* * * * * * HASSAN DISTRICT POLICE

Thursday, February 1, 2018

PRESS NOTE : 01-02-2018

ಪತ್ರಿಕಾ ಪ್ರಕಟಣೆ             ದಿನಾಂಕ: 01-02-2018

ಲಾರಿ ಬೈಕ್ಗೆ ಡಿಕ್ಕಿ, ಬೈಕ್ ಸವಾರನ ಸಾವುದಿನಾಂಕ: 31-01-2018 ರಂದು ಮಧ್ಯಾಹ್ನ 3-00 ಗಂಟೆ ಸಮಯದಲ್ಲಿ ಆಲೂರು ತಾಲ್ಲೂಕು, ಕೆ.ಹೆಚ್.ಕೋಟೆ ಹೋಬಳಿ, ಹರಿಹಳ್ಳಿ ಗ್ರಾಮದ ವಾಸಿ ಶ್ರೀ ಹೆಚ್.ಆರ್. ಸುಬ್ಬಯ್ಯ ರವರ ಬಾಬ್ತು ಕೆಎ-46 ಕೆ-4455 ರ ಬೈಕ್ನಲ್ಲಿ ಕೆ.ಹೊಸಕೋಟೆಗೆ ಹೋಗಲು ಆಲೂರು ತಾಲ್ಲೂಕು, ಕೆಹೆಚ್ಕೋಟೆ ಹೋಬಳಿ, ಹಾಡ್ಯ ಗ್ರಾಮದ ತಿರುವಿನಲ್ಲಿ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಕೆಎ-13 ಎ-3256 ರ ಲಾರಿ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ಹೆಚ್.ಆರ್. ಸುಬ್ಬಯ್ಯ ಬಿನ್ ಲೇಟ್ ರಾಮಯ್ಯ, 40 ವರ್ಷ, ಹರಿಹಳ್ಳಿ ಗ್ರಾಮ, ಕೆಹೆಚ್. ಕೋಟೆ ಹೋಬಳಿ, ಆಲೂರು ತಾಲ್ಲೂಕು, ರವರು ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಮೃತರ ತಮ್ಮ ಶ್ರೀ ಜಗದೀಶ್, ರವರು ಕೊಟ್ಟ ದೂರಿನ ಮೇರೆಗೆ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಹುಡುಗಿ ಕಾಣೆದಿನಾಂಕ: 28-01-2018 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಗಂಡಸಿ ಹೋಬಳಿ, ಮುತ್ತಿಕೆರೆ ಗ್ರಾಮದ ವಾಸಿ ಶ್ರೀ ಲಕ್ಷ್ಮಣಯ್ಯ, ರವರ ಮಗಳು ಕು|| ಶೃತಿ, ಅಕ್ಕನ ಮನೆಗೆ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ಶೃತಿಯ ತಂದೆ ಶ್ರೀ ಲಕ್ಷ್ಮಣಯ್ಯ, ರವರು ಕೊಟ್ಟ ದೂರಿನ ಮೇರೆಗೆ ಗಂಡಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ, ಕಾಣೆಯಾದ ಹುಡುಗಿಯ ಚಹರೆ: ಕು|| ಶೃತಿ ಬಿನ್ ಶ್ರೀ ಲಕ್ಷ್ಮಣಯ್ಯ, 20 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾಳೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08173-220630 ಕ್ಕೆ ಸಂಪರ್ಕಿಸುವುದು.

No comments: