ಪತ್ರಿಕಾ ಪ್ರಕಟಣೆ ದಿನಾಂಕ: 07-02-2018
ಅಪರಿಚಿತ ವಾಹನ ಬೈಕ್ಗೆ ಡಿಕ್ಕಿ, ಒಂದು ಸಾವು
ಇಬ್ಬರಿಗೆ ಗಾಯ: ದಿನಾಂಕ: 06-02-2018 ರಂದು ಸಂಜೆ 7-00 ಗಂಟೆ ಸಮಯದಲ್ಲಿ ಅರಕಲಗೂಡು ಪಟ್ಟಣದ ಹೆಂಟಗೆರೆ ರಸ್ತೆ, ಸ್ಪೀಪರ್ಸ್ ಕಾಲೋನಿ ವಾಸಿ ಶ್ರೀ ಗೋಪಾಲ, ರವರ ಬಾಬ್ತು ಕೆಎ-13 ಇಎ-6464ರ ಬೈಕ್ನಲ್ಲಿ ಸ್ನೇಹಿತರಾದ ಶ್ರೀ ಮಣಿ, ರವರೊಂದಿಗೆ ಕೆಲಸದ ನಿಮಿತ್ತ ಹೊಳೆನರಸೀಪುರಕ್ಕೆ ಹೋಗಿದ್ದು, ಕೆಲಸ ಮುಗಿಸಿಕೊಂಡು ವಾಪಸ್ ಗ್ರಾಮಕ್ಕೆ ಹೋಗಲು ಅರಕಲಗೂಡು ತಾಲ್ಲೂಕು, ಕಸಬಾ ಹೋಬಳಿ, ಚಿಕ್ಕಗಾವೇನಹಳ್ಳಿ-ದೇವರಹಳ್ಳಿ ರಸ್ತೆ,
ಚಿಕ್ಕಗಾವೇನಹಳ್ಳಿ ಗ್ರಾಮದ ಸಮೀಪದ ರಸ್ತೆ ಎಡಬದಿ
ಬೈಕ್ನ್ನು ನಿಲ್ಲಿಸಿಕೊಂಡು ಹೊಳೆನರಸೀಪುರದ ಶ್ರೀ ಕೃಷ್ಣ, ರವರು ಮಾತನಾಡಿಸುತ್ತಿದ್ದಾಗ ಹಿಂಬದಿಯಿಂದ ಬಂದ ಯಾವುದೂ ವಾಹನದ ಚಾಲಕ ತನ್ನ ವಾಹನ
ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ಗೋಪಾಲ ಬಿನ್
ರಂಗಸ್ವಾಮಿ, 32 ವರ್ಷ, ಸ್ಪೀಪರ್ಸ್ ಕಾಲೋನಿ, ಅರಕಲಗೂಡು ಪಟ್ಟಣ
ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ಗಾಯಗೊಂಡ ಶ್ರೀ
ಕೃಷ್ಣ ಮತ್ತು ಶ್ರೀ ಮಣಿ, ರವರುಗಳಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ
ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಮೃತರ ತಂದೆ ಶ್ರೀ ರಂಗಸ್ವಾಮಿ, ರವರು ಕೊಟ್ಟ ದೂರಿನ ಮೇರೆಗೆ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ
ತನಿಖೆಯಲ್ಲಿರುತ್ತೆ.
ಹುಡುಗಿ ಕಾಣೆ
: ದಿನಾಂಕ: 05-02-2018 ರಂದು ಬೆಳಿಗ್ಗೆ 6-00 ಗಂಟೆ ಸಮಯದಲ್ಲಿ
ಹೊಳೆನರಸೀಪುರ ಪಟ್ಟಣದ ಶಿಯಾಮೊಹಲ್ಲಾದ ವಾಸಿ ಶ್ರೀ ಸೈಯಾದ್ ಜಮೀಲ್, ರವರ ಮಗಳು ಕು|| ಸಿಂಮ್ರಾನ್, ಮನೆಯಿಂದ ಹೊರಗೆ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ
ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ಸಿಂಮ್ರಾನ್ಳ ಅಣ್ಣ ಶ್ರೀ ಸೈಯಾದ್
ಸುಹಿಲ್, ರವರು ಕೊಟ್ಟ ದೂರಿನ ಮೇರೆಗೆ ಹೊಳೆನರಸೀಪುರ
ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕು|| ಸಿಂಮ್ರಾನ್ ಬಿನ್ ಸೈಯಾದ್ ಜಮೀಲ್, 22 ವರ್ಷ, 5 ಅಡಿ ಎತ್ತರ, ಬಿಳಿ ಬಣ್ಣ, ಸಾಧಾರಣ ಮೈಕಟ್ಟು, ಹಿಂದಿ ಮತ್ತು ಕನ್ನಡ ಭಾಷೆ ಮಾತನಾಡುತ್ತಾಳೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08175-
273333 ಕ್ಕೆ ಸಂಪಕರ್ಿಸುವುದು.
No comments:
Post a Comment