ಪತ್ರಿಕಾ ಪ್ರಕಟಣೆ ದಿನಾಂಕ:01-03-2018
ಅಂಬ್ಯುಲೆನ್ಸ್ ಬೈಕ್ಗೆ ಡಿಕ್ಕಿ, ಬೈಕ್ ಸಾವರ ಸಾವು
ದಿನಾಂಕ: 28-02-2018 ರಂದು ಸಂಜೆ 5-00 ಗಂಟೆ
ಸಮಯದಲ್ಲಿ ಸಕಲೇಶಪುರ ತಾಲ್ಲೂಕು, ಹೆತ್ತೂರು ಹೋಬಳಿ, ಹಾಡ್ಲಹಳ್ಳಿ
ಗ್ರಾಮದ ವಾಸಿ ಶ್ರೀ ಹೆಚ್. ಹೆಚ್. ಅಭಿಷೇಕ್, ರವರ ಬಾಬ್ತು
ಕೆಎ-46 ಕೆ-2153 ರ
ಬೈಕ್ನಲ್ಲಿ ಆಲೂರು ತಾಲ್ಲೂಕು, ಪಾಳ್ಯ ಹೋಬಳಿ, ಹೊನ್ನವಳ್ಳಿ
ಹತ್ತಿರ ಎನ್ಹೆಚ್-75 ಬಿ.ಎಂ. ರಸ್ತೆಯಲ್ಲಿ ಹೋಗುತ್ತಿದ್ದಾಗ
ಎದುರುಗಡೆಯಿಂದ ಬಂದ ಕೆಎ-13 ಸಿ-2110 ರ
ಅಂಬ್ಯುಲೆನ್ಸ್ ವಾಹನದ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ಗೆ
ಡಿಕ್ಕಿ ಮಾಡಿದ ಪರಿಣಾಮ ಶ್ರೀ ಹೆಚ್.ಹೆಚ್. ಅಭಿಷೇಕ್ ಬಿನ್ ಹೂವಣ್ಣಗೌಡ, 26 ವರ್ಷ, ಹಾಡ್ಲಹಳ್ಳಿ
ಗ್ರಾಮ,
ಹೆತ್ತೂರು
ಹೋಬಳಿ,
ಸಕಲೇಶಪುರ
ತಾಲ್ಲೂಕು,
ರವರಿಗೆ
ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಮೃತರ ತಂದೆ ಶ್ರೀ
ಹೂವಣ್ಣಗೌಡ, ರವರು ಕೊಟ್ಟ ದೂರಿನ ಮೇರೆಗೆ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ
ತನಿಖೆಯಲ್ಲಿರುತ್ತೆ.
ಹುಡುಗಿ ಕಾಣೆ
ದಿನಾಂಕ: 19-02-2018 ರಂದು
ಮಧ್ಯಾಹ್ನ 1-00 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಜಾವಗಲ್
ಹೋಬಳಿ,
ಅರಕೆರೆ
ಗ್ರಾಮದ ವಾಸಿ ಶ್ರೀ ಬಾಲಯ್ಯ, ರವರ ಮಗಳು ಕು|| ಕವನ, ಮನೆಯಿಂದ
ಹೊರಗೆ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ
ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ಕವನಳ
ದೊಡ್ಡಪ್ಪ ಶ್ರೀ ಗುರುಸಿದ್ದಪ್ಪ, ರವರು ಕೊಟ್ಟ ದೂರಿನ ಮೇರೆ ಜಾವಗಲ್ ಪೊಲೀಸ್ ಠಾಣೆಯಲ್ಲಿ
ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ. ಕು|| ಕವನ ಬಿನ್
ಬಾಲಯ್ಯ,
5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣ
ಮೈಕಟ್ಟು,
ಮನೆಯಿಂದ
ಹೋಗುವಾಗ ಹಸಿರು ಬಣ್ಣದ ಚೂಡಿದಾರ ಧರಿಸಿರುತ್ತಾರೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08174-271221 ಕ್ಕೆ
ಸಂಪಕರ್ಿಸುವುದು.
No comments:
Post a Comment