* * * * * * HASSAN DISTRICT POLICE

Tuesday, March 13, 2018

PRESS NOTE : 09-03-2018


       ಪತ್ರಿಕಾ ಪ್ರಕಟಣೆ         ದಿನಾಂಕ: 09-03-2018
ಅಕ್ರಮವಾಗಿ ಮರಳು ತುಂಬುತ್ತಿದ್ದವರ ಬಂಧನ, ಮರಳು ಸಮೇತ 2 ಟ್ರ್ಯಾಕ್ಟರ್ಗಳ ವಶ
ದಿನಾಂಕ: 08-03-2018 ರಂದು  ರಾತ್ರಿ ಸುಮಾರು 02-00 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಬಿಕ್ಕೋಡು ಹೋಬಳಿ,  ಕೋಡಿಹಳ್ಳಿ ಗ್ರಾಮದ ಬಳಿಯ ವಾಟೇಹೊಳೆ ಡ್ಯಾಮ್ ಇನ್ನೀರಿನ  ಪ್ರದೇಶದಲ್ಲಿ ಅಕ್ರಮವಾಗಿ ಟ್ರ್ಯಾಕ್ಟರ್ಗಳಿಗೆ ಮರಳನ್ನು ತುಂಬುತ್ತಿದ್ದಾರೆಂದು ಪಿಎಸ್ಐ ಶ್ರೀ ಸುಬ್ಬಯ್ಯ, ಅರೆಹಳ್ಳಿ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಯಾವುದೇ ಪರವಾನಗಿ ಇಲ್ಲದೆ ಸರ್ಕಾರಕ್ಕೆ ರಾಜಧನವನ್ನು ಕಟ್ಟದೆ ಅಕ್ರಮವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಅಕ್ರಮವಾಗಿ ಮರಳು ತುಂಬುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಸತೀಶ ಬಿನ್ ನಾಗಯ್ಯ, 25 ವರ್ಷ 2) ಗಂಗರಾಜ ಬಿನ್ ತಮ್ಮಯ್ಯ, 28 ವರ್ಷ, ಇಬ್ಬರು ಇಂಟಿತೊಳಲು ಗ್ರಾಮ, ಬಿಕ್ಕೋಡು ಹೋಬಳಿ, ಬೇಲೂರು ತಾಲ್ಲೂಕು ಎಂದು ತಿಳಿಸಿದವರನ್ನು ದಸ್ತಗಿರಿ ಮಾಡಿಕೊಂಡು ಮರಳು ತುಂಬುತ್ತಿದ್ದ 1) ಕೆಎ-46-ಟಿ-5612-13 2) ಕೆಎ-46-ಟಿ-5514-15 ರ ಟ್ರ್ಯಾಕ್ಟರ್ಗಳನ್ನು ಅಮಾನತ್ತುಪಡಿಸಿಕೊಂಡು ಅರೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.
ಹುಡುಗ ಕಾಣೆ
     ದಿನಾಂಕ: 05-03-2018 ರಂದು ಮಧ್ಯಾಹ್ನ 12-00 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಬೆಂಡೆಕೆರೆ ಗ್ರಾಮದ ವಾಸಿ ಶ್ರೀ ಲಿಂಗರಾಜು, ರವರ ಮಗ ಶ್ರೀ ಬಿ.ಎಲ್. ಮಿಥನ್, ಮಂಗಳೂರಿನ ಮೂಡಬಿದರೆ ಕಲ್ಲಿಬೆಟ್ಟುವಿನ ಎಕ್ಸ್ಲೆಂಟ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾಭ್ಯಾಸ ಮಾಡಿಕೊಂಡಿದ್ದು, ಪರೀಕ್ಷೆ ಮುಗಿಸಿಕೊಂಡು ಮನೆಯಲಿದ್ದು, ಎಂದಿನಂತೆ ಕಾಲೇಜಿಗೆ ಹೋಗಲು ಶ್ರೀ ಲಿಂಗರಾಜು, ರವರು ಮಗ ಶ್ರೀ ಮಿಥುನ್ನ್ನು ಕರೆದುಕೊಂಡು ಅರಸೀಕೆರೆಗೆ ಬಂದು ಮೂಡಬಿದರೆಗೆ ಬಸ್ ಹತ್ತಿಸಿದ್ದು, ಶ್ರೀ ಮಿಥುನ್, ಹೋಗಿರುವ ಬಗ್ಗೆ  ಕಾಲೇಜಿನ ವಾಡರ್್ನಗೆ ಫೋನ್ ಮಾಡಿ ಕೇಳಲಾಗಿ ಶ್ರೀ ಮಿಥುನ್, ಬಂದಿಲ್ಲವೆಂದು ತಿಳಿಸಿದ್ದು, ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀ ಬಿ.ಎಲ್. ಮಿಥುನ್, ರವರ ತಂದೆ ಶ್ರೀ ಲಿಂಗರಾಜು, ರವರು ಕೊಟ್ಟ ದೂರಿನ ಮೇರೆಗೆ ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗನ ಚಹರೆ: ಶ್ರೀ ಮಿಥುನ್ ಬಿನ್ ಲಿಂಗರಾಜು, 5ಅಡಿ, ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಮನೆಯಿಂದ ಹೋಗುವಾಗ ಬಿಳಿ ಶಟರ್್ ಮತ್ತು ಕಪ್ಪು ಪ್ಯಾಂಟ್ ಧರಿಸಿರುತ್ತಾರೆ. ಈ ಹುಡುಗನ ಸುಳಿವು ಸಿಕ್ಕಲ್ಲಿ  08174-232233  ಕ್ಕೆ ಸಂಪರ್ಕಿಸುವುದು.

No comments: