ಪತ್ರಿಕಾ ಪ್ರಕಟಣೆ ದಿನಾಂಕ:21-02-2018
ಟ್ರ್ಯಾಕ್ಟರ್
ಪಲ್ಟಿ, ಚಾಲಕ ಸಾವು
ದಿನಾಂಕ: 20-02-2018 ರಂದು ರಾತ್ರಿ 10-30 ಗಂಟೆ ಸಮಯದಲ್ಲಿ ಸಕಲೇಶಪುರ ತಾಲ್ಲೂಕು, ಬೆಳಗೋಡು ಹೋಬಳಿ, ಹೊಸಕೊಪ್ಪಲು ಗ್ರಾಮದ ವಾಸಿ ಶ್ರೀ ಸ್ವಾಮಿಗೌಡ, ರವರು ಜೊತೆಯಲ್ಲಿ ಕೆಎ-46 2167 ರ ಟ್ರ್ಯಾಕ್ಟರ್ ನಲ್ಲಿ ರಸ್ತೆ ಕಾಮಗಾರಿ ಕೆಲಸಕ್ಕೆಂದು ಕಬ್ಬಿಣದ ರಾಡುಗಳನ್ನು
ತುಂಬಿಕೊಂಡು ಜೊತೆಯಲ್ಲಿ ಸಕಲೇಶಪುರ ತಾಲ್ಲೂಕು, ಹೊನಾಟಲು ಅರಿಣಿ ಗ್ರಾಮದ ವಾಸಿ ಹೂವಣ್ಣ ರವರೊಂದಿಗೆ ಸಕಲೇಶಪುರ ತಾಲ್ಲೂಕು, ಹೆತ್ತೂರು ಹೋಬಳಿ, ಮಂಕನಹಳ್ಳಿ ಗ್ರಾಮದ
ಹತ್ತಿರ ಹೋಗುತ್ತಿದ್ದಾಗ ಟ್ರ್ಯಾಕ್ಟರನ್ನು ಚಾಲಕ
ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ರಸ್ತೆಯ ಪಕ್ಕ ಹೊಂಡಕ್ಕೆ ಪಲ್ಟಿಯಾದ ಪರಿಣಾಮ
ಶ್ರೀ ಸ್ವಾಮಿಗೌಡ ಬಿನ್ ಪ್ರೇಮಗೌಡ, 48 ವರ್ಷ, ಹೊಸಕೊಪ್ಪಲು ಗ್ರಾಮ, ಬೆಳಗೊಡು ಹೋಬಳಿ, ಸಕಲೇಶಪುರ ತಾಲ್ಲೂಕು
ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ಶ್ರೀ ಹೂವಣ್ಣ, ರವರಿಗೆ ಸಣ್ಣ-ಪುಟ್ಟ
ರಕ್ತಗಾಯಗಳಾಗಿರುತ್ತದೆಂದು ರಸ್ತೆ ಕಾಮಗಾರಿ
ಗುತ್ತಿಗೆದಾರರ ಶ್ರೀ ಎ.ಹೆಚ್. ಅಬೂಬ್ಕರ್, ರವರು ಕೊಟ್ಟ ದೂರಿನ ಮೇರೆಗೆ ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ
ತನಿಖೆಯಲ್ಲಿರುತ್ತೆ.
ಹುಡುಗಿ
ಕಾಣೆ
ದಿನಾಂಕ: 17-02-2018 ರಂದು ಮಧ್ಯಾಹ್ನ 1-30 ಗಂಟೆ ಸಮಯದಲ್ಲಿ ಸಕಲೇಶಪುರ ಪಟ್ಟಣದ ಸರಸ್ವತಿಪುರಂ ಬಾಳಗದ್ದೆ ಬಡಾವಣೆ ವಾಸಿ ಶ್ರೀ
ಶಿವಣ್ಣ, ರವರ ಮಗಳು ಕು|| ಸೌಮ್ಯ, ಹಿಮಂತ್ ಸಿಂಗ್ ಗಾರ್ಮೆಂಟ್ಸ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಎಂದಿನಂತೆ ಕೆಲಸಕ್ಕೆ ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಹೋದವಳು ಇದುವರೆವಿಗೂ ವಾಪಸ್
ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು
ಕು|| ಸೌಮ್ಯಳ ತಂದೆ ಶ್ರೀ ಶಿವಣ್ಣ, ರವರು ಕೊಟ್ಟ ದೂರಿನ ಮೇರೆಗೆ ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಕಾಣೆಯಾದ ಹುಡುಗಿಯ ಚಹರೆ: ಕು|| ಸೌಮ್ಯ ಬಿನ್ ಶಿವಣ್ಣ, 23 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಹಸಿರು ಬಣ್ಣದ ಚೂಡಿದಾರ
ಧರಿಸಿರುತ್ತಾರೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08173-
44100 ಕ್ಕೆ ಸಂಪರ್ಕಿಸುವುದು.
ಹುಡುಗಿ
ಕಾಣೆ
ದಿನಾಂಕ:10-02-2018 ರಂದು ಬೆಳಿಗ್ಗೆ 8-30 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಪೇಟೆ ಬಾಣಾವರದ ವಾಸಿ ಶ್ರೀ ಗಯಾಜ್ ಅಹಮದ್, ರವರ ಮಗಳು ಕು|| ಸುಮಯ್ಯತಸ್ಲಿಂ, ಚಿಕ್ಕಿಮಗಳೂರು ಜಿಲ್ಲೆ, ಬಿರೂರು ಕಾಲೇಜಿನಲ್ಲಿ ಡಿಪ್ಲೋಮಾ ವ್ಯಾಸಂಗ ಮಾಡಿಕೊಂಡಿದ್ದು, ಎಂದಿನಂತೆ ಕಾಲೇಜಿಗೆ
ಹೋಗುತ್ತನೆಂದು ಮನೆಯಲ್ಲಿ ಹೇಳಿ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ
ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು
ಕು|| ಸುಮಯ್ಯತಸ್ಲಿಂಳ ತಂದೆ ಗಯಾಜ್ ಅಹಮದ್, ರವರು ಕೊಟ್ಟ ದೂರಿನ ಮೇರೆಗೆ ಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಕಾಣೆಯಾದ ಹುಡುಗಿಯ ಚಹರೆ: ಕು|| ಸುಮಯ್ಯ ತಸ್ಲಿಂ ಬಿನ್ ಗಯಾಜ್ ಅಹಮದ್, 21 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಹಿಂದಿ ಮತ್ತು ಕನ್ನಡ ಭಾಷೆ ಮಾತನಾಡುತ್ತಾಳೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08174-235633ಕ್ಕೆ ಸಂಪರ್ಕಿಸುವುದು.
No comments:
Post a Comment