆ ಡಿಕ್ಕಿ, ಬೈಕ್ ಸಾವರ ಸಾವು.
ದಿನಾಂಕ: 26-02-2018 ರಂದು
ರಾತ್ರಿ 8-15 ಗಂಟೆ
ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಕಣಕಟ್ಟೆ ಹೋಬಳಿ, ಡಿಬ್ಬೂರು
ಗ್ರಾಮದ ವಾಸಿ ದಿಬ್ಬೂರು ಗ್ರಾಮದ ವಾಸಿ ಶ್ರೀ ಸುರೇಶ್, ರವರ ಬಾಬ್ತು
ಕೆಎ-13 ಇಇ-9117 ರ ಹೊಂಡಾ
ಡ್ರೀಮ್ ಯುಗ ಬೈಕ್ನಲ್ಲಿ ಅರಸೀಕೆರೆ ತಾಲ್ಲೂಕು, ಅರಸೀಕೆರೆ
ಹುಳಿಯಾರ್ ರಸ್ತೆ, ಹೊಳಲ್ಕೆರೆ ಗ್ರಾಮದ ಗೇಟ್ ಹತ್ತಿರ ಹೋಗುತ್ತಿದ್ದಾಗ ಯಾವುದೋ ಲಾರಿಯ ಚಾಲಕ ತನ್ನ
ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ
ಸುರೇಶ್ ಬಿನ್ ಲೇಟ್ ಚನ್ನೇಗೌಡ, 45 ವರ್ಷ, ದಿಬ್ಬೂರು
ಗ್ರಾಮ,
ಕಣಕಟ್ಟೆ
ಹೋಬಳಿ,
ಅರಸೀಕೆರೆ
ತಾಲ್ಲೂಕು,
ರವರಿಗೆ
ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಮೃತರ ತಮ್ಮ ಶ್ರೀ
ಷಣ್ಮುಖಪ್ಪ, ರವರು ಕೊಟ್ಟ ದೂರಿನ ಮೇರೆಗೆ ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣದ
ದಾಖಲಿಸಿ ತನಿಖೆಯಲ್ಲಿರುತ್ತೆ.
ಬೈಕ್ನ ನಿಯಂತ್ರಣ ತಪ್ಪಿ ಬೈಕ್ ಚಾಲಕ ಸಾವು. ದಿನಾಂಕ: 25-02-2018 ರಂದು
ರಾತ್ರಿ 11-30 ಗಂಟೆ
ಸಮಯದಲ್ಲಿ ತುಮಕೂರು ಜಿಲ್ಲೆ, ತುರುವೆಕೆರೆ ಗ್ರಾಮದ ವಾಸಿ ಶ್ರೀ ಅಭಿಷೇಕ್, ರವರು
ಸಂಬಂಧಿಕರಾದ ಶ್ರೀ ನರಸಿಂಸ್ವಾಮಿ ರವರ ಬಾಬ್ತು ಕೆಎ-50, ಜೆ-1745 ರ ಪಲ್ಸರ್
ಬೈಕ್ನಲ್ಲಿ ಶ್ರವಣಬೆಳಗೊಳದ ಮಹಾಮಸ್ತಾಭಿಷೇಕವನ್ನು ನೋಡಿಕೊಂಡು ವಾಪಸ್ ಗ್ರಾಮಕ್ಕೆ ತೆರಳಲು
ಚನ್ನರಾಯಪಟ್ಟಣ ತಾಲ್ಲೂಕು, ಶ್ರವಣಬೆಳಗೊಳ-ಹಿರಿಸಾವೆ ಮುಖ್ಯ ರಸ್ತೆ, ಚಲ್ಯ
ಗ್ರಾಮದ ಹತ್ತಿರ ಹೋಗುತ್ತಿದ್ದಾಗ ಶ್ರೀ ಅಭಿಷೇಕ್ ಬೈಕ್ನ್ನು ನಿರ್ಲಕ್ಷ್ಯತೆಯಿಂದ
ಓಡಿಸಿದ್ದರ ಪರಿಣಾಮ ಬೈಕ್ ಸಮೇತ ಚರಂಡಿ ಬಿದಿದ್ದು, ಅಭಿಷೇಕ್, ರವರಿಗೆ
ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಶ್ರವಣಬೆಳಗೊಳ ಸಕರ್ಾರಿ ಆಸ್ಪತ್ರೆಗೆ
ಕರೆದುಕೊಂಡು ಹೋಗುತ್ತಿದ್ದಾಗ ಶ್ರೀ ಅಭಿಷೇಕ್ ಬಿನ್
ಲೋಕೇಶ್, 20 ವರ್ಷ, ತುರುವೆಕೆರೆ
ಟೌನ್,
ತುಮಕೂರು
ಜಿಲ್ಲೆ ರವರು ಮಾರ್ಗಮಧ್ಯೆ ಮೃತಪಟ್ಟಿರುತ್ತಾರೆಂದು ಮೃತರ ಸಂಬಂಧಿಕರಾದ ಶ್ರೀ ನರಸಿಂಹಸ್ವಾಮಿ, ರವರು ಕೊಟ್ಟ
ದೂರಿನ ಮೇರೆಗೆ ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
No comments:
Post a Comment