ಪತ್ರಿಕಾ ಪ್ರಕಟಣೆ ದಿನಾಂಕ:22-02-2018
ಅಪರಿಚಿತ ವಾಹನ ಡಿಕ್ಕಿ,
ಪಾದಚಾರಿ ಸಾವು:
ದಿನಾಂಕ: 21-02-2018 ರಂದು ಬೆಳಗಿನ
ಜಾವ 4-45 ಗಂಟೆ ಸಮಯದಲ್ಲಿ
ಹಾಸನದ 2ನೇ ಕ್ರಾಸ್, ಅಂಬೇಡ್ಕರ್ ನಗರದ
ವಾಸಿ ಶ್ರೀ ಸಾದಿಕ್,
ರವರು ಹಾಸನ ಟೌನ್ ಕಡೆಯಿಂದ ಡೈರಿ ವೃತ್ತದ ಕಡೆಗೆ ಹೋಗಲು ಹಾಸನದ ಕಿಂಕೋ ಫ್ಯಾಕ್ಟರಿ ಎದುರು ಬಿ.ಎಂ.
ರಸ್ತೆ ದಾಟುತ್ತಿದ್ದಾಗ ಯಾವುದೋ ವಾಹನದ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು
ಬಂದು ಡಿಕ್ಕಿ ಮಾಡಿದ ಪರಿಣಾಮ ಶ್ರೀ ಸಾದಿಕ್ ಬಿನ್ ಮುಸ್ತಾಕ್, 35 ವರ್ಷ, ಅಂಬೇಡ್ಕರ್ನಗರ, 2ನೇ ಕ್ರಾಸ್, ಹಾಸನ ರವರಿಗೆ
ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಮೃತರ ತಂದೆ ಶ್ರೀ ಮುಸ್ತಾಕ್, ರವರು ಕೊಟ್ಟ ದೂರಿನ
ಮೇರೆಗೆ ಹಾಸನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಹುಡುಗಿ ಕಾಣೆ
ದಿನಾಂಕ: 17-02-2018 ರಂದು ಬೆಳಿಗ್ಗೆ
8-30 ಗಂಟೆ ಸಮಯದಲ್ಲಿ
ಅರಸೀಕೆರೆ ತಾಲ್ಲೂಕು,
ಕಸಬಾ ಹೋಬಳಿ, ಬೆಳಗುಂಬ ಗ್ರಾಮದ
ವಾಸಿ ಶ್ರೀ ಚಂದ್ರಶೇಖರ್,
ರವರ ಮಗಳು ಕು||
ಬಿ.ಸಿ. ವಿನುತಾ,
ನೀರು ತುರುತ್ತೇನೆಂದು ಮನೆಯಲ್ಲಿ ಹೇಳಿ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ.
ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ವಿನುತಾಳ ತಂದೆ
ಶ್ರೀ ಚಂದ್ರಶೇಖರ್, ರವರು ದಿನಾಂಕ:
22-02-2018 ರಂದು ಕೊಟ್ಟ
ದೂರಿನ ಮೇರೆಗೆ ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ
ಚಹರೆ: ಕು|| ವಿನುತಾ ಬಿನ್
ಚಂದ್ರಶೇಖರ್, 23 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾಳೆ.
ಮನೆಯಿಂದ ಹೋಗುವಾಗ ಹಸಿರು ಬಣ್ಣದ ಚೂಡಿದಾರ ಧರಿಸಿರುತ್ತಾರೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08174- 232237ಕ್ಕೆ ಸಂಪಕರ್ಿಸುವುದು.
No comments:
Post a Comment