* * * * * * HASSAN DISTRICT POLICE

Thursday, March 1, 2018

PRESS NOTE : 25-02-2018


ಪತ್ರಿಕಾ ಪ್ರಕಟಣೆ             ದಿನಾಂಕ: 25-02-2018
ಬೈಕ್ ಆಂಬ್ಯುಲೆನ್ಸ್ ಡಿಕ್ಕಿ, ಇಬ್ಬರ ಸಾವು:

          ದಿನಾಂಕ: 24-02-2018 ರಂದು ಮಧ್ಯಾಹ್ನ 3-45 ಗಂಟೆ ಸಮಯದಲ್ಲಿ ಆಲೂರು ತಾಲ್ಲೂಕು, ಕಸಬಾ ಹೋಬಳಿ, ಮರಸು ಗ್ರಾಮದ ವಾಸಿ ಶ್ರೀ ಯತೀಶ್, ರವರ ಬಾಬ್ತು ಕೆಎ-13 ಇಎಂ-5116 ರ ಬೈಕ್ನಲ್ಲಿ ಸ್ನೇಹಿತರಾದ ಶ್ರೀ ನಿಖಿಲ್, ರವರೊಂದಿಗೆ ಆಲೂರು ತಾಲ್ಲೂಕು,  ಕಸಬಾ ಹೋಬಳಿ, ಭರತವಳ್ಳಿ  ಕ್ರಾಸ್ ಹತ್ತಿರ ಎನ್ಹೆಚ್-75 ಬಿ.ಎಂ. ರಸ್ತೆಯಲ್ಲಿ ಬೈಕ್ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಎದುರುಗಡೆಯಿಂದ ಬಂದ ಕೆಎ-07 ಜಿ-432 ರ ಅಂಬುಲೆನ್ಸ್, ವಾಹನಕ್ಕೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ಯತೀಶ್ ಮತ್ತು ಶ್ರೀ ನಿಖಿಲ್ ರವರುಗಳು ಬೈ ಸಮೇತ ರಸ್ತೆ ಬಿದ್ದು ತೀವ್ರ ಸ್ವರೂಪ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹಾಸನ ಸಕರ್ಾರಿ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ   ಶ್ರೀ ಯತೀಶ್ ಬಿನ್ ಪುಟ್ಟಸ್ವಾಮಿ, 20 ವರ್ಷ, ಮರಸು ಗ್ರಾಮ, ಕಸಬಾ ಹೋಬಳಿ, ಆಲೂರು ತಾಲ್ಲೂಕು,  ಶ್ರೀ ನಳನಿ ಬಿನ್ ಚಂದ್ರೇಗೌಡ, 20 ವರ್ಷ, ಪಡುವಳಲು ಗ್ರಾಮ, ಬಿಕ್ಕೋಡು ಹೋಬಳಿ,  ಬೇಲೂರು ತಾಲ್ಲೂಕು ರವರುಗಳು ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಮೃತ ಶ್ರೀ ಯತೀಶ್, ಸಂಬಂಧಿಕರಾದ ಶ್ರೀ ವಿರೂಪಾಕ್ಷ, ರವರು ಕೊಟ್ಟ ದೂರಿನ ಮೇರೆಗೆ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

No comments: