* * * * * * HASSAN DISTRICT POLICE

Tuesday, March 13, 2018

PRESS NOTE : 10-03-2018


ಪತ್ರಿಕಾ ಪ್ರಕಟಣೆ      ದಿನಾಂಕ: 10-03-2018

ಲಾರಿ ಬೈಕಿಗೆ ಡಿಕ್ಕಿ ಬೈಕಿನಲ್ಲಿದ್ದ ಇಬ್ಬರ ಸಾವು, ಒಬ್ಬರಿಗೆ ಗಾಯ

        ದಿನಾಂಕ: 09-03-2018 ರಂದು ರಾತ್ರಿ 10-00 ಗಂಟೆ ಸಮಯದಲ್ಲಿ  ಬೇಲೂರು ತಾಲ್ಲೂಕು, ಮಾದಿಹಳ್ಳಿ ಹೋಬಳಿ, ಅಂಗಡಿಹಳ್ಳಿ ಗ್ರಾಮದ ಶಾರುಖಾನ್ ರವರು ತಮ್ಮ ಬಾಬ್ತು ಕೆಎ-04-ಜೆಎ-4501 ರ ಬಜಾಜ್  ಪ್ಲಾಟಿನಾ ಬೈಕಿನಲ್ಲಿ  ಸಂಬಂಧಿಕರಾದ  ಸೂರಿ ಮತ್ತು ದೊರೇಶ್ ರವರನ್ನು ಕೂರಿಸಿಕೊಂಡು ಶನೇಶ್ವರ ಸ್ವಾಮಿ ಜಾತ್ರಾ ಕಾರ್ಯಕ್ರಮಕ್ಕೆ ಸಾಮಾನು ತರಲು ಅಂಗಡಿಹಳ್ಳಿ ಗ್ರಾಮದಿಂದ ಹಗರೆ ಗ್ರಾಮಕ್ಕೆ ಹೋಗಿ ಗ್ರಾಮದ ಪೆಟ್ರೋಲ್ ಬಂಕ್ ಮುಂದೆ ಹಾಸನ-ಬೇಲೂರು ರಸ್ತೆಯಲ್ಲಿ ಹೋಗುತ್ತಿದ್ದಾಗ ಕೆಎ-41-0444 ರ ಲಾರಿಯ  ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ  ತೀವ್ರ ಸ್ವರೂಪದ ರಕ್ತಗಾಯಗಳಾಗಿ 1) ಶಾರುಖಾನ್ ಬಿನ್ ನಿಂಗರಾಜು, 20 ವರ್ಷ 2)  ಸೂರಿ ಬಿನ್ ದಿರಾನ್, 20 ವರ್ಷ, ಅಂಗಡಿಹಳ್ಳಿ ಗ್ರಾಮ ರವರು ಸ್ಥಳದಲ್ಲಿಯೇ ಮೃತಪಟ್ಟಿದ್ದು,  ದೊರೇಶ್ ರವರಿಗೆ ಮೈಕೈಕಾಲುಗಳಿಗೆ ರಕ್ತಗಾಯಗಳಾಗಿ ಹಾಸನದ ಆಸ್ಪತ್ರೆಗೆ ಸೇರಿಸಲಾಗಿರುತ್ತದೆಂದು ಮೃತ ಶಾರುಖಾನ್ ರವರ ತಂದೆ ಶ್ರೀ ನಿಂಗರಾಜು ರವರು ಕೊಟ್ಟ ದೂರಿನ ಮೇರೆಗೆ ಹಳೇಬೀಡು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

ಟ್ರ್ಯಾಕ್ಟರ್ ಡಿಕ್ಕಿ ವ್ಯಕ್ತಿ ಸಾವು

        ದಿನಾಂಕ: 09-03-2018 ರಂದು ಮಧ್ಯಾಹ್ನ 02-45 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ದುದ್ದ ಹೋಬಳಿ, ಸೋಮನಹಳ್ಳಿ ಗ್ರಾಮದ ಗೋಪಾಲ ರವರು ಜಮೀನಿನ ಹತ್ತಿರ ಜೆಸಿಬಿ ಕೆಲಸ ಮಾಡುತ್ತಿದ್ದುದನ್ನು ನೋಡುತ್ತಾ ನಿಂತಿದ್ದಾಗ ಕಬ್ಬಳಿ ಹೊಸಹಳ್ಳಿ ಕಡೆಯಿಂದ ಬಂದ ಕೆಎ-13-ಟಿಬಿ-1256-1257 ರ ಟ್ರ್ಯಾಕ್ಟರ್-ಟ್ರೈಲರ್ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ಕೆಳಕ್ಕೆ ಬಿದ್ದಾಗ, ಟ್ರ್ಯಾಕ್ಟರ್ ಚಕ್ರ ಹರಿದು ತೀವ್ರ ಸ್ವರೂಪದ ರಕ್ತಗಾಯಗಳಾಗಿ ಚಿಕಿತ್ಸೆಗಾಗಿ ಎಸ್ಎಸ್ಎಂ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಗೋಪಾಲ್ ಬಿನ್ ಸಿದ್ದೇಗೌಡ, 42 ವರ್ಷ ರವರು ಮೃತಪಟ್ಟಿರುತ್ತಾರೆಂದು ಮೃತರ ತಮ್ಮ ಶ್ರೀ ಸ್ವಾಮಿ ಎಸ್.ಎಸ್. ರವರು ಕೊಟ್ಟ ದೂರಿನ  ಮೇರೆಗೆ  ದುದ್ದ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

ಅಪರಿಚಿತ ವಾಹನ ಡಿಕ್ಕಿ ವ್ಯಕ್ತಿ ಸಾವು

ದಿನಾಂಕ: 07-03-2018 ರಂದು ಬೆಳಗಿನ ಜಾವ  06-00 ಗಂಟೆ ಸಮಯದಲ್ಲಿ  ಅರಸೀಕೆರೆ ತಾಲ್ಲೂಕು, ಕಣಕಟ್ಟೆ ಹೋಬಳಿ, ಡಿ.ಎಂ.ಕುಕರ್ೆ ಗ್ರಾಮದ  ಜಯಣ್ಣ ರವರು  ಮನೆಯಿಂದ ವಾಕಿಂಗ್ ಹೋಗಿದ್ದಾಗ ಅರಸೀಕೆರೆ-ಹುಳಿಯಾರು ರಸ್ತೆ ಪಕ್ಕ ಹೊಳಲ್ಕೆರೆ ಗೇಟ್ ಹತ್ತಿರ ಯಾವುದೋ ವಾಹನ ಚಾಲಕ ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ  ಮಾಡಿದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿ  ಚಿಕಿತ್ಸೆಗಾಗಿ ಜೆ.ಸಿ,.ಪುರ ಸಕರ್ಾರಿ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಿ, ನಂತರ ಅರಸೀಕೆರೆ ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ,  ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಿದ್ದಾಗ ಚಿಕಿತ್ಸೆ ಫಲಕಾರಿಯಾಗದೆ ಜಯಣ್ಣ, 70 ವರ್ಷ ರವರು ಮೃತಪಟ್ಟಿರುತ್ತಾರೆಂದು ಮೃತರ ಮಗ ಶ್ರೀ ಉಮೇಶ ರವರು ಕೊಟ್ಟ ದೂರಿನ ಮೇರೆಗೆ  ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ. 
ಹುಡುಗಿ ಕಾಣೆ
     ಹಾಸನ ತಾಲ್ಲೂಕು, ದುದ್ದ ಹೋಬಳಿ, ವಳಗೇರಹಳ್ಳಿ  ಗ್ರಾಮದ  ನಂಜೇಗೌಡ ವಿ.ಎನ್. ರವರ ಮಗಳು ಚಂದನ  ಚಿಕ್ಕಮಗಳೂರಿನಲ್ಲಿ ಓಬಿಸಿ ಹಾಸ್ಟೇಲ್ನಲ್ಲಿ ಇದ್ದುಕೊಂಡು ಎ.ಟಿ. ಕಾಲೇಜಿನಲ್ಲಿ  ಮೊದಲನೇ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದು, ದಿನಾಂಕ: 06-03-2018 ರಂದು ನಂಜೇಗೌಡ ರವರ ಅಣ್ಣನ ಮಗನ ಮದುವೆ  ಕಾರ್ಯಕ್ಕೆ ಬಂದು ಬೀಗರ ಔತಣ ಮುಗಿಸಿ ದಿನಾಂಕ: 07-03-2018 ರಂದು ಬೆಳಿಗ್ಗೆ 06-00 ಗಂಟೆಗೆ  ಚಿಕ್ಕಮಗಳೂರಿಗೆ ಹೋಗುವುದಾಗಿ ಮನೆಯಲ್ಲಿ ಹೇಳಿ ಹೋದವಳು ಕಾಲೇಜಿಗೆ ಹೋಗದೆ ಮನೆಗೂ ಬಾರದೆ ಕಾಣೆಯಾಗಿರುತ್ತಾಳೆ.  ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಚಂದನ ರವರ ತಂದೆ ಶ್ರೀ ನಂಜೇಗೌಡ ರವರು ಕೊಟ್ಟ ದೂರಿನ ಮೇರೆಗೆ  ದುದ್ದ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಚಂದನ ವಿ.ಎನ್. ಬಿನ್ ನಂಜೇಗೌಡ, 20 ವರ್ಷ, 5'4'' ಅಡಿ ಎತ್ತರ, ಕನ್ನಡ ಮತ್ತು ಇಂಗ್ಲೀಷ್ ಭಾಷೆ ಮಾತನಾಡುತ್ತಾಳೆ. ಕಾಣೆಯಾದ ಹುಡುಗಿಯ ಬಗ್ಗೆ ಸುಳಿವು ಸಿಕ್ಕಲ್ಲಿ ದುದ್ದ  ಠಾಣೆ ಫೋನ್ ನಂ.08172-223935ಕ್ಕೆ ಸಂಪರ್ಕಿಸುವುದು.

No comments: