ಪತ್ರಿಕಾ ಪ್ರಕಟಣೆ ದಿನಾಂಕ:23-02-2018
ಅಪರಿಚಿತ ವಾಹನ ಡಿಕ್ಕಿ, ಪಾದಚಾರಿ ಸಾವು
ದಿನಾಂಕ: 22-02-2018 ರಂದು ಬೆಳಿಗ್ಗೆ
11-00 ಗಂಟೆ ಸಮಯದಲ್ಲಿ
ಚನ್ನರಾಯಪಟ್ಟಣ ತಾಲ್ಲೂಕು,
ದಂಡಿಗನಹಳ್ಳಿ ಹೋಬಳಿ,
ಸಾಣ್ಣೇನಹಳ್ಳಿ ಗ್ರಾಮದ ವಾಸಿ ಶ್ರೀ ಕುಮಾರ್, ರವರ ಬಾಬ್ತು ಕೆಎ-14, ಆರ್-6862 ರ ಬೈಕ್ನಲ್ಲಿ ಮುದ್ದನಹಳ್ಳಿ ಗ್ರಾಮಕ್ಕೆ ಕಾಮಗಾರಿ ಕೆಲಸಕ್ಕೆ
ಹೋಗಲು ಚನ್ನರಾಯಪಟ್ಟಣ ತಾಲ್ಲೂಕು, ಎನ್ಹೆಚ್-75, ಮುದ್ದನಹಳ್ಳಿ
ಗೇಟ್ ಹತ್ತಿರ ಹೋಗುತ್ತಿದ್ದಾಗ ಯಾವುದೂ ವಾಹನದ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು
ಬಂದು ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ಕುಮಾರ್ ಬಿನ್ ಉಮೇಶ್ ಎಸ್.ಕೆ. ಸಾಣ್ಣೇನಹಳ್ಳಿ ಗ್ರಾಮ, ದಂಡಿಗನಹಳ್ಳಿ
ಹೋಬಳಿ, ಚನ್ನರಾಯಪಟ್ಟಣ
ತಾಲ್ಲೂಕು, ರವರಿಗೆ ತೀವ್ರ
ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಮೃತರ ಮಗ ಶ್ರೀ ಉಮೇಶ್, ರವರು ಕೊಟ್ಟ ದೂರಿನ
ಮೇರೆಗೆ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಹುಡುಗಿ ಕಾಣೆ
ದಿನಾಂಕ: 08-02-2018 ರಂದು ಬೆಳಿಗ್ಗೆ
9-30 ಗಂಟೆ ಸಮಯದಲ್ಲಿ
ಅರಸೀಕೆರೆ ನಗರದ 2ನೇ ಕ್ರಾಸ್, ಹಾಸನ ರಸ್ತೆ ಬಲ
ಭಾಗದ ವಾಸಿ ಶ್ರೀ ರವಿಶಂಕರ್,
ರವರ ಮಗಳು ಕು||
ಪೃಥ್ವಿ, ಅರಸೀಕೆರೆ ನಗರದಲ್ಲಿ
ಐಟಿಐ ವ್ಯಾಸಂಗ ಮಾಡಿಕೊಂಡಿದ್ದು, ಎಂದಿನಂತೆ ಕಾಲೇಜಿಗೆ ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಹೋದವಳು ಇದುವರೆವಿಗೂ ವಾಪಸ್ ಮನೆಗೆ
ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು
ಕು|| ಪೃಥ್ವಿಯ ತಾಯಿ
ಶ್ರೀಮತಿ ಜಪಮಾಲ ಮೇರಿ,
ರವರು ದಿನಾಂಕ: 22-02-2018 ರಂದು ಕೊಟ್ಟ
ದೂರಿನ ಮೇರೆಗೆ ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತೆ. ಕು|| ಪೃಥ್ವಿ ಬಿನ್
ರವಿಶಂಕರ್, 20 ವರ್ಷ, 5 ಅಡಿ ಎತ್ತರ, ಸಾಧಾರಣ ದುಂಡುಮುಖ, ಮೈಕಟ್ಟು, ಗೋಧಿ ಮೈಬಣ್ಣ, ಕನ್ನಡ, ತಮಿಳು, ಇಂಗ್ಲೀಷ್ ಭಾಷೆ
ಮಾತನಾಡುತ್ತಾರೆ. ಈ ಹುಡುಗಿ ಸುಳಿವು ಸಿಕ್ಕಲ್ಲಿ 08174-232233 ಕ್ಕೆ ಸಂಪಕರ್ಿಸುವುದು.
No comments:
Post a Comment